ತೆಲುಗಿನ ಜಿಗರ್ ಥಂಡ ಚಿತ್ರ ನಿರ್ದೇಶನ ಮಾಡಿದ ಕಾರ್ತಿಕ್ ಸುಬ್ಬರಾಜ್ ರಜನಿಕಾಂತ್ ನಟನೆಯ ಪೇಟಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈಗ ಸುದೀಪ್ ನಟನೆಯ ಕನ್ನಡ ಚಿತ್ರ ನಿರ್ದೇಶನ ಮಾಡಲು ಮುಂದಾಗಿದ್ದಾರೆ. ವಿಶೇಷವೆಂದರೆ, ಕಾರ್ತಿಕ್ ಸುಬ್ಬರಾಜ್ ಟೆಕ್ಕಿ ಆಗಿ ಕೆಲಸ ಪ್ರಾರಂಭಿಸಿದ್ದು ಬೆಂಗಳೂರಿನಲ್ಲೇ.
ರಜನಿಕಾಂತ್ ನಟನೆಯ ಶಿವಾಜಿ ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡಲು ಬಯಸಿದ್ದರಂತೆ. ಆಗ ಕಂಪನಿಯಲ್ಲಿ ರಜೆ ಕೊಡದ್ದರಿಂದ ಹೇಗೋ ಅರ್ಧ ದಿನ ರಜೆ ಪಡೆದಿದ್ದಾರೆ. ಆದರೆ, ಕೊನೆ ಗಳಿಗೆಯಲ್ಲಿ ಬೆಂಗಳೂರಿನಲ್ಲಿ ಚಿತ್ರ ರಿಲೀಸ್ ಆಗ್ತಿಲ್ಲ ಅಂತ ಗೊತ್ತಾಗಿ ಫ್ಲೈಟ್ ಟಿಕೆಟ್ ಮಾಡಿ ಚೆನ್ನೈಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ರಜನಿ ಅಭಿಮಾನಿಯಾಗಿದ್ದ ಅವರು ಈಗ ಅದೇ ಮೆಚ್ಚಿನ ನಟ ರಜನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸ್ಯಾಂಡಲ್ವುಡ್ ನಟರು, ನಿರ್ದೇಶಕರನ್ನು ಮೆಚ್ಚಿಕೊಂಡ ಅವರು ಪೇಟಾ ಚಿತ್ರದ ಪಾತ್ರಕ್ಕೆ ರಕ್ಷಿತ್ರನ್ನು ಕೇಳಿದ್ದರಂತೆ. ಆದರೆ, ರಕ್ಷಿತ್ ಬೇರೆ ಸಿನಿಮಾದಲ್ಲಿ ಬಿಝಿಯಾಗಿದ್ದರಿಂದ ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ಈಗ ಸುದೀಪ್ಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಈ ಮೊದಲು ಕಾರ್ತಿಕ್ ನಿರ್ದೇಶನದ ತಮಿಳಿನ ಜಿಗರ್ ಥಂಡ ಚಿತ್ರ ಅದೇ ಹೆಸರಿನಲ್ಲಿ ಕನ್ನಡದಲ್ಲಿ ಸುದೀಪ್ ಪ್ರೊಡಕ್ಷನ್ ಹೌಸ್ನಿಂದ ರಿಮೇಕ್ ಮಾಡಲಾಗಿತ್ತು.
ರಜನಿಕಾಂತ್ ನಟನೆಯ ಶಿವಾಜಿ ಚಿತ್ರವನ್ನು ಮೊದಲ ದಿನ ಮೊದಲ ಶೋ ನೋಡಲು ಬಯಸಿದ್ದರಂತೆ. ಆಗ ಕಂಪನಿಯಲ್ಲಿ ರಜೆ ಕೊಡದ್ದರಿಂದ ಹೇಗೋ ಅರ್ಧ ದಿನ ರಜೆ ಪಡೆದಿದ್ದಾರೆ. ಆದರೆ, ಕೊನೆ ಗಳಿಗೆಯಲ್ಲಿ ಬೆಂಗಳೂರಿನಲ್ಲಿ ಚಿತ್ರ ರಿಲೀಸ್ ಆಗ್ತಿಲ್ಲ ಅಂತ ಗೊತ್ತಾಗಿ ಫ್ಲೈಟ್ ಟಿಕೆಟ್ ಮಾಡಿ ಚೆನ್ನೈಗೆ ಹೋಗಿ ಸಿನಿಮಾ ನೋಡಿ ಬಂದಿದ್ದಾರೆ. ರಜನಿ ಅಭಿಮಾನಿಯಾಗಿದ್ದ ಅವರು ಈಗ ಅದೇ ಮೆಚ್ಚಿನ ನಟ ರಜನಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸ್ಯಾಂಡಲ್ವುಡ್ ನಟರು, ನಿರ್ದೇಶಕರನ್ನು ಮೆಚ್ಚಿಕೊಂಡ ಅವರು ಪೇಟಾ ಚಿತ್ರದ ಪಾತ್ರಕ್ಕೆ ರಕ್ಷಿತ್ರನ್ನು ಕೇಳಿದ್ದರಂತೆ. ಆದರೆ, ರಕ್ಷಿತ್ ಬೇರೆ ಸಿನಿಮಾದಲ್ಲಿ ಬಿಝಿಯಾಗಿದ್ದರಿಂದ ಸಾಧ್ಯವಾಗಿರಲಿಲ್ಲ ಎಂದಿದ್ದಾರೆ. ಈಗ ಸುದೀಪ್ಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ. ಈ ಮೊದಲು ಕಾರ್ತಿಕ್ ನಿರ್ದೇಶನದ ತಮಿಳಿನ ಜಿಗರ್ ಥಂಡ ಚಿತ್ರ ಅದೇ ಹೆಸರಿನಲ್ಲಿ ಕನ್ನಡದಲ್ಲಿ ಸುದೀಪ್ ಪ್ರೊಡಕ್ಷನ್ ಹೌಸ್ನಿಂದ ರಿಮೇಕ್ ಮಾಡಲಾಗಿತ್ತು.