ಪಂಚರಂಗಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ನಿಧಿ ಸುಬ್ಬಯ್ಯ ಇದೀಗ ಮದುವೆ ನಂತರವೂ ನಟನೆ ಮುಂದುವರಿಸಲು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಈಗ ಶಿವರಾಜ್ ಕುಮಾರ್ ನಟನೆಯ 'ಆನಂದ್' ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ.
ಈಗಾಗಲೇ ನಿಧಿ ನಟನೆಯ ದೃಶ್ಯಗಳು ಕೇರಳದಲ್ಲಿ ಶೂಟ್ ಆಗುತ್ತಿವೆ. ಅಲೆಪ್ಪಿಯ ಹಿನ್ನೀರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಅವರು ಕಲರ್ಫುಲ್ ಕಾಸ್ಟ್ಯೂಮ್ನೊಂದಿಗೆ ಮಿಂಚುತ್ತಿದ್ದಾರೆ. 'ತುಂಬಾ ಮಹತ್ವದ ಪಾತ್ರವನ್ನು ನಿಧಿ ನಿರ್ವಹಿಸುತ್ತಿದ್ದಾರೆ. ಅದು ಯಾವ ರೀತಿಯ ಪಾತ್ರ? ಅದರ ಹಿನ್ನೆಲೆಯನ್ನು ಹೇಳಿದರೆ ಕಥೆಯನ್ನೇ ಬಿಟ್ಟುಕೊಟ್ಟಂತೆ ಆಗುತ್ತದೆ. ಹಾಗಾಗಿ ಆ ಕುರಿತು ಏನೂ ಹೇಳಲಾರೆ' ಎಂದಿದ್ದಾರೆ ನಿರ್ದೇಶಕ ಪಿ.ವಾಸು.
ದಶಕದ ನಂತರ ಶಿವರಾಜ್ ಕುಮಾರ್ ತಮ್ಮ ಹಳೆಯ ಸಿನಿಮಾದ ಟೈಟಲ್ನಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ. ರಚಿತಾ ರಾಮ್ ನಾಯಕಿ. ನಾಯಕಿಯಷ್ಟೇ ಮತ್ತೊಂದು ಪ್ರಮುಖ ಪಾತ್ರ ಇರುವುದರಿಂದ ಇದೊಂದು ತ್ರಿಕೋನ ಪ್ರೇಮಕಥೆಯಾ ಎಂಬ ಕುತೂಹಲವೂ ಇದೆ. ಹಿರಿಯ ನಿರ್ದೇಶಕ, ನಟ ದ್ವಾರಕೀಶ್ ಅವರ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಅಂದ ಹಾಗೆ ನಟನೆಯ ಜತೆ ಜತೆಗೆ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಮಾಡುವ ಆಸೆಯನ್ನೂ ಹೊಂದಿದ್ದಾರೆ ನಿಧಿ ಸುಬ್ಬಯ್ಯ. ಒಳ್ಳೊಳ್ಳೆ ಕಥೆಗಳಿಗಾಗಿ ಅವರು ಹುಡುಕುತ್ತಿದ್ದಾರೆ. ಅಲ್ಲದೇ, ಉತ್ತಮ ಪಾತ್ರಗಳು ಸಿಕ್ಕರೆ ನಟಿಸುವುದಾಗಿಯೂ ಅವರು ಹೇಳಿದ್ದಾರೆ.
ಈಗಾಗಲೇ ನಿಧಿ ನಟನೆಯ ದೃಶ್ಯಗಳು ಕೇರಳದಲ್ಲಿ ಶೂಟ್ ಆಗುತ್ತಿವೆ. ಅಲೆಪ್ಪಿಯ ಹಿನ್ನೀರಿನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಅವರು ಕಲರ್ಫುಲ್ ಕಾಸ್ಟ್ಯೂಮ್ನೊಂದಿಗೆ ಮಿಂಚುತ್ತಿದ್ದಾರೆ. 'ತುಂಬಾ ಮಹತ್ವದ ಪಾತ್ರವನ್ನು ನಿಧಿ ನಿರ್ವಹಿಸುತ್ತಿದ್ದಾರೆ. ಅದು ಯಾವ ರೀತಿಯ ಪಾತ್ರ? ಅದರ ಹಿನ್ನೆಲೆಯನ್ನು ಹೇಳಿದರೆ ಕಥೆಯನ್ನೇ ಬಿಟ್ಟುಕೊಟ್ಟಂತೆ ಆಗುತ್ತದೆ. ಹಾಗಾಗಿ ಆ ಕುರಿತು ಏನೂ ಹೇಳಲಾರೆ' ಎಂದಿದ್ದಾರೆ ನಿರ್ದೇಶಕ ಪಿ.ವಾಸು.
ದಶಕದ ನಂತರ ಶಿವರಾಜ್ ಕುಮಾರ್ ತಮ್ಮ ಹಳೆಯ ಸಿನಿಮಾದ ಟೈಟಲ್ನಲ್ಲೇ ಈ ಸಿನಿಮಾ ಮಾಡುತ್ತಿದ್ದಾರೆ. ರಚಿತಾ ರಾಮ್ ನಾಯಕಿ. ನಾಯಕಿಯಷ್ಟೇ ಮತ್ತೊಂದು ಪ್ರಮುಖ ಪಾತ್ರ ಇರುವುದರಿಂದ ಇದೊಂದು ತ್ರಿಕೋನ ಪ್ರೇಮಕಥೆಯಾ ಎಂಬ ಕುತೂಹಲವೂ ಇದೆ. ಹಿರಿಯ ನಿರ್ದೇಶಕ, ನಟ ದ್ವಾರಕೀಶ್ ಅವರ ಬ್ಯಾನರ್ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.
ಅಂದ ಹಾಗೆ ನಟನೆಯ ಜತೆ ಜತೆಗೆ ತಮ್ಮದೇ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಮಾಡುವ ಆಸೆಯನ್ನೂ ಹೊಂದಿದ್ದಾರೆ ನಿಧಿ ಸುಬ್ಬಯ್ಯ. ಒಳ್ಳೊಳ್ಳೆ ಕಥೆಗಳಿಗಾಗಿ ಅವರು ಹುಡುಕುತ್ತಿದ್ದಾರೆ. ಅಲ್ಲದೇ, ಉತ್ತಮ ಪಾತ್ರಗಳು ಸಿಕ್ಕರೆ ನಟಿಸುವುದಾಗಿಯೂ ಅವರು ಹೇಳಿದ್ದಾರೆ.