* ಸಿದ್ಧಲಿಂಗಸ್ವಾಮಿ ಕುಣಿಗಲ್
ನಗರ ಜೀವನಕ್ಕಿಂತ ಹಳ್ಳಿ ಜೀವನ ಉತ್ತಮ ಹಾಗೂ ಕಡಿಮೆ ಖರ್ಚಿನಲ್ಲಿ ಕೃಷಿಯನ್ನು ಲಾಭದಾಯಕವಾಗಿಸುವುದು ಹೇಗೆ ಎಂಬ ಸಂದೇಶವುಳ್ಳ ಚಿತ್ರವನ್ನು ಕುಣಿಗಲ್ನ ಯುವಕರ ತಂಡವೊಂದು ಮಾಡಿದೆ. 'ನಮ್ಮೂರ್ ಕುಣಿಗಲ್' ಹೆಸರಿನ ಈ ಸಿನಿಮಾ ಏ. 26ರಂದು ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಗಂಗನ್ ರೇವಣ್ಣ ತಿಳಿಸಿದ್ದಾರೆ.
ಅವರು ಮಾತನಾಡಿ, ಕಳೆದ 90 ದಿನಗಳ ಹಿಂದೆ ಪ್ರಾರಂಭಗೊಂಡ ನಮ್ಮೂರು ಕುಣಿಗಲ್ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡು ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಏ.26ರಂದು ಕುಣಿಗಲ್ ಆಕಾಶ್ ಹಾಗೂ ತುಮಕೂರು ಎಂ.ಜಿ ರಸ್ತೆಯ ಕೃಷ್ಣ ಚಿತ್ರಮಂದಿರದಲ್ಲಿ ಪ್ರಥಮ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬಳಿಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ ಎಂದರು.
2019ರ ಹೊಸ ವರ್ಷದ ದಿನ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕುಣಿಗಲ್ ತಾಲೂಕಿನ 50 ಪ್ರಮುಖ ಹಳ್ಳಿಗಳಲ್ಲಿ ಸ್ವತಃ ಚಿತ್ರತಂಡ ಚಿತ್ರದ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ವಿಭಿನ್ನವಾಗಿ ಪ್ರೇಕ್ಷ ಕರ ಸಮ್ಮುಖದಲ್ಲೇ ಆಡಿಯೋ ರಿಲೀಸ್ ಮಾಡಲಾಗಿದೆ. ತಾಲೂಕಿನ ತೆಪ್ಪಸಂದ್ರ ಗ್ರಾಮದ ವಾಸಿಯಾದ ನಾಯಕ ನಟ ಪ್ರಸನ್ನ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಬಹುತೇಕ ಮಂದಿ ತಾಲೂಕಿನವರೇ ಆಗಿದ್ದಾರೆ. ಜೊತೆಗೆ ಎಲ್ಲರೂ ಹೊಸ ಪ್ರತಿಭೆಗಳೇ ಆಗಿದ್ದಾರೆ ಎಂದು ನಿರ್ದೇಶಕ ಗಗನ್ ರೇವಣ್ಣ ತಿಳಿಸಿದರು.
ಇಂದಿನ ಯುವ ಜನಾಂಗ ಪ್ರಾಥಮಿಕ ಹಾಗೂ ಪ್ರೌಢಶಿಕ್ಷ ಣವನ್ನು ಕೊಟ್ಟ ಹಳ್ಳಿಯನ್ನು ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದೆ. ಹಳ್ಳಿಗಳಲ್ಲಿ ಇಂದು ಅಜ್ಜಿ , ಅಜ್ಜ ಮಾತ್ರ ಉಳಿದುಕೊಂಡಿದ್ದಾರೆ. ಇಲ್ಲಿ ದುಡಿಮೆ ಮಾಡಲು ಜಮೀನು ಇದ್ದರೂ ನಗರ ಪ್ರದೇಶಕ್ಕೆ ಬಂದು ಹೋಟೆಲ್ ಸಪ್ಲೈಯರ್, ಕ್ಯಾಬ್ ಚಾಲಕ ಇತ್ಯಾದಿ ಸಣ್ಣಪುಟ್ಟ ಕೆಲಸಕ್ಕೆ ಸೇರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಿಟಿ ಜೀವನಕ್ಕಿಂತ ಹಳ್ಳಿಯ ಜೀವನ ಸುಂದರ ಎಂದು ತೋರಿಸುವ ಉದ್ದೇಶದಿಂದ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರ ಶೂಟಿಂಗನ್ನು ಕುಣಿಗಲ್ ತಾಲೂಕಿನಲ್ಲೇ ಮಾಡಲಾಗಿದೆ ಎಂದು ಚಿತ್ರದ ತುಣುಕನ್ನು ಬಿಡಿಸಿಟ್ಟರು.
ಈ ಚಿತ್ರ ನಿರ್ಮಾಣ ಮಾಡಲು ಚಿತ್ರದಲ್ಲಿ ನಟನೆ ಮಾಡಿರುವ ಎಲ್ಲ ಸ್ನೇಹಿತರು ಅದರಲ್ಲಿಯೂ ಕುಣಿಗಲ್ ಹುಡುಗರೇ ಹಣ ಹಾಕಿಕೊಂಡು ಸಿನಿಮಾ ಮಡಿದ್ದೇವೆ. ಎಲ್ಲ ತಾಂತ್ರಿಕತೆಯನ್ನೂ ನಾವೇ ಕಲಿತು ಚಿತ್ರ ನಿರ್ಮಾಣ ಮಾಡಿರುವುದು ಇಲ್ಲಿನ ವಿಶೇಷ. ಇದಕ್ಕಾಗಿ ನಾವು ಮೂರೂವರೆ ವರ್ಷ ತರಬೇತಿ ಪಡೆದುಕೊಂಡು ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ತಜ್ಞರನ್ನು ಬಳಸಿಕೊಳ್ಳದೇ ಕ್ಯಾಮೆರಾ ಬಳಕೆಯಿಂದ ಹಿಡಿದು ಎಡಿಟಿಂಗ್ವರೆಗೂ ನಾವೇ ಮಾಡಿದ್ದೇವೆ. ಚಿತ್ರದ ಸಾಹಿತ್ಯ, ಸಂಗೀತ ಚಿತ್ರಕಥೆ ಎಲ್ಲವೂ ಸಂಪೂರ್ಣವಾಗಿ ನಮ್ಮ ಚಿತ್ರತಂಡದ ಹೊಸ ಪ್ರತಿಭೆಗಳೇ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಹಣ ಮಾಡುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ, ನಗರ ಹಾಗೂ ಹಳ್ಳಿಗಾಡಿನ ಜೀವನದ ಪರಿಯನ್ನು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಿ ಮತ್ತೆ ಅವರನ್ನು ಗ್ರಾಮೀಣ ಪ್ರದೇಶಕ್ಕೆ ಕರೆತರುವುದು ನಮ್ಮ ಉದ್ದೇಶ ಎಂದು ಹೇಳಿದರು.
ಚಿತ್ರದಲ್ಲಿ ನಾಯಕಿಯಾಗಿ ಜಿ.ಎಂ.ರಶ್ಮಿ, ಖಳನಟನಾಗಿ ಕಿರಣ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಛಾಯಾಗ್ರಹಣ ಗೌಡ, ಸಂಗೀತ ನಿರ್ದೇಶಕ ಜೀನು ಅಗ್ಸಸ್ಟಿನ್, ನಿರ್ವಹಣೆ ಬಾಲಸುಬ್ರಮಣಿ, ತಾಂತ್ರಿಕ ವರ್ಗದಲ್ಲಿ ಮಂಜುನಾಥ್, ತಾರಕ್ರಾಮ್, ಎಸ್, ಶಶಿಕಲಾ, ಕೌಶಿಕ್ ವಿಶ್ವಕರ್ಮ, ವಿಜಯ್, ಕಾರ್ತಿಕ್, ಮನೋಜ್, ಪ್ರಸನ್ನ, ಅವಿನಾಶ್ ಶ್ರಮಿಸಿದ್ದಾರೆ.
ನಗರ ಜೀವನಕ್ಕಿಂತ ಹಳ್ಳಿ ಜೀವನ ಉತ್ತಮ ಹಾಗೂ ಕಡಿಮೆ ಖರ್ಚಿನಲ್ಲಿ ಕೃಷಿಯನ್ನು ಲಾಭದಾಯಕವಾಗಿಸುವುದು ಹೇಗೆ ಎಂಬ ಸಂದೇಶವುಳ್ಳ ಚಿತ್ರವನ್ನು ಕುಣಿಗಲ್ನ ಯುವಕರ ತಂಡವೊಂದು ಮಾಡಿದೆ. 'ನಮ್ಮೂರ್ ಕುಣಿಗಲ್' ಹೆಸರಿನ ಈ ಸಿನಿಮಾ ಏ. 26ರಂದು ಬಿಡುಗಡೆಯಾಗುತ್ತಿದೆ ಎಂದು ನಿರ್ದೇಶಕ ಗಂಗನ್ ರೇವಣ್ಣ ತಿಳಿಸಿದ್ದಾರೆ.
ಅವರು ಮಾತನಾಡಿ, ಕಳೆದ 90 ದಿನಗಳ ಹಿಂದೆ ಪ್ರಾರಂಭಗೊಂಡ ನಮ್ಮೂರು ಕುಣಿಗಲ್ ಚಲನಚಿತ್ರದ ಚಿತ್ರೀಕರಣ ಪೂರ್ಣಗೊಂಡು ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಏ.26ರಂದು ಕುಣಿಗಲ್ ಆಕಾಶ್ ಹಾಗೂ ತುಮಕೂರು ಎಂ.ಜಿ ರಸ್ತೆಯ ಕೃಷ್ಣ ಚಿತ್ರಮಂದಿರದಲ್ಲಿ ಪ್ರಥಮ ಹಂತದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬಳಿಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳಲಿದೆ ಎಂದರು.
2019ರ ಹೊಸ ವರ್ಷದ ದಿನ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕುಣಿಗಲ್ ತಾಲೂಕಿನ 50 ಪ್ರಮುಖ ಹಳ್ಳಿಗಳಲ್ಲಿ ಸ್ವತಃ ಚಿತ್ರತಂಡ ಚಿತ್ರದ ಹಾಡುಗಳಿಗೆ ನೃತ್ಯ ಮಾಡುವ ಮೂಲಕ ವಿಭಿನ್ನವಾಗಿ ಪ್ರೇಕ್ಷ ಕರ ಸಮ್ಮುಖದಲ್ಲೇ ಆಡಿಯೋ ರಿಲೀಸ್ ಮಾಡಲಾಗಿದೆ. ತಾಲೂಕಿನ ತೆಪ್ಪಸಂದ್ರ ಗ್ರಾಮದ ವಾಸಿಯಾದ ನಾಯಕ ನಟ ಪ್ರಸನ್ನ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಬಹುತೇಕ ಮಂದಿ ತಾಲೂಕಿನವರೇ ಆಗಿದ್ದಾರೆ. ಜೊತೆಗೆ ಎಲ್ಲರೂ ಹೊಸ ಪ್ರತಿಭೆಗಳೇ ಆಗಿದ್ದಾರೆ ಎಂದು ನಿರ್ದೇಶಕ ಗಗನ್ ರೇವಣ್ಣ ತಿಳಿಸಿದರು.
ಇಂದಿನ ಯುವ ಜನಾಂಗ ಪ್ರಾಥಮಿಕ ಹಾಗೂ ಪ್ರೌಢಶಿಕ್ಷ ಣವನ್ನು ಕೊಟ್ಟ ಹಳ್ಳಿಯನ್ನು ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದೆ. ಹಳ್ಳಿಗಳಲ್ಲಿ ಇಂದು ಅಜ್ಜಿ , ಅಜ್ಜ ಮಾತ್ರ ಉಳಿದುಕೊಂಡಿದ್ದಾರೆ. ಇಲ್ಲಿ ದುಡಿಮೆ ಮಾಡಲು ಜಮೀನು ಇದ್ದರೂ ನಗರ ಪ್ರದೇಶಕ್ಕೆ ಬಂದು ಹೋಟೆಲ್ ಸಪ್ಲೈಯರ್, ಕ್ಯಾಬ್ ಚಾಲಕ ಇತ್ಯಾದಿ ಸಣ್ಣಪುಟ್ಟ ಕೆಲಸಕ್ಕೆ ಸೇರಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಿಟಿ ಜೀವನಕ್ಕಿಂತ ಹಳ್ಳಿಯ ಜೀವನ ಸುಂದರ ಎಂದು ತೋರಿಸುವ ಉದ್ದೇಶದಿಂದ ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರ ಶೂಟಿಂಗನ್ನು ಕುಣಿಗಲ್ ತಾಲೂಕಿನಲ್ಲೇ ಮಾಡಲಾಗಿದೆ ಎಂದು ಚಿತ್ರದ ತುಣುಕನ್ನು ಬಿಡಿಸಿಟ್ಟರು.
ಈ ಚಿತ್ರ ನಿರ್ಮಾಣ ಮಾಡಲು ಚಿತ್ರದಲ್ಲಿ ನಟನೆ ಮಾಡಿರುವ ಎಲ್ಲ ಸ್ನೇಹಿತರು ಅದರಲ್ಲಿಯೂ ಕುಣಿಗಲ್ ಹುಡುಗರೇ ಹಣ ಹಾಕಿಕೊಂಡು ಸಿನಿಮಾ ಮಡಿದ್ದೇವೆ. ಎಲ್ಲ ತಾಂತ್ರಿಕತೆಯನ್ನೂ ನಾವೇ ಕಲಿತು ಚಿತ್ರ ನಿರ್ಮಾಣ ಮಾಡಿರುವುದು ಇಲ್ಲಿನ ವಿಶೇಷ. ಇದಕ್ಕಾಗಿ ನಾವು ಮೂರೂವರೆ ವರ್ಷ ತರಬೇತಿ ಪಡೆದುಕೊಂಡು ಸಿದ್ಧತೆ ಮಾಡಿಕೊಂಡಿದ್ದೇವೆ. ಯಾವುದೇ ತಜ್ಞರನ್ನು ಬಳಸಿಕೊಳ್ಳದೇ ಕ್ಯಾಮೆರಾ ಬಳಕೆಯಿಂದ ಹಿಡಿದು ಎಡಿಟಿಂಗ್ವರೆಗೂ ನಾವೇ ಮಾಡಿದ್ದೇವೆ. ಚಿತ್ರದ ಸಾಹಿತ್ಯ, ಸಂಗೀತ ಚಿತ್ರಕಥೆ ಎಲ್ಲವೂ ಸಂಪೂರ್ಣವಾಗಿ ನಮ್ಮ ಚಿತ್ರತಂಡದ ಹೊಸ ಪ್ರತಿಭೆಗಳೇ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಹಣ ಮಾಡುವ ಉದ್ದೇಶದಿಂದ ಸಿನಿಮಾ ಮಾಡಿಲ್ಲ, ನಗರ ಹಾಗೂ ಹಳ್ಳಿಗಾಡಿನ ಜೀವನದ ಪರಿಯನ್ನು ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಿ ಮತ್ತೆ ಅವರನ್ನು ಗ್ರಾಮೀಣ ಪ್ರದೇಶಕ್ಕೆ ಕರೆತರುವುದು ನಮ್ಮ ಉದ್ದೇಶ ಎಂದು ಹೇಳಿದರು.
ಚಿತ್ರದಲ್ಲಿ ನಾಯಕಿಯಾಗಿ ಜಿ.ಎಂ.ರಶ್ಮಿ, ಖಳನಟನಾಗಿ ಕಿರಣ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಛಾಯಾಗ್ರಹಣ ಗೌಡ, ಸಂಗೀತ ನಿರ್ದೇಶಕ ಜೀನು ಅಗ್ಸಸ್ಟಿನ್, ನಿರ್ವಹಣೆ ಬಾಲಸುಬ್ರಮಣಿ, ತಾಂತ್ರಿಕ ವರ್ಗದಲ್ಲಿ ಮಂಜುನಾಥ್, ತಾರಕ್ರಾಮ್, ಎಸ್, ಶಶಿಕಲಾ, ಕೌಶಿಕ್ ವಿಶ್ವಕರ್ಮ, ವಿಜಯ್, ಕಾರ್ತಿಕ್, ಮನೋಜ್, ಪ್ರಸನ್ನ, ಅವಿನಾಶ್ ಶ್ರಮಿಸಿದ್ದಾರೆ.