ಆ್ಯಪ್ನಗರ

ಒಂದ್‌ ಕತೆ ಹೇಳ್ಲಾ ಚಿತ್ರದಲ್ಲಿ ನಟರ ದಂಡು

ಒಂದ್‌ ಕತೆ ಹೇಳ್ಲಾ ಎಂಬ ಹಾರರ್‌ ಥ್ರಿಲ್ಲರ್‌ ಸಿನಿಮಾದಲ್ಲಿ 5 ಸ್ಟೋರಿಗಳಿದ್ದು, ಒಂದೊಂದು ಸ್ಟೋರಿಯಲ್ಲಿ ಒಂದೊಂದು ನಟರ ತಂಡ ಕಾಣಿಸಿಕೊಂಡಿದೆ.

Vijaya Karnataka 1 Mar 2019, 5:00 am
ಹೊಸಬರು ಕನ್ನಡದಲ್ಲಿ ಪ್ರಯೋಗಾತ್ಮಕ ಚಿತ್ರವೊಂದನ್ನು ಮಾಡಿದ್ದಾರೆ. ಗಿರೀಶ್‌ ನಿರ್ದೇಶನದ ಚಿತ್ರ ಒಂದ್‌ ಕತೆ ಹೇಳ್ಲಾ. ಚಿತ್ರದ ಹೆಸರೇ ಹೇಳುವಂತೆ ಚಿತ್ರದಲ್ಲಿ 5 ಕತೆಗಳನ್ನು ಹೇಳುತ್ತಿದ್ದಾರೆ. ಎಲ್ಲವೂ ಹಾರರ್‌ ಸ್ಟೋರಿಗಳೇ. ಇವೆಲ್ಲವನ್ನೂ ಒಂದೊಂದು ಕಾನ್ಸೆಪ್ಟ್‌ ಇಟ್ಟುಕೊಂಡು ಬರೆದಿದ್ದಾರೆ ಗಿರೀಶ್‌. ಬಹುತೇಕ ಹೊಸಬರೆ ನಟಿಸಿರುವ ಚಿತ್ರ ಇದು.
Vijaya Karnataka Web ond kathe12


'ದೆವ್ವದಲ್ಲಿ ನಂಬಿಕೆ ಇರಲಿ ಬಿಡಲಿ ಎಲ್ಲರಿಗೂ ಕುತೂಹಲ ಇದೆ. ಹಾರರ್‌ ಚಿತ್ರದ ಥ್ರಿಲ್‌ ಅನುಭವಿಸಲು ಇಷ್ಟಪಡುತ್ತಾರೆ. ಹಾಗಾಗಿ ಇಂಥದ್ದೊಂದು ಸಿನಿಮಾವನ್ನು ವಿಭಿನ್ನವಾಗಿ ಮಾಡಬೇಕು ಎಂದು ನಿರ್ಧರಿಸಿದೆ. ಈ ಚಿತ್ರದಲ್ಲಿ ಹಲವು ರೀತಿಯ ಕತೆಗಳಿವೆ' ಎಂದಿದ್ದಾರೆ ಗಿರೀಶ್‌.

ಯಾವ ಊರಿನಲ್ಲೂ ಭಕ್ತ ಪ್ರಹ್ಲಾದ ನಾಟಕವನ್ನು ಯಾಕೆ ವೇದಿಕೆಯ ಮೇಲೆ ಪ್ರದರ್ಶನ ಆಗುವುದಿಲ್ಲ ಎಂಬುದಕ್ಕೆ ಏನು ಕಾರಣ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆಯಂತೆ. 'ಭಕ್ತ ಪ್ರಹ್ಲಾದ ನಾಟಕವನ್ನು ಯಾರೂ ಆಡುವುದಿಲ್ಲ. ಯಾಕೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಇದರ ಬಗ್ಗೆ ಹಲವು ಊರುಗಳ ಹಿರಿಯರನ್ನು ಮಾತನಾಡಿಸಿ, ತಿಳಿದುಕೊಂಡು ಅದನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದೇವೆ' ಎನ್ನುತ್ತಾರೆ ನಿರ್ದೇಶಕ ಗಿರೀಶ್‌.

ಚಿತ್ರದಲ್ಲಿ 2 ಹಾಡುಗಳಿದ್ದು, ಈಗಾಗಲೇ ಆನ್‌ಲೈನ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಮೂಡಿ ಬಂದಿದೆ. ಒಂದು ಹಾಡನ್ನು ಶಿವಕುಮಾರ್‌ ಶೆಟ್ಟಿ ಬರೆದಿದ್ದು, ರೋಣದ ಬಕೇಶ್‌ ಮತ್ತು ಕಾರ್ತಿಕ್‌ ಸಂಗೀತ ನೀಡಿದ್ದಾರೆ. ಕೀರ್ತನ್‌ ಪೂಜಾರಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರ ಮಾ. 8ರಂದು ರಿಲೀಸ್‌ ಆಗಲಿದೆ. ಚಿತ್ರದಲ್ಲಿ ಕಿರುತೆರೆಯ ಜನಪ್ರಿಯ ನಟ ತಾಂಡವ್‌ ರಾಮ್‌, ರಂಗಿತರಂಗ ಖ್ಯಾತಿಯ ಕಾರ್ತಿಕ್‌ ರಾವ್‌ ಮತ್ತಿತರರು ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌