ಆ್ಯಪ್ನಗರ

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎಲ್ ಎನ್ ಶಾಸ್ತ್ರಿ ವಿಧಿವಶ

ಸ್ಯಾಂಡಲ್‌ವುಡ್‌ನ ಜನಪ್ರಿಯ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಲ್ ಎನ್ ಶಾಸ್ತ್ರಿ (ಲಕ್ಷ್ಮಿ ನರಸಿಂಹ ಶಾಸ್ತ್ರಿ) ಇಂದು ಬೆಂಗಳೂರಿನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಶ್ರೀಯುತರು ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

Vijaya Karnataka Web 30 Aug 2017, 6:13 pm
ಸ್ಯಾಂಡಲ್‌ವುಡ್‌ನ ಜನಪ್ರಿಯ ಹಿನ್ನೆಲೆ ಗಾಯಕ ಹಾಗೂ ಸಂಗೀತ ನಿರ್ದೇಶಕ ಎಲ್ ಎನ್ ಶಾಸ್ತ್ರಿ (ಲಕ್ಷ್ಮಿ ನರಸಿಂಹ ಶಾಸ್ತ್ರಿ) ಇಂದು ಬೆಂಗಳೂರಿನ ಸ್ವಗೃಹದಲ್ಲಿ ವಿಧಿವಶರಾಗಿದ್ದಾರೆ. ಶ್ರೀಯುತರು ಕರುಳು ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.
Vijaya Karnataka Web music director l n shastry passes away
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಎಲ್ ಎನ್ ಶಾಸ್ತ್ರಿ ವಿಧಿವಶ


ಬುಧವಾರ ಮಧ್ಯಾಹ್ನ ಅವರು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಸಂಗೀತ ನಿರ್ದೇಶಕರಾಗಿ, ಹಿನ್ನೆಲೆ ಗಾಯಕರಾಗಿ ಕ್ರಿಯಾಶೀಲರಾಗಿದ್ದ ಶಾಸ್ತ್ರಿ 1996ರ 'ಅಜಗಜಾಂತರ' ಚಿತ್ರದ ಮೂಲಕ ಹಾಡಲು ಆರಂಭಿಸಿದ ಅವರ ಕಂಠಸಿರಿಯಲ್ಲಿ 3000ಕ್ಕೂ ಹೆಚ್ಚು ಹಾಡುಗಳು ಹೊರಹೊಮ್ಮಿವೆ.

ಇದುವರೆಗೆ 25ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ ಎಲ್ ಎನ್ ಶಾಸ್ತ್ರಿ. ಇವರಿಗೆ ಅಪಾರ ಹೆಸರು ತಂದುಕೊಟ್ಟಂತಹ ಚಿತ್ರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ 'ಜನುಮದ ಜೋಡಿ' (1996). ಆ ಚಿತ್ರದಲ್ಲಿನ 'ಕೋಲು ಮಂಡೆ ಜಂಗಮ ದೇವರು' ಹಾಡು ಎಷ್ಟೆಲ್ಲಾ ಜನಪ್ರಿಯವಾಯಿತು ಎಂದು ಬಿಡಿಸಿ ಹೇಳಬೇಕಾಗಿಲ್ಲ. ಈ ಹಾಡಿಗಾಗಿ ಅತ್ಯುತ್ತಮ ಗಾಯಕ ರಾಜ್ಯ ಪ್ರಶಸ್ತಿಗೂ ಪಾತ್ರರಾದರು. [ ಕರುಳು ಕ್ಯಾನ್ಸರ್‌ನಿಂದ ಹಾಸಿಗೆ ಹಿಡಿದ ಕನ್ನಡದ ಗಾಯಕ ಎಲ್ ಎನ್ ಶಾಸ್ತ್ರಿ]

ಸಂಗೀತ ನಿರ್ದೇಶಕರಾದ ಹಂಸಲೇಖ ಹಾಗೂ ವಿ ಮನೋಹರ್ ಅವರ ಸಹಾಯಕರಾಗಿಯೂ ಶಾಸ್ತ್ರಿ ಅವರು ಕೆಲಸ ಮಾಡಿದ್ದಾರೆ. ತೊಂಬತ್ತರ ದಶಕದಲ್ಲಿ ಶಾಸ್ತ್ರಿ ಅವರು ಹೆಚ್ಚಾಗಿ ಹಿನ್ನೆಲೆ ಗಾಯಕರಾಗಿ ಘಟಾನುಘಟಿ ಗಾಯಕರಾದ ಎಸ್ ಪಿ ಬಾಲಸುಬ್ರಹ್ಮಣ್ಯ ಸೇರಿದಂತೆ ಹಲವರ ಜತೆ ಹಾಡುತ್ತಿದ್ದರು. ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಬಂದಂತಹ 'ಅಜಗಜಾಂತರ' (1991) ಚಿತ್ರದಲ್ಲಿ ಬಾಲಸುಬ್ರಹ್ಮಣ್ಯಂ ಜತೆ 'ಲವ್ ಲವ್ ಲವೇ' ಹಾಡು ಹಾಡಲು ಅವಕಾಶ ಸಿಕ್ಕಿತು.



ಬಳಿಕ ವಿ ಮನೋಹರ್ ಅವರ ಜತೆ ಹಲವಾರು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದರು. ಮುಖ್ಯವಾಗಿ ನವರಸನಾಯಕ ಜಗ್ಗೇಶ್ ಅವರ 'ಭಂಡ ನನ್ನ ಗಂಡ' (1992) ಚಿತ್ರದ 'ಅಂತಿಂತ ಗಂಡು ನಾನಲ್ಲ', 'ಸೂಪರ್ ನನ್ ಮಗ' (1992), 'ತರ್ಲೆ ನನ್ ಮಗ' (1992), ಶ್ (1993) ಚಿತ್ರದ 'ಅವನಲ್ಲಿ ಇವಳಿಲ್ಲಿ' ಹಾಡುಗಳು ಶಾಸ್ತ್ರಿ ಅವರನ್ನು ಇನ್ನಷ್ಟು ಜನಪ್ರಿಯಗೊಳಿಸಿದವು.

1998ರಲ್ಲಿ ಬಂದಂತಹ 'ಕನಸಲು ನೀನೆ ಮನಸಲು ನೀನೆ' ಚಿತ್ರದಿಂದ ಶಾಸ್ತ್ರಿ ಅವರು ಪೂರ್ಣಪ್ರಮಾಣದ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದರು. ರವಿಚಂದ್ರನ್ ಅಭಿನಯದ 'ರವಿಮಾಮ' ಸಿನಿಮಾದ ಹಾಡುಗಳಿಗೂ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಯಿತು..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌