ಆ್ಯಪ್ನಗರ

ಶೀಘ್ರದಲ್ಲೇ ತೆರೆಗೆ ಬರುತ್ತಿದೆ ಎನ್‌ಆರ್‌ಐಗಳ ಕನ್ನಡ ಸಿನಿಮಾ

ವಿದೇಶಗಳಲ್ಲಿ ನೆಲೆಸಿರುವ ಭಾರತೀಯರ ತಂಡವೊಂದು ಕನ್ನಡ ಸಿನಿಮಾ ಮಾಡುತ್ತಿದೆ. ರತ್ನಮಂಜರಿ ಹೆಸರಿನ ಈ ಚಿತ್ರವನ್ನು ವಿದೇಶದಲ್ಲೂ ಚಿತ್ರೀಕರಿಸಲಾಗಿದೆ.

Vijaya Karnataka 23 Mar 2019, 11:27 am
ಹೊಸಬರು ಕನ್ನಡ ಚಿತ್ರರಂಗಕ್ಕೆ ಹೆಚ್ಚು ವಿಭಿನ್ನ ಚಿತ್ರಗಳೊಂದಿಗೆ ಕಾಲಿಡುತ್ತಿದ್ದಾರೆ. ಈಗ ಅನಿವಾಸಿ ಭಾರತೀಯರ ತಂಡವೊಂದು ಇಂಥ ಸಾಹಸಕ್ಕೆ ಕೈಹಾಕಿದೆ. ರತ್ನಮಂಜರಿ ಹೆಸರಿನ ಚಿತ್ರವನ್ನು ತೆರೆಗೆ ತರಲು ಸಜ್ಜಾಗುತ್ತಿದೆ. ಎನ್‌ ಆರ್‌ ಐ ಪ್ರಸಿದ್ಧ್‌ ಚಿತ್ರ ನಿರ್ದೇಶನ ಮಾಡಿದ್ದಾರೆ.
Vijaya Karnataka Web akhila-prakash


ಮಡಿಕೇರಿಯಲ್ಲಿ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಹಾಡುಗಳ ಚಿತ್ರೀಕರಣವನ್ನೂ ಇಲ್ಲಿ ಮಾಡಲಾಗಿದೆ. ಅಲ್ಲದೆ ವಿದೇಶದಲ್ಲಿ ಕೆಲವು ಭಾಗ ಶೂಟ್‌ ಆಗಿದೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಸಾಗಿದೆ.

ಚಿತ್ರದಲ್ಲಿ ರಾಜ್‌ ಚರಣ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಅಖಿಲಾ ಪ್ರಕಾ ನಾಯಕಿಯಾಗಿ ನಟಿಸಿದ್ದಾರೆ. ಇವರು ಈ ಮೊದಲು ಓಳ್‌ ಮುನ್ಸಾಮಿ ಚಿತ್ರದಲ್ಲಿ ನಟಿಸಿದ್ದರು.

ಚಿತ್ರಕ್ಕೆ ಬೇರೆ ಬೇರೆ ದೇಶಗಳಲ್ಲಿ ನೆಲೆಸಿರುವ ಸ್ನೇಹಿತರೆಲ್ಲಾ ಸೇರಿ ಬಂಡವಾಳ ಹೂಡಿದ್ದಾರೆ. ಈ ಮೂಲಕ ಮತ್ತೆ ಒಂದಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಸಂದೀಪ್‌ ಚಿತ್ರ ನಿರ್ಮಾಪಕರಲ್ಲಿ ಒಬ್ಬರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌