ಆ್ಯಪ್ನಗರ

'ಕುರುಕ್ಷೇತ್ರ'ಕ್ಕೆ ವಿಶೇಷ ಸ್ಥಾನಮಾನ ನೀಡಿದ 'ಯಜಮಾನ'

ಮೊದಲು ರಿಲೀಸ್ ಆಗುವುದು ಯಜಮಾನ. ಆದರೆ ಮೊದಲು ಸೆಟ್ಟೇರಿದ್ದು ಮಾತ್ರ ಕುರುಕ್ಷೇತ್ರ. ಹಾಗಾಗಿ ನನ್ನ 50ನೇ ಸಿನಿಮಾ ಕುರುಕ್ಷೇತ್ರ ಎಂದಿದ್ದಾರೆ. ಇದೊಂದು ಪೌರಾಣಿಕ ಚಿತ್ರವಾದ ಕಾರಣ ಶೂಟಿಂಗ್‌ಗೆ ಸಾಕಷ್ಟು ಸಮಯ ತೆಗೆದುಕೊಂಡಿದೆ. ಶೂಟಿಂಗ್, ಗ್ರಾಫಿಕ್ಸ್, ಮೇಕಿಂಗ್ ಎಲ್ಲವೂ ಅದ್ದೂರಿಯಾಗಿರುವ ಕಾರಣ ಸಾಕಷ್ಟು ಸಮಯ ತೆಗೆದುಕೊಂಡಿದೆ. ಸರಿಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡಿದೆ.

Vijaya Karnataka Web 18 Feb 2019, 7:08 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಯಾವುದಾಗಲಿದೆ ಎಂಬ ಚರ್ಚೆಗೆ ಅಂತ್ಯ ಹಾಡಿದ್ದಾರೆ ಸ್ವತಃ ದರ್ಶನ್. ಈ ಹಿಂದೆ ಯಜಮಾನ ಸಿನಿಮಾ 50ನೇ ಸಿನಿಮಾ ಎನ್ನಲಾಗಿತ್ತು. ಆದರೆ ದರ್ಶನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮುನಿರತ್ನ ಕುರುಕ್ಷೇತ್ರ 50ನೇ ಸಿನಿಮಾ ಆದರೆ ಯಜಮಾನ 51ನೇ ಸಿನಿಮಾ ಆಗಲಿದೆ ಎಂದು ದರ್ಶನ್ ಹೇಳಿದ್ದಾರೆ.
Vijaya Karnataka Web kurukshetra


ಮೊದಲು ರಿಲೀಸ್ ಆಗುವುದು ಯಜಮಾನ. ಆದರೆ ಮೊದಲು ಸೆಟ್ಟೇರಿದ್ದು ಮಾತ್ರ ಕುರುಕ್ಷೇತ್ರ. ಹಾಗಾಗಿ ನನ್ನ 50ನೇ ಸಿನಿಮಾ ಕುರುಕ್ಷೇತ್ರ ಎಂದಿದ್ದಾರೆ. ಇದೊಂದು ಪೌರಾಣಿಕ ಚಿತ್ರವಾದ ಕಾರಣ ಶೂಟಿಂಗ್‌ಗೆ ಸಾಕಷ್ಟು ಸಮಯ ತೆಗೆದುಕೊಂಡಿದೆ. ಶೂಟಿಂಗ್, ಗ್ರಾಫಿಕ್ಸ್, ಮೇಕಿಂಗ್ ಎಲ್ಲವೂ ಅದ್ದೂರಿಯಾಗಿರುವ ಕಾರಣ ಸಾಕಷ್ಟು ಸಮಯ ತೆಗೆದುಕೊಂಡಿದೆ. ಸರಿಸುಮಾರು ಒಂದೂವರೆ ವರ್ಷ ಸಮಯ ತೆಗೆದುಕೊಂಡಿದೆ. ಆದರೂ ಇನ್ನೂ ರಿಲೀಸ್‌ಗೆ ರೆಡಿಯಾಗಿಲ್ಲ. ಈ ವಿಚಾರ ನನ್ನ ತಲೆಯಲ್ಲೂ ಕೊರೆಯುತ್ತಿತ್ತು. ಈ ಬಗ್ಗೆ ಮಾತನಾಡಬೇಕು ಎನ್ನಿಸಿತು. ಹಾಗಾಗಿ ಈ ಬಗ್ಗೆ ಮಾತನಾಡುವಂತಾಯಿತು ಎಂದಿದ್ದಾರೆ ದರ್ಶನ್.

ಯಾವುದೇ ಸಿನಿಮಾಗೆ ನಂಬರ್ ಮುಖ್ಯವಲ್ಲ. ಆ ಸಿನಿಮಾಗೆ ಎಷ್ಟು ಶ್ರಮ ಹಾಕಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಯಜಮಾನ ಚಿತ್ರದ ಟ್ರೇಲರ್‌ಗೆ ದೇಶದಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದಾದ್ಯಂತೆ ಟ್ರೆಂಡ್ ಸೃಷ್ಟಿಸಿದೆ. ಇಷ್ಟೆಲ್ಲಾ ನಿರೀಕ್ಷಿಸಿರಲಿಲ್ಲ ಎಂದು ದರ್ಶನ್ ಹೇಳಿದ್ದಾರೆ. ವಿ ಹರಿಕೃಷ್ಣ ನಿರ್ದೇಶನದ ಯಜಮಾನ ಸಿನಿಮಾ ಮಾರ್ಚ್ 1ಕ್ಕೆ ತೆರೆಕಾಣುತ್ತಿದೆ.

ಕಳೆದ ವರ್ಷ ರೆಬೆಲ್ ಸ್ಟಾರ್ ಅಂಬರೀಶ್ ನಿಧನರಾದ ಹಿನ್ನೆಲೆಯಲ್ಲಿ ಈ ಸಲ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲ್ಲ ಎಂದು ನಟ ದರ್ಶನ್ ಹೇಳಿದ್ದರು. "ಅಭಿಮಾನಿಗಳು ತಂದಿರುವ ಸಕ್ಕರೆ, ಅಕ್ಕಿ ಬೇಳೆ ಹಾಗೂ ಬಟ್ಟೆಗಳನ್ನು ಕೆಲವು ಅನಾಥಾಶ್ರಮಗಳಿಗೆ ಕೊಟ್ಟು ಬರಲಿದ್ದೇವೆ. ಹೀಗೆ ಬಡವರಿಗೆ, ಅನಾಥರಿಗೆ ಅನುಕೂಲಕರ ಮಾಡಿಕೊಡುವ ಅರ್ಥಪೂರ್ಣ ಹುಟ್ಟುಹಬ್ಬದ ಅಚರಣೆಗೆ ನಾನು ಒತ್ತು ನೀಡಲಿದ್ದೇನೆ. ಹೀಗೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸುವ ನನ್ನ ಅಭಿಮಾನಿಗಳ ಮನಸ್ಥಿತಿಗೆ ನಾನು ನಿಜವಾಗಿಯೂ ಹೆಮ್ಮೆ ಪಡುತ್ತಿದ್ದೇನೆ" ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌