* ಶರಣು ಹುಲ್ಲೂರು
ರಿಯಾಲಿಟಿ ಶೋ ಒಂದರಿಂದ ಹೊರಬಂದ ಮೇಲೆ ಕಾದಾಡಿಕೊಂಡು ಸುದ್ದಿಯಾಗಿದ್ದ ನಟರಾದ ಭವನ್ ಮತ್ತು ಪ್ರಥಮ್ ಇದೀಗ ರಾಜಿಯಾಗಿದ್ದಾರೆ. ಜಗಳವಾದ ಸಂದರ್ಭದಲ್ಲಿ ಭುವನ್ ತೊಡೆಯನ್ನು ಪ್ರಥಮ್ ಕಚ್ಚಿ ಗಾಯಗೊಳಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಎರಡು ವರ್ಷಗಳ ಹಿಂದೆ ನಡೆದ ಈ ಘಟನೆ ಇದೀಗ ಸುಖಾಂತ್ಯಗೊಂಡಿದ್ದು, ಭುವನ್ಗೆ ಪ್ರಥಮ್ ಕ್ಷಮೆ ಕೇಳುವ ಮೂಲಕ ಪರಸ್ಪರ ಕೈ ಕುಲುಕಿದ್ದಾರೆ.
'ಎರಡು ವರ್ಷಗಳ ಹಿಂದೆ ಪ್ರಥಮ್ ಮತ್ತು ನನ್ನ ಮಧ್ಯೆ ಗಲಾಟೆ ಆಗಿದ್ದು ನಿಜ. ಅವತ್ತು ಅವರು ಬಲವಾಗಿ ನನ್ನ ತೊಡೆ ಕಚ್ಚಿದ್ದರು. ತಾವು ತಪ್ಪು ಮಾಡೇ ಇಲ್ಲಎಂದು ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನಪಟ್ಟಿದ್ದರು. ಈ ವಿಚಾರವಾಗಿ ನಾನು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದೆ. ಅವರು ಪ್ರತಿಯಾಗಿ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದರು. ಆನಂತರ ಸ್ಯಾಂಡಲ್ವುಡ್ನ ಅನೇಕರು ನಮ್ಮಿಬ್ಬರ ಮಧ್ಯೆ ಸಂಧಾನಕ್ಕೆ ಮುಂದಾದರು. ಎಲ್ಲ ಹಿರಿಯರ ಮಾತಿಗೆ ಬೆಲೆ ಕೊಟ್ಟು ಒಪ್ಪಿಕೊಂಡೆ. ಆದರೆ, ಪ್ರಥಮ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎನ್ನುವುದು ನನ್ನ ಬೇಡಿಕೆ ಆಗಿತ್ತು. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಹಾಗಾಗಿ ನಾನು ಕೇಸ್ ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದ್ದೇನೆ' ಎನ್ನುತ್ತಾರೆ ಭುವನ್.
ಪಬ್ಲಿಕ್ನಲ್ಲಿ ಕ್ಷಮೆ ಕೇಳಿದ ಪ್ರಥಮ್
ಸಾರ್ವಜನಿಕರ ಎದುರು ಕ್ಷಮೆ ಕೇಳಿದರೆ ಕೇಸ್ ವಾಪಸ್ ಪಡೆಯುವುದಾಗಿ ಭುವನ್ ಹೇಳಿದ್ದರು. ಅದಕ್ಕೆ ಒಪ್ಪಿಕೊಂಡ ಪ್ರಥಮ್, ಸೋಮವಾರ ಸಂಜೆ ಭುವನ್ ಅವರ ಲಾಯರ್ ಮತ್ತು ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾನು ಭುವನ್ಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದು ಸತ್ಯ. ಈಗ ನಾನು ಬದಲಾಗಿದ್ದೇನೆ. ಈ ವರ್ಷದ ಅಂತ್ಯಕ್ಕೆ ಮದುವೆಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಹಿಂಸೆ ನೀಡಿದ್ದಲ್ಲದೆ, ಮಾನಹಾನಿ ಮಾಡುವಂಥ ಹೇಳಿಕೆ ಕೊಟ್ಟಿದ್ದರು. ಈಗ ಅವರೇ ಬಂದು ಕೇಸ್ ವಾಪಸ್ ಪಡೆಯುವಂತೆ ಕೇಳಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದರಿಂದ ಕೇಸ್ ಹಿಂದಕ್ಕೆ ಪಡೆಯುತ್ತಿದ್ದೇನೆ.
-ಭುವನ್, ನಟ
ರಿಯಾಲಿಟಿ ಶೋ ಒಂದರಿಂದ ಹೊರಬಂದ ಮೇಲೆ ಕಾದಾಡಿಕೊಂಡು ಸುದ್ದಿಯಾಗಿದ್ದ ನಟರಾದ ಭವನ್ ಮತ್ತು ಪ್ರಥಮ್ ಇದೀಗ ರಾಜಿಯಾಗಿದ್ದಾರೆ. ಜಗಳವಾದ ಸಂದರ್ಭದಲ್ಲಿ ಭುವನ್ ತೊಡೆಯನ್ನು ಪ್ರಥಮ್ ಕಚ್ಚಿ ಗಾಯಗೊಳಿಸಿದ್ದರು. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಎರಡು ವರ್ಷಗಳ ಹಿಂದೆ ನಡೆದ ಈ ಘಟನೆ ಇದೀಗ ಸುಖಾಂತ್ಯಗೊಂಡಿದ್ದು, ಭುವನ್ಗೆ ಪ್ರಥಮ್ ಕ್ಷಮೆ ಕೇಳುವ ಮೂಲಕ ಪರಸ್ಪರ ಕೈ ಕುಲುಕಿದ್ದಾರೆ.
'ಎರಡು ವರ್ಷಗಳ ಹಿಂದೆ ಪ್ರಥಮ್ ಮತ್ತು ನನ್ನ ಮಧ್ಯೆ ಗಲಾಟೆ ಆಗಿದ್ದು ನಿಜ. ಅವತ್ತು ಅವರು ಬಲವಾಗಿ ನನ್ನ ತೊಡೆ ಕಚ್ಚಿದ್ದರು. ತಾವು ತಪ್ಪು ಮಾಡೇ ಇಲ್ಲಎಂದು ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನಪಟ್ಟಿದ್ದರು. ಈ ವಿಚಾರವಾಗಿ ನಾನು ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದೆ. ಅವರು ಪ್ರತಿಯಾಗಿ ನನ್ನ ಮೇಲೆ ಕಂಪ್ಲೆಂಟ್ ಕೊಟ್ಟಿದ್ದರು. ಆನಂತರ ಸ್ಯಾಂಡಲ್ವುಡ್ನ ಅನೇಕರು ನಮ್ಮಿಬ್ಬರ ಮಧ್ಯೆ ಸಂಧಾನಕ್ಕೆ ಮುಂದಾದರು. ಎಲ್ಲ ಹಿರಿಯರ ಮಾತಿಗೆ ಬೆಲೆ ಕೊಟ್ಟು ಒಪ್ಪಿಕೊಂಡೆ. ಆದರೆ, ಪ್ರಥಮ್ ಬಹಿರಂಗವಾಗಿ ಕ್ಷಮೆ ಕೇಳಬೇಕು ಎನ್ನುವುದು ನನ್ನ ಬೇಡಿಕೆ ಆಗಿತ್ತು. ಅದಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಹಾಗಾಗಿ ನಾನು ಕೇಸ್ ವಾಪಸ್ ಪಡೆದುಕೊಳ್ಳಲು ನಿರ್ಧರಿಸಿದ್ದೇನೆ' ಎನ್ನುತ್ತಾರೆ ಭುವನ್.
ಪಬ್ಲಿಕ್ನಲ್ಲಿ ಕ್ಷಮೆ ಕೇಳಿದ ಪ್ರಥಮ್
ಸಾರ್ವಜನಿಕರ ಎದುರು ಕ್ಷಮೆ ಕೇಳಿದರೆ ಕೇಸ್ ವಾಪಸ್ ಪಡೆಯುವುದಾಗಿ ಭುವನ್ ಹೇಳಿದ್ದರು. ಅದಕ್ಕೆ ಒಪ್ಪಿಕೊಂಡ ಪ್ರಥಮ್, ಸೋಮವಾರ ಸಂಜೆ ಭುವನ್ ಅವರ ಲಾಯರ್ ಮತ್ತು ಮಾಧ್ಯಮಗಳ ಮುಂದೆ ಬಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ನಾನು ಭುವನ್ಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದು ಸತ್ಯ. ಈಗ ನಾನು ಬದಲಾಗಿದ್ದೇನೆ. ಈ ವರ್ಷದ ಅಂತ್ಯಕ್ಕೆ ಮದುವೆಯಾಗುತ್ತಿದ್ದೇನೆ ಎಂದು ಹೇಳಿದ್ದಾರೆ.
ನನಗೆ ಹಿಂಸೆ ನೀಡಿದ್ದಲ್ಲದೆ, ಮಾನಹಾನಿ ಮಾಡುವಂಥ ಹೇಳಿಕೆ ಕೊಟ್ಟಿದ್ದರು. ಈಗ ಅವರೇ ಬಂದು ಕೇಸ್ ವಾಪಸ್ ಪಡೆಯುವಂತೆ ಕೇಳಿದ್ದಾರೆ. ಅವರು ಬಹಿರಂಗವಾಗಿ ಕ್ಷಮೆ ಕೇಳಿದ್ದರಿಂದ ಕೇಸ್ ಹಿಂದಕ್ಕೆ ಪಡೆಯುತ್ತಿದ್ದೇನೆ.
-ಭುವನ್, ನಟ