ಸೀತಾರಾಮ ಕಲ್ಯಾಣ ಸಿನಿಮಾ ಬಗ್ಗೆ ಪ್ರೇಕ್ಷಕರು ನೀಡುತ್ತಿರುವ ಪ್ರತಿಕ್ರಿಯೆ ಕಂಡು ನನಗೆ ಬಹಳ ಸಂತೋಷವಾಗಿದೆ ಎಂದು ನಟ ನಿಖಿಲ್ಕುಮಾರ್ ಹೇಳಿದ್ದಾರೆ.
'ನಾನು ಮತ್ತು ನಮ್ಮ ತಂಡದ ಒಂದು ವರ್ಷದ ಶ್ರಮಕ್ಕೆ ಜನ ಜೈಹೋ ಎನ್ನುತ್ತಿದ್ದಾರೆ. ಜಾಗ್ವಾರ್ ಸಿನಿಮಾ ನೋಡಿದವರು ನಟನೆಯಲ್ಲಿ ಇನ್ನಷ್ಟು ಪಳಗಬೇಕು ಎಂದಿದ್ದರು. ಸೀತಾರಾಮದಲ್ಲಿ ಅವೆಲ್ಲವೂ ಫುಲ್ಫಿಲ್ ಆಗಿದ್ದು, ನೋಡಿದವರೆಲ್ಲರೂ ನನ್ನ ಪರ್ಫಾಮೆನ್ಸ್ ಮತ್ತು ಸಿನಿಮಾದ ಕಂಟೆಂಟ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನನಗೆ ನನ್ನ ಕೆಲಸದ ಬಗ್ಗೆ ಬಹಳ ಹೆಮ್ಮೆ ಮತ್ತು ಖುಷಿ ಎನಿಸುತ್ತಿದೆ' ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
'ಇದರ ಜತೆಯಲ್ಲಿ ಕೆಲವರು ನನ್ನ ಸಿನಿಮಾಗೆ ರಾಜಕೀಯದ ಸ್ಪರ್ಶ ಕೊಡುತ್ತಿದ್ದಾರೆ. ದಯವಿಟ್ಟು ಅದನ್ನು ಮಾಡದೇ ಒಬ್ಬ ನಟನ ಸಿನಿಮಾ ಮತ್ತು ಒಂದು ತಂಡದ ಶ್ರಮ ಎಂದು ನೋಡಿದರೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಒಬ್ಬ ಮುಖ್ಯಮಂತ್ರಿಯ ಮಗನ ಚಿತ್ರ ಎಂದು ನೋಡದೆ ನಟನೊಬ್ಬ ನೆಲೆ ಕಂಡುಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂದು ನೋಡಿ ಎಂಬುದು ನನ್ನ ನಮ್ರ ವಿನಂತಿ' ಎಂದಿದ್ದಾರೆ ಅವರು.
'ಮುಂದಿನ ವಾರದಿಂದ ನಾನು ಮತ್ತು ನನ್ನ ತಂಡ ಇಡೀ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ವಿಸಿಟ್ ಮಾಡಿ ಜನರನ್ನು ಭೇಟಿ ಮಾಡಿ ಅವರ ನೇರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇವೆ' ಎನ್ನುವುದು ನಿಖಿಲ್ ಮಾತು.
ನಿಖಿಲ್ ಅವರಿಗೆ ಮಹಿಳೆಯರು ಮತ್ತು ಫ್ಯಾಮಿಲಿ ಪ್ರೇಕ್ಷಕ ವರ್ಗದಿಂದ ಬಹಳಷ್ಟು ಕರೆ ಬಂದಿದ್ದು ಈ ಪಾತ್ರ ನಿಮಗೆ ಹೊಂದುತ್ತದೆ ಎಂದಿದ್ದಾರಂತೆ. 'ಜಾಗ್ವಾರ್ ಚಿತ್ರದ ಬಿಡುಗಡೆಯ ಬಳಿಕ ನಾನು ಸ್ವೀಕರಿಸಿದ್ದ ಎಲ್ಲ ಟೀಕೆಟಿಪ್ಪಣಿಗಳು, ಸಲಹೆಗಳನ್ನೂ ತುಂಬಿಕೊಡುವಂತೆ ಸೀತಾರಾಮ ಕಲ್ಯಾಣ ಮೂಡಿ ಬಂದಿದೆ. ಈ ಚಿತ್ರ ಅನೇಕರನ್ನು ಮುಟ್ಟಿದೆ, ಹಲವರು ಇಷ್ಟಪಟ್ಟಿದ್ದಾರೆ.ನಾನು ಮಾಸ್ ಹೀರೋ ಆಗಿಯೇ ಜನರಿಗೆ ಇಷ್ಟವಾಗಿದ್ದೇನೆ, ಇದೇ ರೀತಿ ಜನರಿಗೆ ಹತ್ತಿರವಾಗುವಂತಹ ಪಾತ್ರಗಳನ್ನೇ ಮಾಡುತ್ತೇನೆ' ಎಂದಿದ್ದಾರೆ ಅವರು.
ಚನ್ನಾಂಬಿಕ ಫಿಲಂಸ್ ಬ್ಯಾನರ್ನಡಿ ಈ ಚಿತ್ರ ನಿರ್ಮಾಣವಾಗಿದ್ದು, ಹರ್ಷ ನಿರ್ದೇಶನ ಮಾಡಿದ್ದಾರೆ. ಶರತ್ಕುಮಾರ್, ಗಿರಿಜಾ ಲೋಕೇಶ್, ಆದಿತ್ಯ ಮೆನನ್, ಮಧುಬಾಲಾ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ.
ಈ ಸಿನಿಮಾವನ್ನು ಒಬ್ಬ ಸಿಎಂ ಪುತ್ರ ಮಾಡಿದ್ದಾನೆ ಎಂದು ನೋಡಬೇಡಿ. ನಾನು ಒಬ್ಬ ನಟನಾಗಿ ನಿಮ್ಮ ಮುಂದೆ ನಿಂತಿದ್ದೇನೆ, ಆಶೀರ್ವದಿಸಿ. ತಪ್ಪುಗಳಿದ್ದರೆ ಹೇಳಿ ತಿದ್ದಿಕೊಳ್ಳುತ್ತೇನೆ. ಸಿನಿಮಾದಲ್ಲಿ ರಾಜಕೀಯ ಬೆರೆಸುವುದು ಬೇಡ-ನಿಖಿಲ್ಕುಮಾರ್, ನಟ
'ನಾನು ಮತ್ತು ನಮ್ಮ ತಂಡದ ಒಂದು ವರ್ಷದ ಶ್ರಮಕ್ಕೆ ಜನ ಜೈಹೋ ಎನ್ನುತ್ತಿದ್ದಾರೆ. ಜಾಗ್ವಾರ್ ಸಿನಿಮಾ ನೋಡಿದವರು ನಟನೆಯಲ್ಲಿ ಇನ್ನಷ್ಟು ಪಳಗಬೇಕು ಎಂದಿದ್ದರು. ಸೀತಾರಾಮದಲ್ಲಿ ಅವೆಲ್ಲವೂ ಫುಲ್ಫಿಲ್ ಆಗಿದ್ದು, ನೋಡಿದವರೆಲ್ಲರೂ ನನ್ನ ಪರ್ಫಾಮೆನ್ಸ್ ಮತ್ತು ಸಿನಿಮಾದ ಕಂಟೆಂಟ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನನಗೆ ನನ್ನ ಕೆಲಸದ ಬಗ್ಗೆ ಬಹಳ ಹೆಮ್ಮೆ ಮತ್ತು ಖುಷಿ ಎನಿಸುತ್ತಿದೆ' ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
'ಇದರ ಜತೆಯಲ್ಲಿ ಕೆಲವರು ನನ್ನ ಸಿನಿಮಾಗೆ ರಾಜಕೀಯದ ಸ್ಪರ್ಶ ಕೊಡುತ್ತಿದ್ದಾರೆ. ದಯವಿಟ್ಟು ಅದನ್ನು ಮಾಡದೇ ಒಬ್ಬ ನಟನ ಸಿನಿಮಾ ಮತ್ತು ಒಂದು ತಂಡದ ಶ್ರಮ ಎಂದು ನೋಡಿದರೆ ನಮ್ಮ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಒಬ್ಬ ಮುಖ್ಯಮಂತ್ರಿಯ ಮಗನ ಚಿತ್ರ ಎಂದು ನೋಡದೆ ನಟನೊಬ್ಬ ನೆಲೆ ಕಂಡುಕೊಳ್ಳಲು ಮಾಡುತ್ತಿರುವ ಪ್ರಯತ್ನ ಎಂದು ನೋಡಿ ಎಂಬುದು ನನ್ನ ನಮ್ರ ವಿನಂತಿ' ಎಂದಿದ್ದಾರೆ ಅವರು.
'ಮುಂದಿನ ವಾರದಿಂದ ನಾನು ಮತ್ತು ನನ್ನ ತಂಡ ಇಡೀ ರಾಜ್ಯಾದ್ಯಂತ ಚಿತ್ರಮಂದಿರಗಳನ್ನು ವಿಸಿಟ್ ಮಾಡಿ ಜನರನ್ನು ಭೇಟಿ ಮಾಡಿ ಅವರ ನೇರ ಅಭಿಪ್ರಾಯಗಳನ್ನು ಸಂಗ್ರಹಿಸುತ್ತೇವೆ' ಎನ್ನುವುದು ನಿಖಿಲ್ ಮಾತು.
ಚನ್ನಾಂಬಿಕ ಫಿಲಂಸ್ ಬ್ಯಾನರ್ನಡಿ ಈ ಚಿತ್ರ ನಿರ್ಮಾಣವಾಗಿದ್ದು, ಹರ್ಷ ನಿರ್ದೇಶನ ಮಾಡಿದ್ದಾರೆ. ಶರತ್ಕುಮಾರ್, ಗಿರಿಜಾ ಲೋಕೇಶ್, ಆದಿತ್ಯ ಮೆನನ್, ಮಧುಬಾಲಾ ಸೇರಿದಂತೆ ದೊಡ್ಡ ತಾರಾಗಣವೇ ಈ ಸಿನಿಮಾದಲ್ಲಿದೆ.
ಈ ಸಿನಿಮಾವನ್ನು ಒಬ್ಬ ಸಿಎಂ ಪುತ್ರ ಮಾಡಿದ್ದಾನೆ ಎಂದು ನೋಡಬೇಡಿ. ನಾನು ಒಬ್ಬ ನಟನಾಗಿ ನಿಮ್ಮ ಮುಂದೆ ನಿಂತಿದ್ದೇನೆ, ಆಶೀರ್ವದಿಸಿ. ತಪ್ಪುಗಳಿದ್ದರೆ ಹೇಳಿ ತಿದ್ದಿಕೊಳ್ಳುತ್ತೇನೆ. ಸಿನಿಮಾದಲ್ಲಿ ರಾಜಕೀಯ ಬೆರೆಸುವುದು ಬೇಡ-ನಿಖಿಲ್ಕುಮಾರ್, ನಟ