ಆ್ಯಪ್ನಗರ

ನೈಜ ಘಟನೆಗೆ ಸುದೀಪ್ ಮೆಚ್ಚುಗೆ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಎಟಿಎಂ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡಿದ್ದಾರೆ ನಿರ್ದೇಶಕ ಅಮರ್‌. ನೈಜ ಘಟನೆಗೆ ಒಂದಷ್ಟು ಸಿನಿಮಯ ಸ್ಪರ್ಶವನ್ನೂ ಅವರು ನೀಡಿದ್ದಾರಂತೆ.

Vijaya Karnataka Web 23 Mar 2018, 5:00 am
ಐದು ವರ್ಷದ ಹಿಂದೆ ಬೆಂಗಳೂರಿನ ಎಟಿಎಂವೊಂದರಲ್ಲಿ ಮಹಿಳೆಯ ಮೇಲೆ ದಾಳಿ ಮಾಡಲಾಗಿತ್ತು. ಈ ಘಟನೆಗೆ ರಾಜ್ಯವೇ ಬೆಚ್ಚಿ ಬಿದ್ದಿತ್ತು. ಈ ನೈಜ ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ ನಿರ್ದೇಶಕ ಅಮರ್‌. ಘಟನೆಯ ಜಾಡು ಹಿಡಿದು, ಅಲ್ಲಷ್ಟು ಸಿನಿಮಯ ಸನ್ನಿವೇಶಗಳನ್ನು ಸೇರಿಸಿ, ಚಿತ್ರಕಥೆ ಹೆಣೆದಿದ್ದಾರೆ. ಮೊನ್ನೆಯಷ್ಟೇ ಈ ಸಿನಿಮಾದ ಟ್ರೈಲರ್‌ ಅನ್ನು ಸುದೀಪ್‌ ರಿಲೀಸ್‌ ಮಾಡಿದ್ದು, ಆಯ್ಕೆ ಮಾಡಿಕೊಂಡಿರುವ ಕಥೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
Vijaya Karnataka Web movie on atm attack in bengaluru
ನೈಜ ಘಟನೆಗೆ ಸುದೀಪ್ ಮೆಚ್ಚುಗೆ


ಸಿನಿಮಾ ತನ್ನ ಶೀರ್ಷಿಕೆಯಿಂದಾಗಿಯೇ ಗಮನ ಸೆಳೆದಿದೆ. ಎಟಿಎಂ ಅಂದರೆ ಅಟೆಂ ಟು ಮರ್ಡರ್‌ ಅಂತಾರೆ ನಿರ್ದೇಶಕರು. 'ಎಟಿಎಂನಲ್ಲಿ ನಡೆದ ಘಟನೆಯು ಸಮಾಜದ ಮೇಲೆ ಹೇಗೆ ಪರಿಣಾಮ ಬೀರಿತು ಮತ್ತು ಕೆಲ ಮುಗ್ಧರು ಹೇಗೆ ತೊಂದರೆಯಲ್ಲಿ ಸಿಲುಕಿಕೊಂಡರು ಎನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇನೆ. ಅದರ ಜತೆಗೆ ಲವ್‌ಸ್ಟೋರಿ ಕೂಡ ಇದೆ' ಅಂತಾರೆ ನಿರ್ದೇಶಕರು.

ಮುಗ್ಧ ಕ್ಯಾಬ್‌ ಚಾಲಕನಾಗಿ ಕಿರುತೆರೆ ನಟ ಚಂದೂ ಕಾಣಿಸಿಕೊಂಡಿದ್ದರೆ, ಹೇಮಲತಾ ಪತ್ರಕರ್ತೆಯಾಗಿ ನಟಿಸಿದ್ದಾರೆ. ಶೋಭಿತಾ ಅವರದ್ದು ಐಟಿ ಉದ್ಯೋಗಿ ಪಾತ್ರವಾದರೂ, ಸಖತ್‌ ಬೋಲ್ಡ್‌ ಆಗಿ ಕಂಡಿದ್ದಾರಂತೆ. ಸೂರ್ಯ ಖಳನಟನಾಗಿ ನಟಿಸಿದ್ದು, ಈ ಚಿತ್ರಕ್ಕಾಗಿ ಒಂದು ವರ್ಷ ಗಡ್ಡಕ್ಕೆ ಕತ್ತರಿ ಹಾಕಿಲ್ಲವಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌