ಆ್ಯಪ್ನಗರ

ನಾಟಕಗಳ ಮಧ್ಯೆ ಪಂಚತಂತ್ರ ಪ್ರಚಾರ

ಯೋಗರಾಜ್‌ ಭಟ್‌ ನಿರ್ದೇಶನದ 'ಪಂಚತಂತ್ರ' ಸಿನಿಮಾದ ಪ್ರಚಾರವನ್ನು ಚಿತ್ರತಂಡ ವಿಭಿನ್ನವಾಗಿ ಮಾಡುತ್ತಿದೆ.

Vijaya Karnataka 7 Mar 2019, 5:00 am
ಹರೀಶ್‌ ಬಸವರಾಜ್‌
Vijaya Karnataka Web panchatantra


ಹಾಡುಗಳ ಮೂಲಕ ಹಲ್‌ಚಲ್‌ ಎಬ್ಬಿಸಿರುವ ಭಟ್ಟರ 'ಪಂಚತಂತ್ರ' ಸಿನಿಮಾದ ಪ್ರಚಾರ ಹವ್ಯಾಸಿ ನಾಟಕ ಮತ್ತು ವೃತ್ತಿ ನಾಟಕ ಪ್ರದರ್ಶನಗಳ ಮಧ್ಯೆ ಮಧ್ಯೆ ನಡೆಯುತ್ತಿದೆ.

'ಸಾಮಾನ್ಯವಾಗಿ ಟಿವಿ ಸೀರಿಯಲ್‌ ಮತ್ತು ಸಿನಿಮಾಗಳ ಮಧ್ಯೆ ಬೇರೆ ಬೇರೆ ಪ್ರಚಾರಗಳು ನಡೆಯುತ್ತಿದ್ದವು. ಈಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ನಾಟಕಗಳ ಮಧ್ಯೆ ನಮ್ಮ ಪಂಚತಂತ್ರ ಸಿನಿಮಾದ ಪ್ರಚಾರ ನಡೆಯುತ್ತಿದೆ. ನಾವು ಆ ನಾಟಕ ತಂಡಗಳಿಗೆ ಯೋಗರಾಜ್‌ ಭಟ್ಟರ ವಾಯ್ಸ್‌ ಕ್ಲಿಪ್‌, ಸಿನಿಮಾದ ಟ್ರೇಲರ್‌ಗಳು ಮತ್ತು ಅವರು ಬಳಸುವ ಪ್ರಾಪರ್ಟಿಗಳಲ್ಲಿ ಬಳಸಲು ಒಂದಷ್ಟು ಪಂಚತಂತ್ರದ ಪೋಸ್ಟರ್‌ಗಳನ್ನು ನೀಡಿದ್ದೇವೆ. ನಾಟಕದ ಮಧ್ಯೆ ಫ್ರೀ ಸಿಕ್ಕಾಗ ನಮ್ಮ ಪಂಚತಂತ್ರದ ಬಗ್ಗೆ ಅವರು ಮಾತನಾಡುತ್ತಾರೆ. ಮತ್ತು ಆಡಿಯೋ ಟ್ರೇಲರನ್ನು ಪ್ಲೇ ಮಾಡುತ್ತಾರೆ. ಈ ಮೂಲಕ ಸಿನಿಮಾಗೆ ಅತಿ ಹೆಚ್ಚು ಜನರನ್ನು ಕರೆತರುವ ಪ್ರಯತ್ನವಾಗುತ್ತಿದೆ' ಎನ್ನುತ್ತಾರೆ ನಿರ್ಮಾಪಕ ಹರಿಪ್ರಸಾದ್‌ ಜಯಣ್ಣ. ಈಗಾಗಲೇ ದಾವಣಗೆರೆ, ಹಾಸನ, ಚಿಕ್ಕಮಗಳೂರು ಸೇರಿದಂತೆ ಸಾಕಷ್ಟು ಕಡೆಗಳಲ್ಲಿ ಈ ರೀತಿಯ ಪ್ರಚಾರ ಮಾಡುತ್ತಿದ್ದೇವೆ. ನಾಟಕಗಳು ಮಾತ್ರವಲ್ಲ ಕಾಮಿಡಿ ಕಿಲಾಡಿಗಳು ಎಲ್ಲಿಯಾದರೂ ಹಾಸ್ಯ ಪ್ರದರ್ಶನ ನೀಡಲು ಹೋದರೆ ಅವರ ಕಾರ್ಯಕ್ರಮದಲ್ಲಿಯೂ ಪಂಚತಂತ್ರದ ಬಗ್ಗೆ ಪ್ರಮೋಷನ್‌ ಆಗುತ್ತಿದೆ ಎನ್ನುತ್ತಾರೆ ಅವರು.

ಅಂತಾರಾಷ್ಟ್ರೀಯ ಮಟ್ಟದ ಗೇಮ್‌

ಇನ್ನು ಪಂಚತಂತ್ರ ಸಿನಿಮಾದ ಬಗ್ಗೆ ಗೇಮ್‌ ಒಂದು ಸದ್ಯದಲ್ಲೇ ಲಾಂಚ್‌ ಆಗಲಿದ್ದು, ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ಟೆಕ್ಕಿಗಳು ಕೆಲಸ ಮಾಡುತ್ತಿದ್ದಾರೆ. ಇದಕ್ಕೆ 'ಪಂಚತಂತ್ರ ರೇಸ್‌ ಗೇಮ್‌' ಎಂದು ಹೆಸರಿಟ್ಟಿದ್ದಾರೆ ಭಟ್ರು. ಇದು 3ಡಿ ಮಾಡೆಲ್‌ನ ರೇಸ್‌ ಆಗಿದ್ದು ಇಂಟರ್‌ನ್ಯಾಷನಲ್‌ ಫಾರ್ಮಾ್ಯಟ್‌ ಆಗಿರುತ್ತದೆ. ಸದ್ಯ ಏನು ಗೇಮ್‌ಗಳು ಟ್ರೆಂಡಿಂಗ್‌ನಲ್ಲಿವೆಯೋ ಅಷ್ಟೇ ಉತ್ತಮ ಗುಣಮಟ್ಟದಲ್ಲಿ ಗೇಮ್‌ ಡೆವಲಪ್‌ ಆಗುತ್ತಿದೆ. ಇದರಲ್ಲಿ ನಮ್ಮ ಸಿನಿಮಾದ ಕ್ಯಾರೆಕ್ಟರ್‌ಗಳು ಇರಲಿವೆ ಮತ್ತು ನಮ್ಮ ಸಿನಿಮಾದಲ್ಲಿ ರೇಸ್‌ಗೆ ಬಳಸಿದ ಕಾರ್‌ಗಳ ಯಥಾವತ್‌ ಮಾಡೆಲ್‌ಗಳನ್ನು ಬಳಸಿಕೊಳ್ಳುತ್ತೇವೆ ಎನ್ನುತ್ತಾರೆ ಮತ್ತೊಬ್ಬ ನಿರ್ಮಾಪಕ ಹೇಮಂತ್‌ ಪರಾಡ್ಕರ್‌.

ಪಂಚತಂತ್ರ ಸಿನಿಮಾ ಇದೇ 29ಕ್ಕೆ ಬಿಡುಗಡೆಯಾಗುತ್ತಿದೆ. ರಂಗಾಯಣ ರಘು, ವಿಹಾನ್‌ಗೌಡ, ಸೋನಲ್‌, ಅಕ್ಷರಗೌಡ ನಟಿಸಿದ್ದಾರೆ.

--

ಕೋಟ್‌..

ಸಿನಿಮಾ ಪ್ರಚಾರದ ತಂತ್ರ ದಿನೇ ದಿನೇ ಬೇರೆ ಬೇರೆ ಆಯಾಮಗಳನ್ನು ಪಡೆದುಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಈ ರೀತಿಯ ಪ್ರಚಾರದ ಶೈಲಿ ಹೊಸದು ಮತ್ತು ಈ ಮೂಲಕ ನಾವು ಪ್ರತಿ ದಿನ ಎರಡು ಲಕ್ಷದಿಂದ ಮೂರು ಲಕ್ಷದವರೆಗೆ ರೀಚ್‌ ಆಗ್ತಾ ಇದ್ದೇವೆ.

-ಯೋಗರಾಜ್‌ ಭಟ್‌, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌