ಆ್ಯಪ್ನಗರ

ಅಭಿಷೇಕ್ ಮತ್ತು ನಿಖಿಲ್ ಕುಮಾರಸ್ವಾಮಿ ನಡುವಣ ಮುನಿಸು ಮುಗಿದು ಸ್ನೇಹ ಚಿಗುರಿತಾ?

ಅಭಿಷೇಕ್ ಅಂಬರೀಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಫೋಟೋಗಳಿಗೆ ನಿಖಿಲ್ ಕಾಮೆಂಟ್ ಹಾಕುತ್ತಾರೆ. ಈ ಬೆಳವಣಿಗೆ ನೋಡಿದರೆ ಅವರಿಬ್ಬರ ನಡುವೆ ಇರುವ ವೈಮನಸ್ಸು ಮುಗಿದಂತೆ ಕಾಣಿಸುತ್ತಿದೆ. ಯಾಕೆ?

Vijaya Karnataka Web 3 Oct 2019, 2:53 pm
ಅಂಬರೀಶ್ ಮತ್ತು ಕುಮಾರಸ್ವಾಮಿ ಫ್ಯಾಮಿಲಿ ಇಬ್ಬರೂ ಅನ್ಯೋನ್ಯವಾಗಿದ್ದರು. ಯಾವಾಗ ಮಂಡ್ಯ ಲೋಕಸಭಾ ಚುನಾವಣೆಯ ಹಣಾಹಣಿ ಶುರುವಾಯಿತೋ ಆಗ ಈ ಎರಡು ಕುಟುಂಬಗಳು ಉತ್ತರ-ದಕ್ಷಿಣ ಎಂದಾಯಿತು. ಎಚ್‌ಡಿಕೆ ಕುಟುಂಬದಿಂದ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬಿ ಕುಟುಂಬದಿಂದ ಸುಮಲತಾ ಅಂಬರೀಶ್ ಚುನಾವಣೆಗೆ ನಿಂತಿದ್ದರು. ಪ್ರಚಾರದ ಸಮಯದಲ್ಲಿ ಒಬ್ಬರ ಮೇಲೆ ಇನ್ನೊಬ್ಬರು ಆರೋಪ-ಪ್ರತ್ಯಾರೋಪಗಳ ಸುರಿಮಳೆ ಸುರಿಸಿದ್ದರು. ತದನಂತರದಲ್ಲಿ ಸುಮಲತಾ ಎಂಪಿಯಾಗಿದ್ದಾಯಿತು. ಇದೆಲ್ಲ ಹಳೇ ವಿಚಾರವೇ.
Vijaya Karnataka Web abhishek birthday


ಅಭಿಷೇಕ್ ಅಂಬರೀಶ್‌ಗೆ ಸಿಕ್ಕಾಪಟ್ಟೆ ಸಿನೆಮಾಗಳ ಆಫರ್ ಬರುತ್ತಿದೆ ಎಂಬ ಸುದ್ದಿ ಇತ್ತು. ಆದರೆ ಅವರ ಮುದಿನ ಪ್ರಾಜೆಕ್ಟ್ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿರಲಿಲ್ಲ. ಅವರು ಕೆಲ ದಿನಗಳ ಹಿಂದೆ ತಮ್ಮ ಇನ್ಸ್ಟಾ ಖಾತೆಯಲ್ಲಿ ಖಡಕ್ ಲುಕ್ ನೀಡಿರುವ ಫೋಟೋವೊಂದನ್ನು ಹಾಕಿಕೊಂಡಿದ್ದರು. ಇದೇ ಇವರ ಮುಂದಿನ ಸಿನೆಮಾದ ಪಾತ್ರದ ಲುಕ್ ಇರಬಹುದಾ? ಎಂಬ ಸಂಶಯ ಕಾಡಿತ್ತು. ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ "ಲುಕಿಂಗ್ ಶಾರ್ಪ್, ಮುಂದಿನ ಪ್ರಾಜೆಕ್ಟ್‌ಗೆ ಶುಭಾಶಯ" ಎಂದು ಕಾಮೆಂಟ್ ಮಾಡಿದ್ದರು. ಈ ಬಗ್ಗೆ ಅಭಿಷೇಕ್ ಕೂಡ ವಿಜಯ ಕರ್ನಾಟಕ ವೆಬ್‌ಸೈಟ್ ಜೊತೆಗೆ "ನಿಖಿಲ್ ನನ್ನ ಒಳ್ಳೆಯ ಸ್ನೇಹಿತರು. ನನ್ನ ಹಿತೈಷಿ ಅವರು. ನಮಗೆ ಒಳ್ಳೆಯದಾಗಲಿ ಅಂಥ ನಿಖಿಲ್ ಬಯಸುತ್ತಾರೆ. ಅವರು ಹಾಗೆ ಇರಲಿ" ಅಂಥ ತಿಳಿಸಿದ್ದರು.
View this post on Instagram Happy birthday brother,god bless u!!🤗 A post shared by Nikhil Kumar (@nikhilgowda_jaguar) on Oct 2, 2019 at 11:48pm PDT

ಅಭಿಷೇಕ್ ಅಂಬರೀಶ್ ಫೋಟೋಗೆ ಕಾಮೆಂಟ್ ಮಾಡಿದ ನಿಖಿಲ್ ಕುಮಾರಸ್ವಾಮಿ: ಅಭಿ ಹೇಳಿದ್ದೇನು?

ಈಗ ಮತ್ತೆ ತಾವು ಮತ್ತೆ ಅಭಿಷೇಕ್ ಇರುವ ಫೋಟೋ ಹಾಕಿ ನಿಖಿಲ್ ಅಭಿಗೆ ವಿಶ್ ಮಾಡಿದ್ದಾರೆ. "ಹ್ಯಾಪಿ ಬರ್ತಡೇ ಬ್ರದರ್ , ದೇವರು ಒಳ್ಳೆಯದು ಮಾಡಲಿ" ಎಂದು ತಮ್ಮ ಇನ್ಸ್ಟಾ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅಭಿಷೇಕ್ ಇಂದು ತಮ್ಮ 26ನೇ ಹುಟ್ಟುಹಬ್ಬಕ್ಕೆ ಕಾಲಿಡುತ್ತಿದ್ದಾರೆ. ಕಳೆದ ವರ್ಷ ಅಭಿಮಾನಿಗಳ ಜೊತೆ ಅಭಿ ಬರ್ತಡೇ ಸೆಲೆಬ್ರೇಟ್ ಮಾಡಿದ್ದರು. ಈ ವರ್ಷ ಅಂಬಿ ನಮ್ಮನ್ನೆಲ್ಲ ಅಗಲಿದ್ದಕ್ಕೆ ಗಿಡ ನೆಡಿ, ಯಾವುದೇ ಸಂಭ್ರಮ ಬೇಡ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.
ದರ್ಶನ್, ಯಶ್ ಅವರನ್ನು ಅನುಸರಿಸಿ ಮಹತ್ವದ ನಿರ್ಧಾರ ತೆಗೆದುಕೊಂಡ ಅಭಿಷೇಕ್ ಅಂಬರೀಶ್

ಸುಮಲತಾ ಅವರು ಈ ಹಿಂದೆ ಹೇಳಿದಂತೆ ಅಭಿಷೇಕ್ ಕೈಯಲ್ಲಿ 2 ಸಿನೆಮಾಗಳಿದ್ದು, ಇನ್ನೂ ಫೈನಲ್ ಆಗಿಲ್ಲ ಎಂದಿದ್ದರು. ಆದರೆ 'ಅಮರ್' ಬಾಕ್ಸ್ಆಫೀಸ್‌ನಲ್ಲಿ ಅಷ್ಟೊಂದು ಸದ್ದು ಮಾಡದ ಕಾರಣ ಈ ಬಾರಿ ಯಂಗ್ ರೆಬೆಲ್ ಕೊಂಚ ಆಲೋಚಿಸಿ ಹೆಜ್ಜೆ ಇಡಲಿದ್ದಾರೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌