ಆ್ಯಪ್ನಗರ

ಮೊದಲ ಬಾರಿಗೆ ಜೋಡಿಯಾದ ಸತೀಶ್‌- ರಚಿತಾ

ಗೋದ್ರಾ, ತಮಿಳಿನ ಒಂದು ಚಿತ್ರ ಸೇರಿದಂತೆ ವಿಶೇಷವಾದ ಚಿತ್ರಗಳನ್ನು ಆರಿಸಿಕೊಳ್ಳುತ್ತಿರುವ ನೀನಾಸಂ ಸತೀಶ್‌ ಡಿಸೆಂಬರ್‌ನಲ್ಲಿ ಅಯೋಗ್ಯನಾಗುತ್ತಿದ್ದಾರೆ...

Vijaya Karnataka 29 Nov 2017, 5:00 am

ಗೋದ್ರಾ, ತಮಿಳಿನ ಒಂದು ಚಿತ್ರ ಸೇರಿದಂತೆ ವಿಶೇಷವಾದ ಚಿತ್ರಗಳನ್ನು ಆರಿಸಿಕೊಳ್ಳುತ್ತಿರುವ ನೀನಾಸಂ ಸತೀಶ್‌ ಡಿಸೆಂಬರ್‌ನಲ್ಲಿ ಅಯೋಗ್ಯನಾಗುತ್ತಿದ್ದಾರೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಸತೀಶ್‌ಗೆ ಡಿಂಪಲ್‌ ಕ್ವೀನ್‌ ರಚಿತ ರಾಮ್‌ ನಾಯಕಿಯಾಗಿದ್ದಾರೆ. ಮಹೇಶ್‌ಕುಮಾರ್‌ ಚೊಚ್ಚಲ ನಿರ್ದೇಶನದ ಈ ಚಿತ್ರ ಮಂಡ್ಯದ ಭಾಗದಲ್ಲಿ ಡಿಸೆಂಬರ್‌ನಿಂದ ಶೂಟಿಂಗ್‌ ನಡೆಯಲಿದೆ.

ಹಳ್ಳಿಯೊಂದರ ಯುವಕ ಗ್ರಾಮ ಪಂಚಾಯಿತಿ ಸದಸ್ಯನಾಗಿ ಹಳ್ಳಿಗೆ ಹೇಗೆ ನೆರವಾಗುತ್ತಾನೆ ಎಂಬುದೇ ಈ ಚಿತ್ರದ ಒಟ್ಟು ತಿರುಳು, ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌ನ ಟಿ ಆರ್‌ ಚಂದ್ರಶೇಖರ್‌ ಇದರ ನಿರ್ಮಾಪಕರಾಗಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಶಿವರಾಜ್‌ ಕೆ ಆರ್‌ ಪೇಟೆ ಸಹ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ.

Vijaya Karnataka Web neenasam satish rachita ram team up for first time
ಮೊದಲ ಬಾರಿಗೆ ಜೋಡಿಯಾದ ಸತೀಶ್‌- ರಚಿತಾ


ನಾಯಕನ ತಾಯಿಯಾಗಿ ಸರಿತಾ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ದಶಕಗಳ ನಂತರ ಅವರು ಸ್ಯಾಂಡಲ್‌ವುಡ್‌ಗೆ ರಿ ಎಂಟ್ರಿ ತೆಗೆದುಕೊಳ್ಳುತ್ತಿದ್ದಾರೆ. ಕಡ್ಡಿಪುಡಿ, ಟಗರು, ಕಾಲೇಜ್‌ಕುಮಾರ ಚಿತ್ರಗಳಿಗೆ ಸಂಭಾಷಣೆ ಬರೆದ ಮಾಸ್ತಿ ಅಯೋಗ್ಯಗೆ ಸಂಭಾಷಣೆ ಬರೆಯುತ್ತಿದ್ದಾರೆ. ಉಳಿದಂತೆ ಸಂಗೀತದ ಜವಬ್ದಾರಿ ಅರ್ಜುನ್‌ ಜನ್ಯ, ನಿರ್ಮಾಣ ವಿನ್ಯಾಸ ಬಾಲು ಕುಮುಟಾ, ಸಿನಿಮಾಟೋಗ್ರಫರ್‌ ಆಗಿ ಪ್ರೀತಂ ತೆಗ್ಗಿಮನೆ ಕೆಲಸ ಮಾಡಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌