-ಹರೀಶ್ ಬಸವರಾಜ್
*ಪೈಲ್ವಾನ್ ಸಿನಿಮಾದ ಕಥೆಯ ಎಳೆಯನ್ನು ಕೃಷ್ಣ ನಿಮಗೆ ಹೇಳಿದಾಗ ಒಮ್ಮೆಲೆ ಒಪ್ಪಿಕೊಂಡ್ರ ಅಥವಾ ಯೋಚನೆ ಮಾಡಿದ್ರಾ?
ಕೃಷ್ಣ ಅವರ ಜತೆ ಒಮ್ಮೆ ಮಾತನಾಡುವಾಗ ಒಂದು ಸ್ಪೋರ್ಟ್ಸ್ ಮಾದರಿಯ ಕಥೆ ಮಾಡಿ, ಮತ್ತೆ ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದ್ದೆ. ಅದಾಗಿ ಒಂದು ತಿಂಗಳಲ್ಲಿ ಅವರು ನನಗೆ ಪೈಲ್ವಾನ್ ಸಿನಿಮಾದ ಲೈನ್ ಹೇಳಿದರು. ಕೇಳಿದ ತಕ್ಷಣ ನಾನು, ದಯಮಾಡಿ ಈ ಸ್ಕ್ರಿಪ್ಟನ್ನು ನನ್ನ ಬಳಿ ತರಲೇಬೇಡ ಎಂದು ಹೇಳಿ ಕಳಿಸಿದ್ದೆ. ಆಮೇಲೆ ಯೋಚನೆ ಮಾಡಿ ಅವರನ್ನು ಕರೆದೆ. ಈ ಸಿನಿಮಾ ಮಾಡಬೇಕು ಎಂದರೆ ನೀವು ನನಗೆ ಸಾಥ್ ಕೊಡಬೇಕು. ನಾನು ಸಕ್ಸಸ್ ಆಗುತ್ತೇನೋ ಇಲ್ಲವೊ ಗೊತ್ತಿಲ್ಲ. ಆದರೆ ಹಾರ್ಡ್ವರ್ಕ್ ಮಾಡುತ್ತೇನೆ. ನೀವು ನನ್ನ ಜತೆ ಆ ರೀತಿ ಹಾರ್ಡ್ ವರ್ಕ್ ಮಾಡಲು ರೆಡಿ ಇದ್ದೀರಾ ಎಂದು ಕೇಳಿದೆ. ಅದಕ್ಕೆ ಕೃಷ್ಣ ಒಪ್ಪಿದರು. ಇಡೀ ಸಿನಿಮಾದ ಶೂಟಿಂಗ್ನ್ನು ಬೇರೆ ಕಡೆ ಮಾಡಲು ಸೂಚಿಸಿದೆ. ವರ್ಕೌಟ್ ಮಾಡುವುದು, ಶೂಟಿಂಗ್ ಮಾಡುವುದು ಇಷ್ಟು ಮಾತ್ರ ಅಲ್ಲಿ ಆಗಬೇಕು. ಸುಖಾ ಸುಮ್ಮನೆ ಚಿತ್ರೀಕರಣದ ಜಾಗಕ್ಕೆ ಬೇರೆ ಯಾರೂ ಬರಬಾರದು. ಬೆಳಗ್ಗೆ 6ಕ್ಕೆ ಚಿತ್ರೀಕರಣ ಆರಂಭವಾಗುವಂತೆ ಶೆಡ್ಯೂಲ್ ಹಾಕಿಕೊಂಡರೆ ಅದು ಆರಕ್ಕೇ ಆರಂಭವಾಗಬೇಕು. ಹೀಗೆ ಮಾಡಿಕೊಂಡು ಬಂದರೆ ಮಾತ್ರ ನಾನು ಈ ಸ್ಕ್ರಿಪ್ಟ್ಗೆ ತಕ್ಕಂತೆ ರೆಡಿಯಾಗಿ ನಟಿಸುತ್ತೇನೆ ಎಂದು ಹೇಳಿದೆ. ಅದರಂತೆ ಕೃಷ್ಣ ಆ್ಯಂಡ್ ಟೀಮ್ ಕೆಲಸ ಮಾಡಿತು.
* ಬಿಡುಗಡೆಯಾಗಿದ್ದು ಎರಡು ಪೋಸ್ಟರ್, ಒಂದು ಟೀಸರ್. ಆದರೆ ಸಿನಿಮಾ ಕ್ರಿಯೇಟ್ ಮಾಡಿರುವ ಹೈಪ್ ದೊಡ್ಡದು. ಇದರ ಬಗ್ಗೆ ಹೇಳಿ?
ಹೌದು. ಆದರೆ ಎರಡು ಪೋಸ್ಟರ್ ಮತ್ತು ಒಂದು ಟೀಸರ್ ಹಿಂದಿರುವ ಶ್ರಮ ಬಹಳ ದೊಡ್ಡದು. ನಾನು ವರ್ಕೌಟ್ ಮಾಡಿಕೊಂಡು, ಡಯೆಟ್ ಮೆಂಟೇನ್ ಮಾಡಿಕೊಂಡು ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಅದರಂತೆ ನನ್ನ ಟೀಮ್ ಕೂಡ ನನ್ನ ಜತೆ ಕೆಲಸ ಮಾಡಿತು. ಅವರೆಲ್ಲರೂ ನನಗೆ ಪ್ರೋತ್ಸಾಹ ನೀಡಿದರು. ಜತೆಗೆ ಇಂತಹ ಒಂದು ಸಿನಿಮಾವನ್ನು ಅತ್ಯುತ್ತಮವಾಗಿ ಮಾಡಬೇಕು. ಮೇಕಿಂಗ್ ವಿಚಾರದಲ್ಲಿ ಕಾಂಪ್ರಮೈಸ್ ಆಗಬಾರದು ಎಂದು ನಿರ್ಧರಿಸಿದೆವು. ಇಡೀ ಟೀಂ ನನ್ನ ಜತೆ ಕಷ್ಟಪಟ್ಟಿತು. ಒಂದು ಪಾತ್ರಕ್ಕಾಗಿ ನಾನು ಅಷ್ಟೊಂದು ವರ್ಕೌಟ್ ಮಾಡಿದಾಗ ಅದನ್ನು ಸಿನಿಮಾದಲ್ಲಿ ಹೇಗೆ ಉಪಯೋಗಿಸಿಕೊಂಡರು ಎನ್ನುವುದು ಮುಖ್ಯ. ಈಗ ಬಂದಿರುವ ರಿಸಲ್ಟ್ ಅವೆಲ್ಲವನ್ನೂ ಹೇಳುತ್ತಿದೆ.
*ಪೈಲ್ವಾನ್ ಸಿನಿಮಾಗಾಗಿ ನೀವು ಇಡೀ ಭಾರತೀಯ ಚಿತ್ರರಂಗವನ್ನು ಒಟ್ಟು ಮಾಡಿದ್ದೀರಾ?
ಇದು ಮತ್ತೊಮ್ಮೆ ಶ್ರಮ ಮತ್ತು ವೃತ್ತಿಪರತೆಗೆ ಸಿಕ್ಕ ಬೆಲೆ ಅಂದುಕೊಳ್ಳುತ್ತೇನೆ. ಸಲ್ಮಾನ್ ಖಾನ್ ಅವರ ಜತೆ ನಾನು ನಟಿಸಲೇಬೇಕು ಎಂದು ಅವರು ಯಾಕೆ ಅಂದುಕೊಳ್ತಾರೆ ಅನ್ನೋದು ಅವರಿಗೇ ಗೊತ್ತು. ಅದನ್ನು ಅವರೇ ಒಂದು ದಿನ ಹೇಳುತ್ತಾರೆ. ನಾನು ಒಂದು ಬಾರಿ ಕೇಳಿಕೊಂಡಿದ್ದಕ್ಕೆ ಚಿರಂಜೀವಿ, ವಿಜಯ್ ಸೇತುಪತಿ, ಮೋಹನ್ಲಾಲ್ ಎಲ್ಲರೂ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟರು. ಅವರೆಲ್ಲರ ಜತೆ ನಾನು ನಟಿಸಿದ್ದೇನೆ, ಅವರಿಗೆ ನನ್ನ ಕೆಲಸದ ಬಗ್ಗೆ ಗೊತ್ತಿದೆ. ಹಾಗಾಗಿ ತಮ್ಮ ಬಿಜಿ ಶೆಡ್ಯೂಲ್ನಲ್ಲಿಯೂ ನನ್ನ ಸಿನಿಮಾಗೆ ಸಪೋರ್ಟ್ ಮಾಡಿದ್ರು. ಇನ್ನು ಚಿರಂಜೀವಿ ಅವರಿಗೆ ಟ್ವಿಟರ್ ಅಕೌಂಟ್ ಇಲ್ಲದ ಕಾರಣ, ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ರಿಲೀಸ್ ಮಾಡಿದ್ದೇನೆ ಎಂದು ಫೋಟೋ ಕಳಿಸಿದ್ದರು. ಕನ್ನಡ ಇಂಡಸ್ಟ್ರಿಯನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತೇವೆ ಅನ್ನುವುದಕ್ಕಿಂತ ನಮ್ಮ ಕನ್ನಡ ಸಿನಿಮಾಗಳ ಗುಣಮಟ್ಟವನ್ನು ತೆಗೆದುಕೊಂಡು ಹೋದರೆ ಸಾಕು. ಆ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದೇನೆ.
*ನಿಮ್ಮ ಡಬ್ಬಿಂಗ್ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಇತ್ತು. ಆದರೆ ಪೈಲ್ವಾನ್ ಚಿತ್ರವನ್ನು ಐದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಮಾಡುವ ಯೋಚನೆ ಯಾಕೆ ಬಂತು?
ನಾವು ಸಿನಿಮಾ ಆರಂಭಿಸಿದಾಗಲೇ ಈ ಯೋಚನೆ ಮಾಡಿದೆವು. ಕೃಷ್ಣ, ಸ್ವಪ್ನ ಕೃಷ್ಣ ಮತ್ತು ದೇವು ಸೇರಿ ಎಲ್ಲರೂ ಸಹ ಇದಕ್ಕೆ ಸಾಥ್ ನೀಡಿದರು. ಜತೆಗೆ ಅವರು ರೆಗ್ಯುಲರ್ ನಿರ್ಮಾಪಕರಲ್ಲ. ಆದರೂ ಬಹಳ ಬುದ್ಧಿವಂತಿಕೆಯಿಂದ ಬಹಳ ಶ್ರಮವಹಿಸಿ ಕೆಲಸ ಮಾಡಿದರು. ಈ ಮೂವರ ಕೆಲಸಕ್ಕೆ ನಾನು ನಿಜಕ್ಕೂ ಹೆಮ್ಮೆಪಡುತ್ತೇನೆ. ತುಂಬಾ ಸಂತೋಷಪಟ್ಟಿದ್ದೇನೆ. ಅವರ ಧೈರ್ಯ ಮತ್ತು ಕೆಲಸ ಮಾಡಿದ, ಮಾಡುತ್ತಿರುವ ರೀತಿ ಎಲ್ಲವೂ ನನಗೆ ಖುಷಿ ತಂದಿದೆ. ಕೆಜಿಎಫ್ ಸಿನಿಮಾದ ನಿರ್ಮಾಪಕರು ಅಷ್ಟೊಂದು ಖರ್ಚು ಮಾಡಿ ಅದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇವತ್ತಿಗೆ ಎಲ್ಲವೂ ಚೆನ್ನಾಗಿದೆ ಅನ್ನಿಸುತ್ತದೆ. ಆದರೆ ಒಂಚೂರು ಹೆಚ್ಚು ಕಮ್ಮಿ ಆಗಿದ್ದರೆ ಬಹಳ ಕಷ್ಟವಾಗುತ್ತಿತ್ತು. ಹಾಗಾಗಿ ಮಾಡುವ ಕೆಲಸವನ್ನು ಬಹಳ ನೀಟ್ ಆಗಿ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ.
*ಇಷ್ಟು ಬಿಝಿ ಶೆಡ್ಯೂಲ್ನ ನಡುವೆಯೂ ಮಗಳಿಗೆ ಮತ್ತು ಮನೆಗೆ ಸಮಯ ಹೇಗೆ ನೀಡುತ್ತಿದ್ದೀರಾ?
ಬಹುಶಃ ನನ್ನ ಸುತ್ತ ಇರುವವರು ನನಗಿಂತಲೂ ಪ್ರಬುದ್ಧರಾಗಿದ್ದಾರೆ. ನನ್ನ ಕೆಲಸದ ತೀವ್ರತೆಯನ್ನು ಅರಿತುಕೊಂಡಿದ್ದಾರೆ. ನನಗೆ ಸಮಯ ಸಿಕ್ಕರೆ ನಾನು ಬಂದು ಫ್ಯಾಮಿಲಿ ಜತೆ ಸ್ನೇಹಿತರ ಜತೆ ಸೇರಿಕೊಳ್ಳುತ್ತೇನೆ. ಅದೇ ರೀತಿ ಅವರಿಗೆ ಫ್ರೀ ಇದ್ದರೆ ನನ್ನೊಟ್ಟಿಗೆ ಬಂದು ಸೇರುತ್ತಾರೆ. ಅದರಲ್ಲೂ ನನ್ನ ಸ್ನೇಹಿತರಂತೂ ನನ್ನ ಜತೆ ಸಾವಿರಾರು ದೂರ ಪ್ರಯಾಣ ಕೂಡ ಮಾಡಿಕೊಂಡು ಸಮಯ ಕಳೆಯುತ್ತಾರೆ. ಈ ವಿಚಾರದಲ್ಲಿ ನಾನು ಅದೃಷ್ಟವಂತ.
---
ಪೈಲ್ವಾನ್ ಸಿನಿಮಾ ಒಂದು ಯೂನಿವರ್ಸಲ್ ಸಬ್ಜೆಕ್ಟ್. ಒಂದು ಸ್ಕ್ರಿಪ್ಟನ್ನು ಒಪ್ಪಿಕೊಳ್ಳುವುದು ದೊಡ್ಡದಲ್ಲ. ಅದಕ್ಕೆ ತಯಾರಾಗಿ, ಅದೇ ರೇಂಜ್ನಲ್ಲಿ ತೆರೆ ಮೇಲೆ ತರುವುದು ಬಹಳ ಮುಖ್ಯ. ಆ ಕೆಲಸವನ್ನು ನನ್ನ ಪೈಲ್ವಾನ್ ಟೀಮ್ ಮಾಡಿದೆ.
-ಸುದೀಪ್, ನಟ
*ಪೈಲ್ವಾನ್ ಸಿನಿಮಾದ ಕಥೆಯ ಎಳೆಯನ್ನು ಕೃಷ್ಣ ನಿಮಗೆ ಹೇಳಿದಾಗ ಒಮ್ಮೆಲೆ ಒಪ್ಪಿಕೊಂಡ್ರ ಅಥವಾ ಯೋಚನೆ ಮಾಡಿದ್ರಾ?
ಕೃಷ್ಣ ಅವರ ಜತೆ ಒಮ್ಮೆ ಮಾತನಾಡುವಾಗ ಒಂದು ಸ್ಪೋರ್ಟ್ಸ್ ಮಾದರಿಯ ಕಥೆ ಮಾಡಿ, ಮತ್ತೆ ಒಟ್ಟಿಗೆ ಕೆಲಸ ಮಾಡೋಣ ಎಂದು ಹೇಳಿದ್ದೆ. ಅದಾಗಿ ಒಂದು ತಿಂಗಳಲ್ಲಿ ಅವರು ನನಗೆ ಪೈಲ್ವಾನ್ ಸಿನಿಮಾದ ಲೈನ್ ಹೇಳಿದರು. ಕೇಳಿದ ತಕ್ಷಣ ನಾನು, ದಯಮಾಡಿ ಈ ಸ್ಕ್ರಿಪ್ಟನ್ನು ನನ್ನ ಬಳಿ ತರಲೇಬೇಡ ಎಂದು ಹೇಳಿ ಕಳಿಸಿದ್ದೆ. ಆಮೇಲೆ ಯೋಚನೆ ಮಾಡಿ ಅವರನ್ನು ಕರೆದೆ. ಈ ಸಿನಿಮಾ ಮಾಡಬೇಕು ಎಂದರೆ ನೀವು ನನಗೆ ಸಾಥ್ ಕೊಡಬೇಕು. ನಾನು ಸಕ್ಸಸ್ ಆಗುತ್ತೇನೋ ಇಲ್ಲವೊ ಗೊತ್ತಿಲ್ಲ. ಆದರೆ ಹಾರ್ಡ್ವರ್ಕ್ ಮಾಡುತ್ತೇನೆ. ನೀವು ನನ್ನ ಜತೆ ಆ ರೀತಿ ಹಾರ್ಡ್ ವರ್ಕ್ ಮಾಡಲು ರೆಡಿ ಇದ್ದೀರಾ ಎಂದು ಕೇಳಿದೆ. ಅದಕ್ಕೆ ಕೃಷ್ಣ ಒಪ್ಪಿದರು. ಇಡೀ ಸಿನಿಮಾದ ಶೂಟಿಂಗ್ನ್ನು ಬೇರೆ ಕಡೆ ಮಾಡಲು ಸೂಚಿಸಿದೆ. ವರ್ಕೌಟ್ ಮಾಡುವುದು, ಶೂಟಿಂಗ್ ಮಾಡುವುದು ಇಷ್ಟು ಮಾತ್ರ ಅಲ್ಲಿ ಆಗಬೇಕು. ಸುಖಾ ಸುಮ್ಮನೆ ಚಿತ್ರೀಕರಣದ ಜಾಗಕ್ಕೆ ಬೇರೆ ಯಾರೂ ಬರಬಾರದು. ಬೆಳಗ್ಗೆ 6ಕ್ಕೆ ಚಿತ್ರೀಕರಣ ಆರಂಭವಾಗುವಂತೆ ಶೆಡ್ಯೂಲ್ ಹಾಕಿಕೊಂಡರೆ ಅದು ಆರಕ್ಕೇ ಆರಂಭವಾಗಬೇಕು. ಹೀಗೆ ಮಾಡಿಕೊಂಡು ಬಂದರೆ ಮಾತ್ರ ನಾನು ಈ ಸ್ಕ್ರಿಪ್ಟ್ಗೆ ತಕ್ಕಂತೆ ರೆಡಿಯಾಗಿ ನಟಿಸುತ್ತೇನೆ ಎಂದು ಹೇಳಿದೆ. ಅದರಂತೆ ಕೃಷ್ಣ ಆ್ಯಂಡ್ ಟೀಮ್ ಕೆಲಸ ಮಾಡಿತು.
* ಬಿಡುಗಡೆಯಾಗಿದ್ದು ಎರಡು ಪೋಸ್ಟರ್, ಒಂದು ಟೀಸರ್. ಆದರೆ ಸಿನಿಮಾ ಕ್ರಿಯೇಟ್ ಮಾಡಿರುವ ಹೈಪ್ ದೊಡ್ಡದು. ಇದರ ಬಗ್ಗೆ ಹೇಳಿ?
ಹೌದು. ಆದರೆ ಎರಡು ಪೋಸ್ಟರ್ ಮತ್ತು ಒಂದು ಟೀಸರ್ ಹಿಂದಿರುವ ಶ್ರಮ ಬಹಳ ದೊಡ್ಡದು. ನಾನು ವರ್ಕೌಟ್ ಮಾಡಿಕೊಂಡು, ಡಯೆಟ್ ಮೆಂಟೇನ್ ಮಾಡಿಕೊಂಡು ಶೂಟಿಂಗ್ನಲ್ಲಿ ಪಾಲ್ಗೊಳ್ಳುತ್ತಿದ್ದೆ. ಅದರಂತೆ ನನ್ನ ಟೀಮ್ ಕೂಡ ನನ್ನ ಜತೆ ಕೆಲಸ ಮಾಡಿತು. ಅವರೆಲ್ಲರೂ ನನಗೆ ಪ್ರೋತ್ಸಾಹ ನೀಡಿದರು. ಜತೆಗೆ ಇಂತಹ ಒಂದು ಸಿನಿಮಾವನ್ನು ಅತ್ಯುತ್ತಮವಾಗಿ ಮಾಡಬೇಕು. ಮೇಕಿಂಗ್ ವಿಚಾರದಲ್ಲಿ ಕಾಂಪ್ರಮೈಸ್ ಆಗಬಾರದು ಎಂದು ನಿರ್ಧರಿಸಿದೆವು. ಇಡೀ ಟೀಂ ನನ್ನ ಜತೆ ಕಷ್ಟಪಟ್ಟಿತು. ಒಂದು ಪಾತ್ರಕ್ಕಾಗಿ ನಾನು ಅಷ್ಟೊಂದು ವರ್ಕೌಟ್ ಮಾಡಿದಾಗ ಅದನ್ನು ಸಿನಿಮಾದಲ್ಲಿ ಹೇಗೆ ಉಪಯೋಗಿಸಿಕೊಂಡರು ಎನ್ನುವುದು ಮುಖ್ಯ. ಈಗ ಬಂದಿರುವ ರಿಸಲ್ಟ್ ಅವೆಲ್ಲವನ್ನೂ ಹೇಳುತ್ತಿದೆ.
*ಪೈಲ್ವಾನ್ ಸಿನಿಮಾಗಾಗಿ ನೀವು ಇಡೀ ಭಾರತೀಯ ಚಿತ್ರರಂಗವನ್ನು ಒಟ್ಟು ಮಾಡಿದ್ದೀರಾ?
ಇದು ಮತ್ತೊಮ್ಮೆ ಶ್ರಮ ಮತ್ತು ವೃತ್ತಿಪರತೆಗೆ ಸಿಕ್ಕ ಬೆಲೆ ಅಂದುಕೊಳ್ಳುತ್ತೇನೆ. ಸಲ್ಮಾನ್ ಖಾನ್ ಅವರ ಜತೆ ನಾನು ನಟಿಸಲೇಬೇಕು ಎಂದು ಅವರು ಯಾಕೆ ಅಂದುಕೊಳ್ತಾರೆ ಅನ್ನೋದು ಅವರಿಗೇ ಗೊತ್ತು. ಅದನ್ನು ಅವರೇ ಒಂದು ದಿನ ಹೇಳುತ್ತಾರೆ. ನಾನು ಒಂದು ಬಾರಿ ಕೇಳಿಕೊಂಡಿದ್ದಕ್ಕೆ ಚಿರಂಜೀವಿ, ವಿಜಯ್ ಸೇತುಪತಿ, ಮೋಹನ್ಲಾಲ್ ಎಲ್ಲರೂ ಪೋಸ್ಟರ್ ಬಿಡುಗಡೆ ಮಾಡಿಕೊಟ್ಟರು. ಅವರೆಲ್ಲರ ಜತೆ ನಾನು ನಟಿಸಿದ್ದೇನೆ, ಅವರಿಗೆ ನನ್ನ ಕೆಲಸದ ಬಗ್ಗೆ ಗೊತ್ತಿದೆ. ಹಾಗಾಗಿ ತಮ್ಮ ಬಿಜಿ ಶೆಡ್ಯೂಲ್ನಲ್ಲಿಯೂ ನನ್ನ ಸಿನಿಮಾಗೆ ಸಪೋರ್ಟ್ ಮಾಡಿದ್ರು. ಇನ್ನು ಚಿರಂಜೀವಿ ಅವರಿಗೆ ಟ್ವಿಟರ್ ಅಕೌಂಟ್ ಇಲ್ಲದ ಕಾರಣ, ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ರಿಲೀಸ್ ಮಾಡಿದ್ದೇನೆ ಎಂದು ಫೋಟೋ ಕಳಿಸಿದ್ದರು. ಕನ್ನಡ ಇಂಡಸ್ಟ್ರಿಯನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತೇವೆ ಅನ್ನುವುದಕ್ಕಿಂತ ನಮ್ಮ ಕನ್ನಡ ಸಿನಿಮಾಗಳ ಗುಣಮಟ್ಟವನ್ನು ತೆಗೆದುಕೊಂಡು ಹೋದರೆ ಸಾಕು. ಆ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಸಿನಿಮಾಗಳನ್ನು ಮಾಡುತ್ತಿದ್ದೇನೆ.
*ನಿಮ್ಮ ಡಬ್ಬಿಂಗ್ ಸಿನಿಮಾಗಳಿಗೆ ದೊಡ್ಡ ಬೇಡಿಕೆ ಇತ್ತು. ಆದರೆ ಪೈಲ್ವಾನ್ ಚಿತ್ರವನ್ನು ಐದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಮಾಡುವ ಯೋಚನೆ ಯಾಕೆ ಬಂತು?
ನಾವು ಸಿನಿಮಾ ಆರಂಭಿಸಿದಾಗಲೇ ಈ ಯೋಚನೆ ಮಾಡಿದೆವು. ಕೃಷ್ಣ, ಸ್ವಪ್ನ ಕೃಷ್ಣ ಮತ್ತು ದೇವು ಸೇರಿ ಎಲ್ಲರೂ ಸಹ ಇದಕ್ಕೆ ಸಾಥ್ ನೀಡಿದರು. ಜತೆಗೆ ಅವರು ರೆಗ್ಯುಲರ್ ನಿರ್ಮಾಪಕರಲ್ಲ. ಆದರೂ ಬಹಳ ಬುದ್ಧಿವಂತಿಕೆಯಿಂದ ಬಹಳ ಶ್ರಮವಹಿಸಿ ಕೆಲಸ ಮಾಡಿದರು. ಈ ಮೂವರ ಕೆಲಸಕ್ಕೆ ನಾನು ನಿಜಕ್ಕೂ ಹೆಮ್ಮೆಪಡುತ್ತೇನೆ. ತುಂಬಾ ಸಂತೋಷಪಟ್ಟಿದ್ದೇನೆ. ಅವರ ಧೈರ್ಯ ಮತ್ತು ಕೆಲಸ ಮಾಡಿದ, ಮಾಡುತ್ತಿರುವ ರೀತಿ ಎಲ್ಲವೂ ನನಗೆ ಖುಷಿ ತಂದಿದೆ. ಕೆಜಿಎಫ್ ಸಿನಿಮಾದ ನಿರ್ಮಾಪಕರು ಅಷ್ಟೊಂದು ಖರ್ಚು ಮಾಡಿ ಅದನ್ನು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋದರು. ಇವತ್ತಿಗೆ ಎಲ್ಲವೂ ಚೆನ್ನಾಗಿದೆ ಅನ್ನಿಸುತ್ತದೆ. ಆದರೆ ಒಂಚೂರು ಹೆಚ್ಚು ಕಮ್ಮಿ ಆಗಿದ್ದರೆ ಬಹಳ ಕಷ್ಟವಾಗುತ್ತಿತ್ತು. ಹಾಗಾಗಿ ಮಾಡುವ ಕೆಲಸವನ್ನು ಬಹಳ ನೀಟ್ ಆಗಿ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ.
*ಇಷ್ಟು ಬಿಝಿ ಶೆಡ್ಯೂಲ್ನ ನಡುವೆಯೂ ಮಗಳಿಗೆ ಮತ್ತು ಮನೆಗೆ ಸಮಯ ಹೇಗೆ ನೀಡುತ್ತಿದ್ದೀರಾ?
ಬಹುಶಃ ನನ್ನ ಸುತ್ತ ಇರುವವರು ನನಗಿಂತಲೂ ಪ್ರಬುದ್ಧರಾಗಿದ್ದಾರೆ. ನನ್ನ ಕೆಲಸದ ತೀವ್ರತೆಯನ್ನು ಅರಿತುಕೊಂಡಿದ್ದಾರೆ. ನನಗೆ ಸಮಯ ಸಿಕ್ಕರೆ ನಾನು ಬಂದು ಫ್ಯಾಮಿಲಿ ಜತೆ ಸ್ನೇಹಿತರ ಜತೆ ಸೇರಿಕೊಳ್ಳುತ್ತೇನೆ. ಅದೇ ರೀತಿ ಅವರಿಗೆ ಫ್ರೀ ಇದ್ದರೆ ನನ್ನೊಟ್ಟಿಗೆ ಬಂದು ಸೇರುತ್ತಾರೆ. ಅದರಲ್ಲೂ ನನ್ನ ಸ್ನೇಹಿತರಂತೂ ನನ್ನ ಜತೆ ಸಾವಿರಾರು ದೂರ ಪ್ರಯಾಣ ಕೂಡ ಮಾಡಿಕೊಂಡು ಸಮಯ ಕಳೆಯುತ್ತಾರೆ. ಈ ವಿಚಾರದಲ್ಲಿ ನಾನು ಅದೃಷ್ಟವಂತ.
---
ಪೈಲ್ವಾನ್ ಸಿನಿಮಾ ಒಂದು ಯೂನಿವರ್ಸಲ್ ಸಬ್ಜೆಕ್ಟ್. ಒಂದು ಸ್ಕ್ರಿಪ್ಟನ್ನು ಒಪ್ಪಿಕೊಳ್ಳುವುದು ದೊಡ್ಡದಲ್ಲ. ಅದಕ್ಕೆ ತಯಾರಾಗಿ, ಅದೇ ರೇಂಜ್ನಲ್ಲಿ ತೆರೆ ಮೇಲೆ ತರುವುದು ಬಹಳ ಮುಖ್ಯ. ಆ ಕೆಲಸವನ್ನು ನನ್ನ ಪೈಲ್ವಾನ್ ಟೀಮ್ ಮಾಡಿದೆ.
-ಸುದೀಪ್, ನಟ