ಆ್ಯಪ್ನಗರ

ವಿಕ ಕಚೇರಿಯಲ್ಲಿ ಪಂಚತಂತ್ರ ಟೀಸರ್‌ ಬಿಡುಗಡೆ

ಯೋಗರಾಜ್‌ ಭಟ್ ನಿರ್ದೇಶನದ ವಿಹಾನ್‌ ಗೌಡ ಮುಖ್ಯ ಭೂಮಿಕೆಯ 'ಪಂಚತಂತ್ರ' ಸಿನಿಮಾದ ಟೀಸರ್‌ ಇಂದು ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ಬಿಡುಗಡೆ ಆಗಲಿದೆ...

Vijaya Karnataka Web 16 Oct 2018, 4:56 pm
ವಿಹಾನ್‌ ಗೌಡ ಮುಖ್ಯ ಭೂಮಿಕೆಯ 'ಪಂಚತಂತ್ರ' ಸಿನಿಮಾದ ಟೀಸರ್‌ ಇಂದು ಬೆಂಗಳೂರಿನ ವಿಜಯ ಕರ್ನಾಟಕ ಕಚೇರಿಯಲ್ಲಿ ಬಿಡುಗಡೆ ಆಗಲಿದೆ. ಚಿತ್ರದ ನಿರ್ದೇಶಕ ಯೋಗರಾಜ್‌ ಭಟ್‌, ನಟ ವಿಹಾನ್‌ ಗೌಡ ಸೇರಿದಂತೆ ಚಿತ್ರತಂಡ ಕಲಾವಿದರು ಮತ್ತು ತಂತ್ರಜ್ಞರು ಆಗಮಿಸಲಿದ್ದಾರೆ.
Vijaya Karnataka Web yogaraj bhat




ಈಗಾಗಲೇ ಪಂಚತಂತ್ರ ಹಾಡಿನ ಸ್ಟಿಲ್ಸ್‌ ರಿಲೀಸ್‌ ಆಗಿದ್ದು, ವಿಹಾನ್‌ ಮತ್ತು ಸೋನಲ್‌ ತುಂಬಾ ರೊಮ್ಯಾಂಟಿಕ್‌ ಆಗಿ ಕಾಣಿಸಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್‌ ಕೂಡ ಆಗಿದ್ದವು. ಹಾಗಾಗಿ ಬಿಡುಗಡೆ ಆಗಲಿರುವ ಟೀಸರ್‌ ಬಗ್ಗೆ ಅಷ್ಟೇ ಕುತೂಹಲ ಮೂಡಿದೆ. ಅಂದಹಾಗೆ ಈ ಸಿನಿಮಾದಲ್ಲಿ ನಿರ್ದೇಶಕರು ಎರಡು ತಲೆಮಾರಿನ ನಡುವಿನ ಸಂಘರ್ಷದ ಕಥೆಯನ್ನು ವಿನೋದವಾಗಿ ಹೇಳಲು ಹೊರಟಿದ್ದಾರೆ. ಜತೆಗೆ ಭಟ್ಟರ ಕಚಗುಳಿ ಇಡುವ ಮಾತಿನ ಶೈಲಿ ಇದ್ದೇ ಇರುತ್ತದೆ.

ವಿಹಾನ್‌ ಗೌಡ ಸಿನಿಮಾದ ನಾಯಕನಾಗಿ ನಟಿಸಿದ್ದರೆ, ಸೋನಲ್‌ ಮಂಥೆರೋ ಮತ್ತು ಅಕ್ಷರ ಗೌಡ ನಾಯಕಿಯರು. ಚಿತ್ರದ ಬಹುತೇಕ ಶೂಟಿಂಗ್‌ ಮುಗಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌