ಆ್ಯಪ್ನಗರ

ನಾನು ಕೂಡ ’ಸಮಾಜ ವಿರೋಧಿ’: ಕಮಲ ಹಾಸನ್

ಪ್ರತಿಭಟನೆಕಾರರನ್ನು ನೀವು ಸಮಾಜ ವಿರೋಧಿ ಎಂದು ಕರೆಯುವುವಾದರೆ ನಾನೂ ಸಹ ಸಮಾಜ ವಿರೋಧಿ" ಎಂದಿದ್ದಾರೆ. "ನಾನು ಗಾಂಧಿಯವರ ವಿದ್ಯಾರ್ಥಿ. ಪ್ರತಿಭಟೆಗಳಲ್ಲಿ ಒಂದು ಪಾತ್ರ ಇರಬೇಕು, ಅದು ಗಾಂಧೀಜಿಯವರಲ್ಲಿತ್ತು.

Samayam Tamil 4 Jun 2018, 5:44 pm
ತಮಿಳುನಾಡಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದಂತೆ ನಟ ರಜನಿಕಾಂತ್ ಅವರಿಗಿಂತಲೂ ಭಿನ್ನ ದೃಷ್ಟಿಕೋನ ನನ್ನದು ಎಂದಿದ್ದಾರೆ ನಟ ಕಮಲ ಹಾಸನ್. ಕಾವೇರಿ ಜಲವಿವಾದದ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗುವ ಸಲುವಾಗಿ ಚೆನ್ನೈ ವಿಮಾನ ನಿಲ್ದಾಣದಿಂದ ಹೊರಡುವ ಸಮಯದಲ್ಲಿ ಸುದ್ದಿಗಾರರ ಜತೆಗೆ ಮಾತನಾಡುತ್ತಿದ್ದರು.
Vijaya Karnataka Web kamal-haasan


"ಪ್ರತಿಭಟನೆಕಾರರನ್ನು ನೀವು ಸಮಾಜ ವಿರೋಧಿ ಎಂದು ಕರೆಯುವುವಾದರೆ ನಾನೂ ಸಹ ಸಮಾಜ ವಿರೋಧಿ" ಎಂದಿದ್ದಾರೆ. "ನಾನು ಗಾಂಧಿಯವರ ವಿದ್ಯಾರ್ಥಿ. ಪ್ರತಿಭಟನೆಗಳಲ್ಲಿ ಒಂದು ಪಾತ್ರ ಇರಬೇಕು, ಅದು ಗಾಂಧೀಜಿಯವರಲ್ಲಿತ್ತು. ಪ್ರತಿಭಟನೆ ಎಂದರೆ ಗನ್‌ಗಳು, ಚಾಕುಗಳಿಂದ ಹೋರಾಡುವುದಲ್ಲ. ಏನೇ ಸಮಸ್ಯೆ ಬರಲಿ ತೆರೆದ ಹೃದಯದಿಂದ ಜನ ಹೋರಾಡುವಂತಿರಬೇಕು" ಎಂದಿದ್ದಾರೆ.

ಒಂದು ವೇಳೆ ಪ್ರತಿಭಟನೆಯಲ್ಲಿ ಹಿಂಸಾಚಾರ ಇದ್ದರೆ, ಅದನ್ನು ಆದಷ್ಟು ಕಡಿಮೆ ಮಾಡಿಕೊಳ್ಳಬೇಕು. ಆದರೆ ಪ್ರತಿಭಟನೆಯನ್ನು ಸಡಿಲಗೊಳಿಸುವುದಾಗಲಿ, ಅದನ್ನು ನಿಲ್ಲಿಸುವುದಾಗಲಿ ಮಾಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ.

"ಎಲ್ಲಾ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ಮಾಡುತ್ತಾ ಹೋದರೆ ತಮಿಳುನಾಡು ಮಸಣವಾಗುತ್ತದೆ. ಎಲ್ಲದಕ್ಕೂ ಪ್ರತಿಭಟನೆಗಳೇ ಪರಿಹಾರವಲ್ಲ" ಎಂದಿದ್ದರು ರಜನಿಕಾಂತ್. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಮಲ್ ಹಾಸನ್ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ. ಸ್ಟರಿಲೈಟ್ ಕಂಪೆನಿ ಎಲ್ಲಾ ಮಿತಿಗಳನ್ನೂ ದಾಟಿತ್ತು. ತಮಿಳುನಾಡಿಗೆ ಬೃಹತ್ ಉದ್ದಿಮೆಗಳು ಬರಬೇಕು, ಆದರೆ ರಾಜ್ಯದ ನೀತಿ ನಿಯಮಗಳನ್ನು ಅವರು ಪಾಲಿಸುವಂತಿರಬೇಕು" ಎಂದಿದ್ದಾರೆ ಕಮಲ್ ಹಾಸನ್.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌