ಆ್ಯಪ್ನಗರ

'ಪ್ರಿನ್ಸ್' ಮಹೇಶ್ ಬಾಬು ರಾಜಕೀಯಕ್ಕೆ ಅಡಿಯಿಡುತ್ತಾರಾ?

ಇತ್ತೀಚೆಗೆ ತೆಲುಗು ನಟ ಮಹೇಶ್ ಬಾಬು ಅವರು ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾಗಿದ್ದು ಹಲವಾರು ವದಂತಿಗಳಿಗೆ ಕಾರಣವಾಗಿತ್ತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅವರು ಟಿಡಿಪಿ ಗೆ ಬೆಂಬಲ ನೀಡಲಿದ್ದಾರೆ, ಆ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಚರ್ಚೆ ನಡೆದಿದೆ. ಈ ಹಿನ್ನೆಲೆಯಲ್ಲಿ ಅವರ ಪತ್ನಿ ನಮ್ರತಾ ಶಿರೋಡ್ಕರ್ ಏನು ಹೇಳಿದ್ದಾರೆ ಅಂತ ನೋಡಿ.

Vijaya Karnataka Web 13 Feb 2019, 4:50 pm
ಟಾಲಿವುಡ್ ಪಿನ್ಸ್ ಮಹೇಶ್ ಬಾಬು ರಾಜಕೀಯಕ್ಕೆ ಅಡಿಯಿಡುತ್ತಾರಾ? ಎಂಬ ಚರ್ಚೆ ಟಾಲಿವುಡ್ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಇದಕ್ಕೆ ಕಾರಣವು ಇಲ್ಲದಿಲ್ಲ. ಇತ್ತೀಚೆಗೆ ಚಂದ್ರಬಾಬು ನಾಯ್ಡು ಅವರನ್ನು ಮಹೇಶ್ ಭೇಟಿಯಾಗಿದ್ದರು. ಮುಂಬರುವ ಲೋಕಸಭೆ ಚುನಾವಣೆಗೆ ಟಿಡಿಪಿ ಪರ ಪ್ರಚಾರ ಮಾಡಲಿದ್ದಾರೆ ಎಂಬುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಅವರು ರಾಜಕೀಯಕ್ಕೆ ಬರಬೇಕು ಎಂಬ ಕೂಗು ಕೇಳಿಬಂದಿದೆ.
Vijaya Karnataka Web mahesh-babu


ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್, "ರಾಜಕೀಯಕ್ಕೆ ಬರುವಷ್ಟು ಸಮಯ ಮಹೇಶ್ ಬಾಬು ಅವರಿಗಿಲ್ಲ. ಸದ್ಯಕ್ಕೆ ಅವರು ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಒಂದು ವೇಳೆ ಸಮಯ ಸಿಕ್ಕಿದರೂ ಕುಟುಂಬಕ್ಕಾಗಿ ವ್ಯಯಿಸುತ್ತಾರೆಯೇ ವಿನಃ ಇತರೆ ವಿಚಾರಗಳಲ್ಲಿ ತಲೆ ತೂರಿಸಲ್ಲ" ಎಂದಿದ್ದಾರೆ.

ರಾಜಕೀಯದೊಂದಿಗೆ ಸಂಬಂಧ ಇಲ್ಲದ ನಟರಲ್ಲಿ ಮಹೇಶ್ ಸಹ ಒಬ್ಬರು. ತೆಲಂಗಾಣ, ಆಂಧ್ರ ಎರಡೂ ರಾಜ್ಯಗಳು ಚೆನ್ನಾಗಿರಬೇಕೆಂದು ಬಯಸುತ್ತಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ಅವರನ್ನು ಭೇಟಿಯಾದ ಮಾತ್ರಕ್ಕೆ ಅವರು ರಾಜಕೀಯ ಮುಖಂಡ ಆಗಲ್ಲ. ರಾಜಕೀಯದ ಬಗ್ಗೆ ನನ್ನೊಂದಿಗೇ ಸರಿಯಾಗಿ ಮಾತನಾಡಲ್ಲ. ಇನ್ನು ವೇದಿಕೆ ಮೇಲೆ ಹೇಗೆ ಭಾಷಣ ಮಾಡುತ್ತಾರೆ?" ಎಂದಿದ್ದಾರೆ ನಮ್ರತಾ.

ಸದ್ಯಕ್ಕೆ ಮಹೇಶ್ ಬಾಬು ತೆಲುಗಿನ ಮಹರ್ಷಿ ಚಿತ್ರದಲ್ಲಿ ಬಿಝಿಯಾಗಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಪೂಜಾ ಹೆಗ್ಡೆ ನಾಯಕಿ. ಏಪ್ರಿಲ್ ವೇಳೆಗೆ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌