ಆ್ಯಪ್ನಗರ

ಕ್ಯೂನಲ್ಲಿ ಕಾದವರಿಗೆ ಸಿಕ್ತು ವಿಶೇಷ ಸಮ್ಮಾನ

ನಟ ನೀನಾಸಂ ಸತೀಶ್‌ ನಟನೆಯ ಅಯೋಗ್ಯ 50ನೇ ದಿನವನ್ನಾಚರಿಸಿಕೊಳ್ಳುತ್ತಿದೆ.

Vijaya Karnataka 4 Oct 2018, 5:38 pm
ಕ್ಯೂನಲ್ಲಿ ಕಾದವರಿಗೆ ಸಿಕ್ತು ವಿಶೇಷ ಸಮ್ಮಾನ
Vijaya Karnataka Web sathish (3)


ನಟ ನೀನಾಸಂ ಸತೀಶ್‌ ನಟನೆಯ ಅಯೋಗ್ಯ 50ನೇ ದಿನವನ್ನಾಚರಿಸಿಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಅವರಿಗೆ ಇನ್ನೊಂದು ರೋಮಾಂಚಕಾರಿ ಅನುಭವ ಆಗಿದೆ. ಅದನ್ನು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನೀನಾಸಂ ಸತೀಶ್‌ ಅಂಬರೀಷ್‌ ಅಭಿಮಾನಿ. ಮಂಡ್ಯದ ಹುಡುಗನಿಗೆ ಅಂಬಿ ಸಿನಿಮಾ ನೋಡುವಾಸೆ. ಮಂಡ್ಯದ ಚಿತ್ರಮಂದಿರದಲ್ಲಿ ಅಂಬಿ ಸಿನಿಮಾ ನೋಡಲು ಕ್ಯೂನಲ್ಲಿ ನಿಲ್ಲುತ್ತಿದ್ದರಂತೆ. ಇಂದು ಅದೇ ಚಿತ್ರಮಂದಿರದಲ್ಲಿ ಅವರ ಅಯೋಗ್ಯ ಚಿತ್ರ 50 ದಿನ ಪೂರೈಸಿದೆ. ಸತೀಶ್‌ ಕಟೌಟ್‌ ರಾರಾಜಿಸುತ್ತಿದೆ. ವಿಶೇಷ ಎಂದರೆ, ಪಕ್ಕದ ಚಿತ್ರಮಂದಿರದಲ್ಲಿ ಅಂಬಿಯ ಕೌಟ್‌ ರಾರಾಜಿಸುತ್ತಿದೆ. ಹೀಗೆ ಅಂಬಿ ಪಕ್ಕ ತಮ್ಮ ಕಟೌಟ್‌ ನಿಂತಿರುವುದಕ್ಕೆ ಸತೀಶ್‌ ಹರ್ಷ ವ್ಯಕ್ತಪಡಿಸಿದ್ದಾರೆ.

'ಇದು ಕಾಕತಾಳೀಯ. ಒಂದು ಕಾಲದಲ್ಲಿ ನಾನು ಇದೇ ಚಿತ್ರಮಂದಿರದಲ್ಲಿ ಅಂಬರೀಷ್‌ ಅಣ್ಣನ ಸಿನಿಮಾ ನೋಡಲು ಕ್ಯೂನಲ್ಲಿ ನಿಂತಿದ್ದೆ. ಇಂದು ಸಿದ್ಧಾರ್ಥ ಚಿತ್ರಮಂದಿರದಲ್ಲಿ ಅಂಬಿ ನಿಂಗ್‌ ವಯಸ್ಸಾಯ್ತೋ ಚಿತ್ರ ಇದೆ, ಪಕ್ಕದಲ್ಲಿ ಸಂಜಯದಲ್ಲಿ ನನ್ನ ಸಿನಿಮಾ ಇದೆ. ಇದು ನಾನು ನಡೆದು ಬಂದ ಹಾದಿಯನ್ನು ನನಗೆ ನೆನಪಿಸುತ್ತಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅದರ ಜತೆಯಲ್ಲೇ ಅಂಬರಿಷ್‌ ಜತೆ ನಟಿಸುವ ಆಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌