ಆ್ಯಪ್ನಗರ

ಕಿಚ್ಚ ಸುದೀಪ್‌ಗೆ ಧನ್ಯವಾದಗಳನ್ನು ಹೇಳಿದ ವಿಜಯಲಕ್ಷ್ಮೀ

ನಟ ವಿ ರವಿಚಂದ್ರನ್ ತಮ್ಮ ಬಾಲಾಜಿ ನಾಯಕತ್ವದ 'ಕಾಲೇಜ್' ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ವಿಜಯಲಕ್ಷ್ಮೀ ಅವರು ಆ ಚಿತ್ರ ಅರ್ಧಕ್ಕೇ ನಿಂತರೂ 'ನಾಗಮಂಡಲ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು.

Vijaya Karnataka Web 27 Feb 2019, 7:41 pm
ಇತ್ತೀಚಿಗಷ್ಟೇ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ನಟಿ ವಿಜಯಲಕ್ಷ್ಮೀ ಅವರು ನಟ ಕಿಚ್ಚ ಸುದೀಪ್ ಅವರಿಗೆ ಕೃತಜ್ಞತೆ ಹೇಳಿದ್ದಾರೆ. ಚಲನಚಿತ್ರ ವಾಣಿಜ್ಯ ಮಂಡಳಿ ಮೂಲಕ ಹಾಗೂ ಮಾಧ್ಯಮಗಳ ಮೂಲಕ ನಟಿ ವಿಜಯಲಕ್ಷ್ಮೀ ಅವರ ಅಕ್ಕ ಉಷಾ ಮಾಡಿಕೊಂಡಿದ್ದ ಮನವಿ ಮೇರೆಗೆ, ಕಿಚ್ಚ ಸುದೀಪ್ ಅವರು ನಟಿ ವಿಜಯಲಕ್ಷ್ಮೀ ಅವರಿಗೆ 1 ಲಕ್ಷ ರೂ. ಆರ್ಥಿಕ ಸಹಾಯ ನೀಡಿದ್ದರು. ಅದನ್ನು ತಿಳದ ವಿಜಯಲಕ್ಷ್ಮೀ ಅವರು ಸುದೀಪ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Vijaya Karnataka Web vijayalakshmi24


ಖಾಸಗಿ ಆಸ್ಪತ್ರೆಯಲ್ಲಿರುವ ನಟಿ ವಿಜಯಲಕ್ಷ್ಮೀ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದು, ತನ್ನ ಸಂಕಷ್ಟದ ಸಮಯಕ್ಕೆ ನೆರವಾದ ಕಿಚ್ಚ ಸುದೀಪ್‍ ಅವರಿಗೆ ಧನ್ಯವಾದ ತಿಳಿಸಿದ್ದಾರೆ. "ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಮಾಧ್ಯಮದವರಿಗೂ ಧನ್ಯವಾದಗಳು" ಎಂದಿದ್ದಾರೆ ನಟಿ ವಿಜಯಲಕ್ಷ್ಮೀ.

"ನಿಮ್ಮೆಲ್ಲರ ಸಹಾಯ ನನ್ನನ್ನು ತುಂಬಾ ಭಾವುಕಳನ್ನಾಗಿಸಿದೆ. ನಾನು ಅಂದು ಕನ್ನಡ ಚಿತ್ರರಂಗದದಿಂದ ದೂರವಾಗಿ ದೊಡ್ಡ ತಪ್ಪು ಮಾಡಿದೆ. ಇಂದು ನಾನು ಮಾಡಿದ ತಪ್ಪನ್ನು ಕ್ಷಮಿಸಿ ಫಿಲ್ಮ್ ಚೇಂಬರ್, ಮಾಧ್ಯಮಗಳು ಮತ್ತು ಕನ್ನಡ ನಟ-ನಟಿಯರು ನನಗೆ ಬೆಂಬಲವಾಗಿ ನಿಂತಿದ್ದಾರೆ. ನಾನು ಇನ್ಮುಂದೆ ಯಾವತ್ತೂ ಕನ್ನಡ ಚಿತ್ರರಂಗ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನಾನು ಕನ್ನಡದ ಮನೆ ಮಗಳು. ನಾನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮೇಲೆ ಖಂಡಿತ ಮಾಧ್ಯಮದವರನ್ನು ಭೇಟಿಯಾಗುತ್ತೇನೆ" ಎಂದು ವಿಜಯಲಕ್ಷ್ಮೀಯವರು ಭಾವುಕರಾಗಿ ನುಡಿದಿದ್ದಾರೆ.

ನಟ ವಿ ರವಿಚಂದ್ರನ್ ತಮ್ಮ ಬಾಲಾಜಿ ನಾಯಕತ್ವದ 'ಕಾಲೇಜ್' ಚಿತ್ರದ ಮೂಲಕ ಬಣ್ಣದ ಜಗತ್ತಿಗೆ ಕಾಲಿಟ್ಟ ನಟಿ ವಿಜಯಲಕ್ಷ್ಮೀ ಅವರು ಆ ಚಿತ್ರ ಅರ್ಧಕ್ಕೇ ನಿಂತರೂ 'ನಾಗಮಂಡಲ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಜೋಡಿ ಹಕ್ಕಿ, ಸ್ವಸ್ತಿಕ್ ಸೇರಿದಂತೆ 25 ಕನ್ನಡ ಚಿತ್ರಗಳಲ್ಲಿ ನಟಿಸಿರುವ ವಿಜಯಲಕ್ಷ್ಮೀ ಅವರು ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳೂ ಸೇರಿದಂತೆ 40 ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡದಲ್ಲಿ ವಿಷ್ಣುವರ್ಧನ್, ಶಿವರಾಜ್‌ಕುಮಾರ್ ಮುಂತಾದ ಸ್ಟಾರ್ ನಟರ ಜೊತೆಯೂ ತೆರೆ ಹಂಚಿಕೊಮಡಿರುವ ಈ ನಟಿ ಇಂದು ಅವಕಾಶ ವಂಚಿತರಾಗಿದ್ದಾರೆ.

ಆದರೆ, ವಾಪಸ್ ಕನ್ನಡಕ್ಕೆ ಬಂದು ಅವಕಾಶವನ್ನು ಬೇಡಿದ ನಟಿ ವಿಜಯಲಕ್ಷ್ಮೀ ಅವರ ಸ್ಥಿತಿಗೆ ಮರುಗಿದ ಸ್ಯಾಂಡಲ್‌ವುಡ್ ಉದ್ಯಮ ಹಾಗೂ ಸಿನಿ ಪ್ರೇಕ್ಷಕರು ಮತ್ತೆ ವಿಜಯಲಕ್ಷ್ಮೀ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ಅದನ್ನು ಸ್ವತಃ ವಿಜಯಲಕ್ಷ್ಮೀ ಅವರು ಕೂಡ ಅರ್ಥ ಮಾಡಿಕೊಂಡು ಧನ್ಯವಾದಗಳನ್ನು ತಿಳಿಸಿದ್ದಾರೆ. ಕನ್ನಡ ಸಿನಿ ಪ್ರೇಕ್ಷಕರೂ ಕೂಡ ಮತ್ತೆ ವಿಜಯಲಕ್ಷ್ಮೀ ಅವರು ನಟನೆಗೆ ಮರಳಿ ಸುಖ-ಸಂತೋಷಗಳಿಂದ ಬಾಳಲಿ ಎಂದು ಹಾರೈಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌