ಆ್ಯಪ್ನಗರ

ಧ್ರುವ ಸರ್ಜಾ ಕಾರು ಅಪಘಾತದ ಸುದ್ದಿ ಬಗ್ಗೆ ಸ್ಪಷ್ಟನೆ ಕೊಟ್ಟ 'ಪೊಗರು' ನಿರ್ದೇಶಕ

ಧ್ರುವ ಸರ್ಜಾ ಅವರ ಕಾರ್ ಅಪಘಾತಕ್ಕೀಡಾಗಿದೆ. ಅವರು 'ಪೊಗರು' ಸಿನಿಮಾಕ್ಕೆ ಚಿತ್ರೀಕರಣ ಸಲುವಾಗಿ ಬಳ್ಳಾರಿಯಲ್ಲಿ ಬೀಡುಬಿಟ್ಟಿದ್ದರು. ಅಲ್ಲಿಂದ ಮರಳುವಾಗ ಈ ಘಟನೆ ನಡೆದಿದೆ. ಇಂದು ಮುಂಜಾನೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

Vijaya Karnataka Web 24 Sep 2019, 5:33 pm
'ಪೊಗರು' ಚಿತ್ರದ ಹೀರೋ ಧ್ರುವ ಸರ್ಜಾ ಕಾರು ಅಪಘಾತಕ್ಕೀಡಾಗಿದೆ. ಬೆಳಗ್ಗೆ ಈ ಘಟನೆ ನಡೆದಿದೆ.
Vijaya Karnataka Web dhruva sarja

ಪೊಗರು ಚಿತ್ರದ ಶೂಟಿಂಗ್ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ಹಿಂತಿರುವಾಗ ಈ ಘಟನೆ ನಡೆದಿದೆ. ಧ್ರುವ ಸರ್ಜಾ ಅವರಿಗೂ ಏನೂ ಆಗಿಲ್ಲ ಚಿತ್ರತಂಡ ತಿಳಿಸಿವೆ.
ಪೊಗರು ಅಡ್ಡದಲ್ಲಿಫ್ರೆಂಚ್‌ ಬಾಡಿ ಬಿಲ್ಡರ್‌

'ಪೊಗರು' ಚಿತ್ರಕ್ಕೆ ನಂದ್‌ಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಕಳೆದ ಹದಿನೈದು ದಿನಗಳಿಂದ ನಾಯಕನಟ ಧ್ರುವಸರ್ಜಾ ಮತ್ತು ಚಿತ್ರತಂಡ ಬಳ್ಳಾರಿಯಲ್ಲಿ ಬೀಡುಬಿಟ್ಟಿತ್ತು. ಇಂದು ಮುಂಜಾನೆ 3ಗಂಟೆಗೆ ಶೂಟಿಂಗ್ ಮುಗಿಸಿ ಫೋರ್ಡ್ ಫಿಯೆಸ್ಟಾ ಕಾರ್‌ನಲ್ಲಿ ಸ್ನೇಹಿತರೊಂದಿಗೆ ಮರಳುತ್ತಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
"ಬಳ್ಳಾರಿಯಲ್ಲಿ ತುಂಬ ಲಾರಿಗಳು ಓಡಾಡುತ್ತವೆ. ಟ್ರಾಫಿಕ್ ಕೂಡ ಜಾಸ್ತಿ. ಯಾರೋ ಒಬ್ಬ ಓವರ್‌ಟೇಕ್ ಮಾಡೋದಕ್ಕೆ ಹೋಗಿ ಧ್ರುವ ಅವರ ಕಾರಿನ ಇಂಜಿನ್ ಟಚ್ ಆಗಿದೆ ಅಷ್ಟೇ. ಧ್ರುವ ಸರ್ಜಾ ಅವರಿಗೆ ಏನೂ ಆಗಿಲ್ಲ, ಇದು ತುಂಬ ಚಿಕ್ಕ ಘಟನೆ" ಎಂದು ಪೊಗರು ಚಿತ್ರದ ನಿರ್ದೇಶಕ ನಂದಕಿಶೋರ್ ವಿಜಯಕರ್ನಾಟಕ ವೆಬ್‌ಸೈಟ್ ಜೊತೆ ಮಾತನಾಡಿದ್ದಾರೆ.
ಧ್ರುವ ಸರ್ಜಾ ಇಷ್ಟೊಂದು 'ಪೊಗರು' ತೋರಿಸೋಕೆ ಇವರೇ ಕಾರಣ!!!

ಜೊತೆಗೆ ಪೊಗರು ಚಿತ್ರದ ಬಗ್ಗೆ ಹಾಗೂ ಧ್ರುವ ಅವರ ಜೊತೆಗಿನ ಮುಂದಿನ ಸಿನಿಮಾದ ಬಗ್ಗೆ ವಿಶೇಷ ಅಪ್‌ಡೇಟ್ಸ್‌ನ್ನು ಅಕ್ಟೋಬರ್ 6ಕ್ಕೆ ಧ್ರುವ ಸರ್ಜಾ ಹುಟ್ಟುಹಬ್ಬದ ಪ್ರಯುಕ್ತ ನೀಡುತ್ತೇವೆ ಎಂದು ನಂದಕಿಶೋರ್ ಹೇಳಿದ್ದಾರೆ. ಪೊಗರು ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌