*ಶರಣು ಹುಲ್ಲೂರು
ತಾನು ಇಷ್ಟಪಟ್ಟವರ ಜತೆ ಮದುವೆಯಾಗಲು ಕಥಾ ನಾಯಕ ನಾನಾ ರೀತಿಯ ಸರ್ಕಸ್ ಮಾಡಬೇಕಾಗುತ್ತದೆ. ಕೊನೆಗೆ ಅವನ ಕಲ್ಯಾಣ ಯಾರೊಂದಿಗೆ ಆಗುತ್ತದೆಯೋ ಅದೇ 'ನಂಜುಂಡಿ ಕಲ್ಯಾಣ' ಎಂದು ಹೇಳಿದ್ದಾರೆ ನಿರ್ದೇಶಕ ರಾಜೇಂದ್ರ ಕಾರಂತ್.
ಗಂಭೀರವಾದ ವಿಷಯವನ್ನು ಈ ಸಿನಿಮಾದಲ್ಲಿ ತಮಾಷೆಯಾಗಿ ಹೇಳಲಾಗಿದೆ. ಹಾಗಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ ಎಂಬ ವಿಶ್ವಾಸ ಅವರದ್ದು. 'ಸಲಿಂಗಿಗಳ ಕಲ್ಯಾಣ ನಮ್ಮ ದೇಶದಲ್ಲಿ ನಡೆಯುವುದಿಲ್ಲ. ಆದರೆ, ವಿದೇಶಗಳಲ್ಲಿ ಇಂಥ ಮದುವೆಯಾಗಿ ಭಾರತಕ್ಕೆ ಬರುವ ಕಥಾ ನಾಯಕ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇನೆ. ಕನ್ನಡದ ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗೂ ಇದೆ. ಕಾಮಿಡಿಯಾಗಿ ಹೇಳಿದ್ದರಿಂದ ಅದನ್ನು ಮನರಂಜನೆಯ ಭಾಗವಾಗಿ ಸ್ವೀಕರಿಸುತ್ತಾರೆಂಬ ನಂಬಿಕೆ ನನ್ನದು' ಅನ್ನುವುದು ನಿರ್ದೇಶಕರ ಮಾತು.
ಕಮರ್ಷಿಯಲ್ ಸಿನಿಮಾದ ಬಹುತೇಕ ಅಂಶಗಳು ಚಿತ್ರದಲ್ಲಿವೆ. ಲವ್, ಸೆಂಟಿಮೆಂಟ್, ಆಕ್ಷನ್, ಕಾಮಿಡಿ, ಸಾಂಗ್ ಎಲ್ಲವನ್ನೂ ಬಳಸಿಕೊಂಡು ಕಥೆ ಹೇಳಿದ್ದಾರೆ. ಹಾಗಾಗಿ ನೋಡುಗರಿಗೆ ಇದು ವಿಭಿನ್ನ ಅನುಭವ ನೀಡಲಿದೆಯಂತೆ. ಮಡಮಕ್ಕಿ ಖ್ಯಾತಿಯ ತನುಷ್ ಶಿವಣ್ಣ ಚಿತ್ರದ ನಾಯಕ. ಮೊದಲ ಬಾರಿಗೆ ಅವರು ಹೊಸ ರೀತಿಯ ಪಾತ್ರವನ್ನು ಮಾಡಿದ್ದಾರೆ. ಶ್ರವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕುರಿ ಪ್ರತಾಪ್ ಗೇ ಪಾತ್ರ ನಿರ್ವಹಿಸಿದ್ದಾರೆ. ತನುಷ್ ತುಂಬಾ ಚೆನ್ನಾಗಿ ಆ್ಯಕ್ಷನ್ ಮಾಡುವುದರಿಂದ ಎರಡು ಭರ್ಜರಿ ಫೈಟ್ ಕೂಡ ಇಲ್ಲಿವೆ.
ನೂರಕ್ಕೂ ಹೆಚ್ಚು ಚಿತ್ರಮಂದರಿಗಳಲ್ಲಿ ಈ ವಾರ ಸಿನಿಮಾ ರಿಲೀಸ್ ಆಗುತ್ತಿದ್ದು, ಶ್ರೀರಾಮಾ ಟಾಕೀಸ್ನಲ್ಲಿ ನಿರ್ಮಾಣವಾಗಿದೆ.
ತಾನು ಇಷ್ಟಪಟ್ಟವರ ಜತೆ ಮದುವೆಯಾಗಲು ಕಥಾ ನಾಯಕ ನಾನಾ ರೀತಿಯ ಸರ್ಕಸ್ ಮಾಡಬೇಕಾಗುತ್ತದೆ. ಕೊನೆಗೆ ಅವನ ಕಲ್ಯಾಣ ಯಾರೊಂದಿಗೆ ಆಗುತ್ತದೆಯೋ ಅದೇ 'ನಂಜುಂಡಿ ಕಲ್ಯಾಣ' ಎಂದು ಹೇಳಿದ್ದಾರೆ ನಿರ್ದೇಶಕ ರಾಜೇಂದ್ರ ಕಾರಂತ್.
ಗಂಭೀರವಾದ ವಿಷಯವನ್ನು ಈ ಸಿನಿಮಾದಲ್ಲಿ ತಮಾಷೆಯಾಗಿ ಹೇಳಲಾಗಿದೆ. ಹಾಗಾಗಿ ಎಲ್ಲ ವರ್ಗದ ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗಲಿದೆ ಎಂಬ ವಿಶ್ವಾಸ ಅವರದ್ದು. 'ಸಲಿಂಗಿಗಳ ಕಲ್ಯಾಣ ನಮ್ಮ ದೇಶದಲ್ಲಿ ನಡೆಯುವುದಿಲ್ಲ. ಆದರೆ, ವಿದೇಶಗಳಲ್ಲಿ ಇಂಥ ಮದುವೆಯಾಗಿ ಭಾರತಕ್ಕೆ ಬರುವ ಕಥಾ ನಾಯಕ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎನ್ನುವುದನ್ನು ಚಿತ್ರದಲ್ಲಿ ಹೇಳಿದ್ದೇನೆ. ಕನ್ನಡದ ಪ್ರೇಕ್ಷಕರು ಇದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಕುತೂಹಲ ನನಗೂ ಇದೆ. ಕಾಮಿಡಿಯಾಗಿ ಹೇಳಿದ್ದರಿಂದ ಅದನ್ನು ಮನರಂಜನೆಯ ಭಾಗವಾಗಿ ಸ್ವೀಕರಿಸುತ್ತಾರೆಂಬ ನಂಬಿಕೆ ನನ್ನದು' ಅನ್ನುವುದು ನಿರ್ದೇಶಕರ ಮಾತು.
ಕಮರ್ಷಿಯಲ್ ಸಿನಿಮಾದ ಬಹುತೇಕ ಅಂಶಗಳು ಚಿತ್ರದಲ್ಲಿವೆ. ಲವ್, ಸೆಂಟಿಮೆಂಟ್, ಆಕ್ಷನ್, ಕಾಮಿಡಿ, ಸಾಂಗ್ ಎಲ್ಲವನ್ನೂ ಬಳಸಿಕೊಂಡು ಕಥೆ ಹೇಳಿದ್ದಾರೆ. ಹಾಗಾಗಿ ನೋಡುಗರಿಗೆ ಇದು ವಿಭಿನ್ನ ಅನುಭವ ನೀಡಲಿದೆಯಂತೆ. ಮಡಮಕ್ಕಿ ಖ್ಯಾತಿಯ ತನುಷ್ ಶಿವಣ್ಣ ಚಿತ್ರದ ನಾಯಕ. ಮೊದಲ ಬಾರಿಗೆ ಅವರು ಹೊಸ ರೀತಿಯ ಪಾತ್ರವನ್ನು ಮಾಡಿದ್ದಾರೆ. ಶ್ರವ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಕುರಿ ಪ್ರತಾಪ್ ಗೇ ಪಾತ್ರ ನಿರ್ವಹಿಸಿದ್ದಾರೆ. ತನುಷ್ ತುಂಬಾ ಚೆನ್ನಾಗಿ ಆ್ಯಕ್ಷನ್ ಮಾಡುವುದರಿಂದ ಎರಡು ಭರ್ಜರಿ ಫೈಟ್ ಕೂಡ ಇಲ್ಲಿವೆ.
ನೂರಕ್ಕೂ ಹೆಚ್ಚು ಚಿತ್ರಮಂದರಿಗಳಲ್ಲಿ ಈ ವಾರ ಸಿನಿಮಾ ರಿಲೀಸ್ ಆಗುತ್ತಿದ್ದು, ಶ್ರೀರಾಮಾ ಟಾಕೀಸ್ನಲ್ಲಿ ನಿರ್ಮಾಣವಾಗಿದೆ.
ಪಕ್ಕಾ ಮನರಂಜನೆಯ ಸಿನಿಮಾವಿದು. ನಗಿಸುತ್ತಲೇ ಹೊಸ ರೀತಿಯ ಕಥೆಯನ್ನು ಈ ಚಿತ್ರ ಹೇಳಲಿದೆ. ಕಮರ್ಷಿಯಲ್ ಆಗಿ ಮಾಡಿರುವ ಚಿತ್ರದಲ್ಲಿ ನೋಡುಗನಿಗೆ ಇಷ್ಟವಾಗುವ ಎಲ್ಲ ಅಂಶಗಳೂ ಇವೆ.