ಆ್ಯಪ್ನಗರ

ಪದ್ಮ ಪ್ರಶಸ್ತಿಗೆ ಪಾತ್ರರಾದ ಪ್ರಭುದೇವ, ಮೋಹನ್‌ಲಾಲ್ ಹಾಗೂ ಶಂಕರ್ ಮಹದೇವನ್

ಭಾರತೀಯ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸಿದವರಲ್ಲಿ ನಟ, ನಿರ್ದೇಶಕ, ನೃತ್ಯಪಟು ಪ್ರಭುದೇವ, ಮಲೆಯಾಳಂ ನಟ ಮೋಹನ್ ಲಾಲ್ ಹಾಗೂ ಖ್ಯಾತ ಗಾಯಕ ಶಂಕರ್ ಮಹದೇವನ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

Vijaya Karnataka Web 11 Mar 2019, 8:13 pm
ಈ ವರ್ಷದ ಜನವರಿಯಲ್ಲಿ, ಅಂದರೆ ಜನವರಿ 2019ರಲ್ಲಿ ಕೇಂದ್ರ ಸರ್ಕಾರವು 2019 ಸಾಲಿನ ಪದ್ಮ ಶ್ರೀ, ಪದ್ಮ ಭೂಷಣ, ಪದ್ಮ ವಿಭೂಷಣ ಹಾಗೂ ಭಾರತ ರತ್ನ ಪ್ರಶಸ್ತಿಗಳನ್ನು ಘೋಷಣೆ ಮಾಡಿತ್ತು. ಇಂದು ಈ ಪ್ರಶಸ್ತಿಗಳ ಪ್ರಧಾನ ಸಮಾರಂಭ ನಡೆದಿದೆ.
Vijaya Karnataka Web padmashri


ಭಾರತೀಯ ಚಿತ್ರೋದ್ಯಮದಲ್ಲಿ ಸೇವೆ ಸಲ್ಲಿಸಿದವರಲ್ಲಿ ನಟ, ನಿರ್ದೇಶಕ, ನೃತ್ಯಪಟು ಪ್ರಭುದೇವ, ಮಲೆಯಾಳಂ ನಟ ಮೋಹನ್ ಲಾಲ್ ಹಾಗೂ ಖ್ಯಾತ ಗಾಯಕ ಶಂಕರ್ ಮಹದೇವನ್ ಅವರಿಗೆ ಪದ್ಮ ಪ್ರಶಸ್ತಿ ಲಭಿಸಿದೆ.

ಇಂದು, ಮಾರ್ಚ್ 11, 2019ರಂದು, ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮ್‌ನಾಥ್ ಕೋವಿಂದ್ ಅವರು ಭಾರತೀಯ ಚಿತ್ರರಂಗದ ಈ ಮೂರು ದಿಗ್ಗಜರಿಗೆ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.

ಪದ್ಮ ಭೂಷಣ ಪ್ರಶಸ್ತಿ ಪಡೆದು ಮಾತನಾಡಿರುವ ನಟ ಮೋಹನ್ ಲಾಲ್ ಅವರು ''ನಾನು ಚಿತ್ರರಂಗಕ್ಕೆ ಬಂದು 41 ವರ್ಷಗಳಾಗಿವೆ. ಈ ಪ್ರಶಸ್ತಿಯನ್ನು ನಾನು ನನ್ನ ಚಿತ್ರರಂಗದ ಮಿತ್ರರಿಗೆ ಹಾಗೂ ನನಗೆ ಪ್ರೋತ್ಸಾಹ ನೀಡಿದ ಕುಟುಂಬದವರಿಗೆ ಅರ್ಪಿಸುತ್ತಿದ್ದೇನೆ.'' ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಪ್ರದ್ಮಶ್ರೀ ಪಡೆದ ಅನುಭವ ಹಾಗೂ ಖುಷಿಯನ್ನು ನಟ ಪ್ರಭುದೇವ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ತಾಯಿಯೊಂದಿಗೆ ಇರುವ ಫೋಟೋ ಹಾಕಿ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌