ಗಾಂಧಿ ಜಯಂತಿಗೆ ಬಂಗಾರದಂಥ ಉಡುಗೊರೆ ಕೊಟ್ಟ ಕನ್ನಡ ಚಿತ್ರರಂಗ
ಇಂದು ಗಾಂಧಿ ಜಯಂತಿ. ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರಿಟಿಗಳು ಸೇರಿದಂತೆ ಹಲವರು ಗಾಂಧಿ ಜಯಂತಿಯ ಶುಭಾಶಯ ತಿಳಿಸಿದ್ದಾರೆ. ಕನ್ನಡ ಚಿತ್ರರಂಗ ಈ ದಿನಕ್ಕೆ ಒಂದೊಳ್ಳೆಯ ಉಡುಗೊರೆ ನೀಡಿದೆ.
Vijaya Karnataka Web 2 Oct 2019, 6:07 pm
ಪಿ.ಶೇಷಾದ್ರಿ ಅವರು 'ಮಹಾತ್ಮಾ ಗಾಂಧೀಜಿ' ಕುರಿತ ಸಿನಿಮಾ ಮಾಡುತ್ತಿರುವುದು ಹಳೆಯ ವಿಚಾರ. ಗುಜರಾತ್ನಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿತ್ತು. ಗಾಂಧೀಜಿಯ ಬಾಲ್ಯದ ಪಾತ್ರವನ್ನು ಇಬ್ಬರು ಬಾಲಕರು ನಟಿಸಿದ್ದಾರೆ.
ಈ ಚಿತ್ರ ಟ್ರೇಲರ್ ಇಂದು ರಿಲೀಸ್ ಆಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಆಡಿಟೋರಿಯಂನಲ್ಲಿ 1500 ಸರ್ಕಾರಿ ಶಾಲಾ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲಾಗಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 14ನೇ ವಯಸ್ಸಿನಲ್ಲಿ ಬಾಪು ಸುಳ್ಳು ಹೇಳಿದ್ದು, ಧೂಮಪಾನ ಮಾಡಿದ್ದು, ಮಾಂಸಾಹಾರ ಸೇವನೆ ಮಾಡಿದ್ದು, ವೇಶ್ಯೆ ಮನೆಗೆ ಹೋಗಿದ್ದು, ಕೊನೆಗೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅಪ್ಪನಿಗೆ ಪತ್ರ ಬರೆದಿದ್ದು, ಅಪ್ಪ ಬರೆದ ಪತ್ರ ನೋಡಿ ಕಣ್ಣೀರು ಹಾಕಿದ್ದು, ಅವರ ವಿವಾಹದ ಜೊತೆಗೆ ಮುಂದಿನ ಜೀವನದ ಬಗ್ಗೆ ಕೂಡ ಈ ಚಿತ್ರ ಒಳಗೊಂಡಿದೆ. ಈ ಚಿತ್ರ ಕನ್ನಡ, ಹಿಂದಿ, ಇಂಗ್ಲಿಷ್ನಲ್ಲಿ ತೆರೆ ಕಾಣುತ್ತಿದೆ.
ಮೋನಿಯಾ ಪಾತ್ರದಲ್ಲಿ ಮೈಸೂರಿನ ಪರಮಸ್ವಾಮಿ, ಮೋಹನದಾಸ ಪಾತ್ರದಲ್ಲಿ ಬೆಂಗಳೂರಿನ ಸಮರ್ಥ ನಟಿಸಿದ್ದಾರೆ. ಪುತಲಿಬಾಯಿ ಪಾತ್ರದಲ್ಲಿ ಶ್ರುತಿ ಕರಷ್ಭಣ, ಕರಮ್ಚಂದ್ ಗಾಂಧಿ ಪಾತ್ರದಲ್ಲಿ ಅನಂತ್ ಮಹಾದೇವನ್, ಬಯೋಸ್ಕೋಪ್ ವಾಲಾ ಪಾತ್ರದಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಬಿ.ಕೆ.ಮರಿಯಪ್ಪ ಹಾಸ್ಟೆಲ್ನಲ್ಲಿ ಒಳಾಂಗಣ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ.
ಗುಜರಾತ್ನ ಪೋರಬಂದರಿನಲ್ಲಿರುವ ಮನೆ 'ಕೀರ್ತಿ ಮಂದಿರ' ಮತ್ತು ಬಾಲ್ಯದ ಕೆಲ ವರ್ಷಗಳನ್ನು ಕಳೆದ ಮನೆ ರಾಜ್ಕೋಟ್ನ 'ಕಾಬಾ ಗಾಂಧಿ ನೆ ಡೇಲಾ'ದಲ್ಲೂ ಕೂಡ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರಕ್ಕೆ ಭಾಸ್ಕರ್ ಛಾಯಾಗ್ರಹಣವಿದೆ. ಕೆಂಪರಾಜು ಸಂಕಲನ ಮಾಡಿದ್ದಾರೆ. ಪ್ರವೀಣ್ ಗೋಡ್ಖಿಂಡಿ ಸಂಗೀತ ನೀಡಿದ್ದಾರೆ. 'ಮಿತ್ರ' ಚಿತ್ರದ 15 ಮಂದಿ ನಿರ್ಮಾಪಕರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.
ಈ ಚಿತ್ರ ಟ್ರೇಲರ್ ಇಂದು ರಿಲೀಸ್ ಆಗಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಆಡಿಟೋರಿಯಂನಲ್ಲಿ 1500 ಸರ್ಕಾರಿ ಶಾಲಾ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲಾಗಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 14ನೇ ವಯಸ್ಸಿನಲ್ಲಿ ಬಾಪು ಸುಳ್ಳು ಹೇಳಿದ್ದು, ಧೂಮಪಾನ ಮಾಡಿದ್ದು, ಮಾಂಸಾಹಾರ ಸೇವನೆ ಮಾಡಿದ್ದು, ವೇಶ್ಯೆ ಮನೆಗೆ ಹೋಗಿದ್ದು, ಕೊನೆಗೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅಪ್ಪನಿಗೆ ಪತ್ರ ಬರೆದಿದ್ದು, ಅಪ್ಪ ಬರೆದ ಪತ್ರ ನೋಡಿ ಕಣ್ಣೀರು ಹಾಕಿದ್ದು, ಅವರ ವಿವಾಹದ ಜೊತೆಗೆ ಮುಂದಿನ ಜೀವನದ ಬಗ್ಗೆ ಕೂಡ ಈ ಚಿತ್ರ ಒಳಗೊಂಡಿದೆ. ಈ ಚಿತ್ರ ಕನ್ನಡ, ಹಿಂದಿ, ಇಂಗ್ಲಿಷ್ನಲ್ಲಿ ತೆರೆ ಕಾಣುತ್ತಿದೆ.
ಮೋನಿಯಾ ಪಾತ್ರದಲ್ಲಿ ಮೈಸೂರಿನ ಪರಮಸ್ವಾಮಿ, ಮೋಹನದಾಸ ಪಾತ್ರದಲ್ಲಿ ಬೆಂಗಳೂರಿನ ಸಮರ್ಥ ನಟಿಸಿದ್ದಾರೆ. ಪುತಲಿಬಾಯಿ ಪಾತ್ರದಲ್ಲಿ ಶ್ರುತಿ ಕರಷ್ಭಣ, ಕರಮ್ಚಂದ್ ಗಾಂಧಿ ಪಾತ್ರದಲ್ಲಿ ಅನಂತ್ ಮಹಾದೇವನ್, ಬಯೋಸ್ಕೋಪ್ ವಾಲಾ ಪಾತ್ರದಲ್ಲಿ ದತ್ತಣ್ಣ ಅಭಿನಯಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಬಿ.ಕೆ.ಮರಿಯಪ್ಪ ಹಾಸ್ಟೆಲ್ನಲ್ಲಿ ಒಳಾಂಗಣ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ.
ಗುಜರಾತ್ನ ಪೋರಬಂದರಿನಲ್ಲಿರುವ ಮನೆ 'ಕೀರ್ತಿ ಮಂದಿರ' ಮತ್ತು ಬಾಲ್ಯದ ಕೆಲ ವರ್ಷಗಳನ್ನು ಕಳೆದ ಮನೆ ರಾಜ್ಕೋಟ್ನ 'ಕಾಬಾ ಗಾಂಧಿ ನೆ ಡೇಲಾ'ದಲ್ಲೂ ಕೂಡ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರಕ್ಕೆ ಭಾಸ್ಕರ್ ಛಾಯಾಗ್ರಹಣವಿದೆ. ಕೆಂಪರಾಜು ಸಂಕಲನ ಮಾಡಿದ್ದಾರೆ. ಪ್ರವೀಣ್ ಗೋಡ್ಖಿಂಡಿ ಸಂಗೀತ ನೀಡಿದ್ದಾರೆ. 'ಮಿತ್ರ' ಚಿತ್ರದ 15 ಮಂದಿ ನಿರ್ಮಾಪಕರು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ.