ಆ್ಯಪ್ನಗರ

ಮರ್ಕ್ಯುರಿ ಕಥೆಗೆ ಸಂಭಾಷಣೆ ಡಿಮಾಂಡ್‌ ಮಾಡಲಿಲ್ಲ ಎಂದ ನಿರ್ದೇಶಕ

ಪಿಜ್ಜಾ ಚಿತ್ರ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜ್‌ ನಿರ್ದೇಶನದಲ್ಲಿ ಪ್ರಭುದೇವ ಅಭಿನಯದ ಮರ್ಕ್ಯುರಿ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಸಂಭಾಷಣೆ ಇಲ್ಲದ ಸೈಲಂಟ್‌ ಥ್ರಿಲ್ಲರ್‌ ಚಿತ್ರದ ಬಗ್ಗೆ ನಿರ್ದೇಶಕರು ಮಾತನಾಡಿದ್ದಾರೆ.

Vijaya Karnataka 12 Apr 2018, 5:00 am
ಕಮಲ್‌ ಹಾಸನ್‌ ಅಭಿನಯದ 'ಪುಷ್ಪಕ ವಿಮಾನ' ಚಿತ್ರದ ನಂತರ ಈಗ ಮತ್ತೊಂದು ಮೂಕಿ ಚಿತ್ರ ಕನ್ನಡದಲ್ಲಿ ತೆರೆಗೆ ಬರುತ್ತಿದೆ. ಪ್ರಭುದೇವ ಅಭಿನಯದಲ್ಲಿ ಮರ್ಕ್ಯುರಿ ಚಿತ್ರ ಈ ವಾರ ತೆರೆಗೆ ಬರುತ್ತಿದ್ದು ಕುತೂಹಲ ಮೂಡಿಸಿದೆ. ಇಡೀ ಚಿತ್ರದಲ್ಲಿ ಡೈಲಾಗ್‌ ಇಲ್ಲ. ಚಿತ್ರದ ಟ್ರೇಲರ್‌ ರಿಲೀಸ್‌ ಆಗಿದ್ದು, ಎಲ್ಲರನ್ನು ಬೆಚ್ಚಿ ಬೀಳಿಸಿದೆ. ಈ ಚಿತ್ರದ ಸ್ಕ್ರೀನ್‌ ಪ್ಲೇ ಬಿಗಿಯಾಗಿರುವುದರಿಂದ, ಮಾತುಗಳ ಅಗತ್ಯವೇ ಇಲ್ಲ ಎಂದಿದ್ದಾರೆ ನಿರ್ದೇಶಕ ಕಾರ್ತಿಕ್‌. ಇವರು ಹಿಂದೆ ಪಿಜ್ಜಾ, ಜಿಗರ್‌ತಂಡ ಚಿತ್ರಗಳನ್ನು ನಿರ್ದೇಶಿಸಿದ್ದರು.
Vijaya Karnataka Web mercury1


'ಚಿತ್ರತಂಡದ ಮುಂದೆ ಸ್ಕ್ರಿಪ್ಟ್‌ ಓದಿದಾಗ ಅವರಿಗೂ ಮಾತಿಲ್ಲದಿದ್ದರೂ ಕುತೂಹಲಕಾರಿಯಾಗಿ ಚಿತ್ರ ನೋಡಿಸಿಕೊಂಡು ಹೋಗುತ್ತದೆ ಎನ್ನಿಸಿತು. ಸೀಟಿನ ತುದಿಯಲ್ಲಿ ಕೂತು ನೋಡುವಂತೆ ಮಾಡಲಿದೆ ಮರ್ಕ್ಯುರಿ' ಎಂದಿದ್ದಾರೆ ಕಾರ್ತಿಕ್‌.

ಮಾತುಗಳ ಬದಲಿಗೆ ಛಾಯಾಗ್ರಹಣವೇ ಕಥೆಯನ್ನು ಹೇಳಲಿದೆ ಎಂದಿದ್ದಾರೆ ಅವರು. 'ಸೈಲಂಟ್‌ ಸಿನಿಮಾ ಆಗಿರುವುದರಿಂದ ಛಾಯಾಗ್ರಹಣದ ಮೂಲಕವೇ ಹೊಸ ಅನುಭವ ಸಿಗುತ್ತದೆ. ಅಲ್ಲದೆ, ಶಬ್ಧ ವಿನ್ಯಾಸ ಪ್ರಮುಖ ಪಾತ್ರ ವಹಿಸಿದೆ. ಸ್ಟಂಟ್‌ ಸನ್ನಿವೇಶಗಳು ಅತ್ಯಂತ ಸಹಜವಾಗಿ ಮತ್ತು ಕಲಾತ್ಮಕವಾಗಿ ಮೂಡಿಬಂದಿವೆ. ಇವೆಲ್ಲದರ ಕಾಂಬಿನೇಷನ್‌ನಲ್ಲಿ ಕಥೆಯನ್ನು ಹೇಳಿದ್ದೇವೆ' ಎನ್ನುತ್ತಾರೆ ಅವರು.

'ಈ ಚಿತ್ರದ ಕಥೆಗೆ ಸಂಭಾಷಣೆ ಬೇಕಿರಲಿಲ್ಲ. ಥ್ರಿಲ್ಲರ್‌ ಜತೆಗೆ ಅತ್ಯಂತ ಭಾವುಕತೆಯ ಸಿನಿಮಾ ಇದಾಗಿದೆ. ಇದು ನಮಗೆ ಚಾಲೆಂಜಿಂಗ್‌ ಆಗಿತ್ತು. ಪುಷ್ಪಕ ವಿಮಾನ ಚಿತ್ರ ಸ್ಫೂರ್ತಿ ನೀಡಿದೆ. ಇವೆರಡೂ ಚಿತ್ರಗಳ ನಡುವೆ ವ್ಯತ್ಯಾಸವೆಂದರೆ, ಅದು ಹ್ಯೂಮರಸ್‌ ಚಿತ್ರ. ಮಕ್ರ್ಯುರಿ ಥ್ರಿಲ್ಲರ್‌ ಸಿನಿಮಾ' ಎಂದು ಅವರು ಹೇಳಿದ್ದಾರೆ.

ಕಾರ್ತಿಕ್‌ ಕನ್ನಡ ಚಿತ್ರರಂಗವನ್ನು ಗಮನಿಸುತ್ತಿದುದಾಗಿ ಹೇಳಿದ್ದು, ಹೊಸ ಅಲೆಯೊಂದು ಇಲ್ಲಿ ಶುರುವಾಗಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಪವನ್‌ ಕುಮಾರ್‌, ರಕ್ಷಿತ್‌ ಶೆಟ್ಟಿ, ಹೇಮಂತ್‌ ರಾವ್‌ ಮತ್ತಿತರ ನಿರ್ದೇಶಕರ ಚಿತ್ರಗಳು ಹೊಸ ಐಡಿಯಾದಿಂದ ಕೂಡಿವೆ' ಎಂದು ಪ್ರಶಂಸಿಸಿದ್ದಾರೆ. ಚಿತ್ರದ ವಿತರಣೆಯನ್ನು ನಟ ರಕ್ಷಿತ್‌ ಶೆಟ್ಟಿ ಮಾಡುತ್ತಿದ್ದಾರೆ. ಪುಷ್ಕರ್‌ ಮಲ್ಲಿಕಾರ್ಜುನ್‌ ಚಿತ್ರವನ್ನು ಪ್ರಮೋಟ್‌ ಮಾಡುತ್ತಿದ್ದಾರೆ.
ಮರ್ಕ್ಯುರಿಯಲ್ಲಿ ಡೈಲಾಗ್‌ ಇಲ್ಲದಿರುವುದರಿಂದ ಕನ್ನಡ ಟೈಟಲ್ಸ್‌ನಲ್ಲೇ ತೆರೆಗೆ ತರುತ್ತಿದ್ದೇವೆ. ಸೈಲೆಂಟ್‌ ಥ್ರಿಲ್ಲರ್‌ ಚಿತ್ರ ಪ್ರೇಕ್ಷಕನಿಗೆ ಹೊಸ ಅನುಭವ ನೀಡಲಿದೆ.
ಪುಷ್ಕರ್‌ ಮಲ್ಲಿಕಾರ್ಜುನ್‌, ಚಿತ್ರ ನಿರ್ಮಾಪಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌