ದೂಮ್ರಪಾನ ಹಾನಿಕಾರಕ ಎಂಬ ಸಂದೇಶ ನೀಡುವ ಸರಕಾರಿ ಜಾಹೀರಾತಿನಲ್ಲಿ ನಟಿಸಿದ್ದ ಪುಟ್ಟ ಬಾಲಕಿ ಸಿಮ್ರನ್ ದೇಶಾದ್ಯಂತ ಮನೆಮಾತಾಗಿದ್ದರು. ಅವರೀಗ ಹದಿ ಹರೆಯದ ಹುಡುಗಿ. ಹೀಗಿದ್ದರೂ ಈ ಜಾಹೀರಾತು ಈಗಲೂ ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಲೇ ಇದೆ. ಆದರೆ, ಈ ಹುಡುಗಿ ಈಗ ನಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದಾರೆ.
ಕನ್ನಡ ಸಿನಿಮಾದಲ್ಲಿ ಸಿಮ್ರನ್ ನಟಿಸುತ್ತಾರೆಂಬ ಸುದ್ದಿ ಕಳೆದ ವರ್ಷವೇ ಬಂದಿತ್ತು. ಈಗ ಅವರು ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಕಾಜಲ್ ಹೆಸರಿನ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಬೆಂಗಳೂರು ಮತ್ತು ಮೈಸೂರುಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದ ಬಗ್ಗೆ ಎಕ್ಸೈಟ್ಮೆಂಟ್ ಇದೆ ಎಂದಿದ್ದಾರೆ ಸಿಮ್ರನ್.
'ಚಿತ್ರದಲ್ಲಿ ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಕಥೆಯಲ್ಲಿ ಕೆಲ ಕುತೂಹಲಕಾರಿ ಅಂಶಗಳಿವೆ. ಅಮೆರಿಕದಿಂದ ಭಾರತಕ್ಕೆ ನಾನು ಬರುವ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಇಲ್ಲಿರುವ ನನ್ನ ಪೋಷಕರನ್ನು ಭೇಟಿ ಮಾಡಲು ಕಾತುರಳಾಗಿ ಬಂದಿರುತ್ತೇನೆ' ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಅವರು. ಚಿತ್ರದಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದಾರೆ.
'ನಾಯಕ ಸಂತೋಷ್ಗೂ ನಮ್ಮ ಕುಟುಂಬದ ಸ್ಥಿತಿಗತಿಯಲ್ಲಿ ಬಹಳ ವ್ಯತ್ಯಾಸ ಇದ್ದರೂ ಅವನು ಒಳ್ಳೆಯವನು ಎಂಬ ಕಾರಣಕ್ಕೆ ಪ್ರೀತಿಸುತ್ತೇನೆ. ಇಲ್ಲಿಂದ ಮುಂದೆ ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ ಎನ್ನುವುದೇ ಸಿನಿಮಾದ ಕಥೆ. ಚಿತ್ರದಲ್ಲಿ ನನ್ನ ತಾಯಿಯ ಸಾವು ಮತ್ತು ಮಲತಾಯಿಯ ನಡುವಿನ ಮಿಸ್ಟರಿ ಕೂಡ ಇದೆ' ಎಂದಿದ್ದಾರೆ ಅವರು. ಬೆಂಗಳೂರಿನಲ್ಲಿ ಫೈಟ್ ದೃಶ್ಯಗಳ ಚಿತ್ರೀಕರಣದಲ್ಲಿ ಸಿಮ್ರನ್ ಪಾಲ್ಗೊಂಡಿದ್ದಾರೆ.
ಕನ್ನಡ ಸಿನಿಮಾದಲ್ಲಿ ಸಿಮ್ರನ್ ನಟಿಸುತ್ತಾರೆಂಬ ಸುದ್ದಿ ಕಳೆದ ವರ್ಷವೇ ಬಂದಿತ್ತು. ಈಗ ಅವರು ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾರೆ. ಕಾಜಲ್ ಹೆಸರಿನ ಸಿನಿಮಾದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಬೆಂಗಳೂರು ಮತ್ತು ಮೈಸೂರುಗಳಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಈ ಚಿತ್ರದ ಬಗ್ಗೆ ಎಕ್ಸೈಟ್ಮೆಂಟ್ ಇದೆ ಎಂದಿದ್ದಾರೆ ಸಿಮ್ರನ್.
'ಚಿತ್ರದಲ್ಲಿ ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆ. ಕಥೆಯಲ್ಲಿ ಕೆಲ ಕುತೂಹಲಕಾರಿ ಅಂಶಗಳಿವೆ. ಅಮೆರಿಕದಿಂದ ಭಾರತಕ್ಕೆ ನಾನು ಬರುವ ದೃಶ್ಯದೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಇಲ್ಲಿರುವ ನನ್ನ ಪೋಷಕರನ್ನು ಭೇಟಿ ಮಾಡಲು ಕಾತುರಳಾಗಿ ಬಂದಿರುತ್ತೇನೆ' ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ ಅವರು. ಚಿತ್ರದಲ್ಲಿ ಸಂತೋಷ್ ಬಾಲರಾಜ್ ನಾಯಕನಾಗಿ ನಟಿಸಿದ್ದಾರೆ.
'ನಾಯಕ ಸಂತೋಷ್ಗೂ ನಮ್ಮ ಕುಟುಂಬದ ಸ್ಥಿತಿಗತಿಯಲ್ಲಿ ಬಹಳ ವ್ಯತ್ಯಾಸ ಇದ್ದರೂ ಅವನು ಒಳ್ಳೆಯವನು ಎಂಬ ಕಾರಣಕ್ಕೆ ಪ್ರೀತಿಸುತ್ತೇನೆ. ಇಲ್ಲಿಂದ ಮುಂದೆ ಏನೆಲ್ಲಾ ಅಡ್ಡಿ ಆತಂಕಗಳು ಎದುರಾಗುತ್ತವೆ ಎನ್ನುವುದೇ ಸಿನಿಮಾದ ಕಥೆ. ಚಿತ್ರದಲ್ಲಿ ನನ್ನ ತಾಯಿಯ ಸಾವು ಮತ್ತು ಮಲತಾಯಿಯ ನಡುವಿನ ಮಿಸ್ಟರಿ ಕೂಡ ಇದೆ' ಎಂದಿದ್ದಾರೆ ಅವರು. ಬೆಂಗಳೂರಿನಲ್ಲಿ ಫೈಟ್ ದೃಶ್ಯಗಳ ಚಿತ್ರೀಕರಣದಲ್ಲಿ ಸಿಮ್ರನ್ ಪಾಲ್ಗೊಂಡಿದ್ದಾರೆ.