ಆ್ಯಪ್ನಗರ

ಅಭಿಷೇಕ್ ಅಂಬರೀಶ್ ಫೋಟೋಗೆ ಕಾಮೆಂಟ್ ಮಾಡಿದ ನಿಖಿಲ್ ಕುಮಾರಸ್ವಾಮಿ: ಅಭಿ ಹೇಳಿದ್ದೇನು?

'ಅಮರ್' ಸಿನೆಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಭಿಷೇಕ್ ಅಂಬರೀಶ್ ಅವರ ಮುಂದಿನ ಸಿನೆಮಾ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ. ಹೀಗಿರುವಾಗ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್‌ ಮಾಡಿರುವ ಫೋಟೋವೊಂದು ಗಮನ ಸೆಳೆಯುತ್ತಿದೆ. ಜೊತೆಗೆ ನಿಖಿಲ್ ಕುಮಾರ್ ಕುಮಾರಸ್ವಾಮಿ ಇದಕ್ಕೆ ಕಾಮೆಂಟ್ ಮಾಡಿದ್ದಾರೆ. ಈ ಬಗ್ಗೆ ವಿಜಯಕರ್ನಾಟಕ ವೆಬ್‌ಸೈಟ್‌ ಜೊತೆ ಅಭಿಷೇಕ್ ಅಂಬರೀಶ್ ಮಾತನಾಡಿದ್ದಾರೆ.

Vijaya Karnataka Web 7 Sep 2019, 3:29 pm
ಅಭಿಷೇಕ್ ಅಂಬರೀಶ್ ಅವರಿಗೆ ಸಾಲು ಸಾಲು ಸಿನೆಮಾಗಳ ಆಫರ್ ಬರುತ್ತಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗುಲ್ಲಾಗಿತ್ತು. ಆದರೆ ಅವರ ಮುದಿನ ಪ್ರಾಜೆಕ್ಟ್ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಖಡಕ್ ಲುಕ್ ನೀಡಿರುವ ಫೋಟೋವೊಂದನ್ನು ಹಾಕಿಕೊಂಡಿದ್ದಾರೆ. ಇದೇ ಇವರ ಮುಂದಿನ ಸಿನೆಮಾದ ಪಾತ್ರದ ಲುಕ್ ಇರಬಹುದಾ? ಎಂಬ ಸಂಶಯ ಕಾಡುತ್ತಿದೆ.
Vijaya Karnataka Web abhishek ambareesh


ಅಂಬಿ ಪುತ್ರನ ಈ ಪೋಸ್ಟ್ ನೋಡಿ ನಿಖಿಲ್ ಕುಮಾರಸ್ವಾಮಿ 'ಲುಕಿಂಗ್ ಶಾರ್ಪ್, ಮುಂದಿನ ಪ್ರಾಜೆಕ್ಟ್‌ಗೆ ಶುಭಾಶಯ' ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್ ನೋಡಿದರೆ ಅಭಿ ಮುಂದಿನ ಸಿನೆಮಾ ಯಾವುದೆಂದು ಪಕ್ಕಾ ಆಗಿರಬಹುದಾ ಎಂಬ ಪ್ರಶ್ನೆ ಉದ್ಭವವಾಗುವುದು. ಈ ಬಗ್ಗೆ ವಿಜಯಕರ್ನಾಟಕ ವೆಬ್‌ಸೈಟ್ ಜೊತೆ ಮಾತನಾಡಿರುವ ಅಭಿಷೇಕ್ ಅಂಬರೀಶ್ " ನೋಡಿ, ಕಾಯಿರಿ, ನೋಡ್ತಾ ಇರಿ. ಎಲ್ಲರಿಗೂ ಕುತೂಹಲ ಬರಲಿ ಅಂಥ ಹೀಗೆಲ್ಲ ಮಾಡೋದು. ನಿಖಿಲ್ ನನ್ನ ಒಳ್ಳೆಯ ಸ್ನೇಹಿತರು. ನನ್ನ ಹಿತೈಷಿ ಅವರು. ನಮಗೆ ಒಳ್ಳೆಯದಾಗಲಿ ಅಂಥ ನಿಖಿಲ್ ಬಯಸುತ್ತಾರೆ. ಅವರು ಹಾಗೆ ಇರಲಿ" ಅಂಥ ತಿಳಿಸಿದ್ದಾರೆ. ಆದರೆ ಅಭಿಷೇಕ್ ಮುಂದಿನ ಸಿನೆಮಾದ ಬಗ್ಗೆ ಯಾವ ಸುಳಿವನ್ನೂ ನೀಡಲಿಲ್ಲ.


ಮಂಡ್ಯ ಚುನಾವಣೆ ಸಮಯದಲ್ಲಿ ಅಂಬರೀಶ್ ಮತ್ತು ಕುಮಾರಸ್ವಾಮಿ ಕುಟುಂಬದ ನಡುವೆ ವೈಮನಸ್ಯ ಉಂಟಾಗಿತ್ತು. ಹೀಗಿದ್ದಾಗ್ಯೂ ನಿಖಿಲ್ 'ನಾವಿಬ್ಬರು ಒಳ್ಳೆಯ ಸ್ನೇಹಿತರು, ನಮ್ಮ ನಡುವೆ ವೈಮನಸ್ಸಿನಲ್ಲ' ಎಂದು ಪದೇ ಪದೇ ಹೇಳಿದ್ದರು. ಈ ಕಾಮೆಂಟ್ ನೋಡಿದರೆ ಈ ಇಬ್ಬರ ಸ್ನೇಹ ಇನ್ನು ಹಸಿರಾಗಿದೆ ಎಂದು ತಿಳಿಯುತ್ತದೆ.

ಟಿವಿಯಲ್ಲಿ ಮೊಟ್ಟ ಮೊದಲ ಬಾರಿಗೆ 'ಅಮರ್' ಚಲನಚಿತ್ರ

ಸುಮಲತಾ ಅವರು ಈ ಹಿಂದೆ ಹೇಳಿದಂತೆ ಅಭಿಷೇಕ್ ಕೈಯಲ್ಲಿ ಎರಡು ಸಿನೆಮಾಗಳಿದ್ದು, ಇನ್ನೂ ಫೈನಲ್ ಆಗಿಲ್ಲ ಎಂದಿದ್ದರು. ಆದರೆ 'ಅಮರ್' ಬಾಕ್ಸ್ಆಫೀಸ್‌ನಲ್ಲಿ ಅಷ್ಟೊಂದು ಸದ್ದು ಮಾಡದ ಕಾರಣ ಈ ಬಾರಿ ಯಂಗ್ ರೆಬೆಲ್ ಕೊಂಚ ಆಲೋಚಿಸಿ ಹೆಜ್ಜೆ ಇಡಲಿದ್ದಾರೆ ಎನ್ನಲಾಗುತ್ತಿದೆ. 'ಅಮರ್' ಚಿತ್ರಕ್ಕೆ ನಾಗಶೇಖರ್ ನಿರ್ದೇಶನ ಮಾಡಿದ್ದರು. ತಾನ್ಯಾ ಹೋಪ್ ನಾಯಕಿಯಾಗಿ ನಟಿಸಿದ್ದರು. ಸಂದೇಶ್ ನಾಗರಾಜ್ ಬಂಡವಾಳ ಹೂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌