ಆ್ಯಪ್ನಗರ

ಟ್ರೇಲರ್‌ನಲ್ಲಿ ಪೊಲೀಸ್‌ ಆಫೀಸರ್ಸ್‌

ಗುರುನಂದನ್‌ ಅಭಿನಯದ ಹೊಸ ಚಿತ್ರದ ಶೂಟಿಂಗ್‌ ಮುಗಿದಿದ್ದು, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆದಿದೆ.

Vijaya Karnataka Web 21 Apr 2017, 4:00 am

ರಘುರಾಮ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಗುರುನಂದನ್‌ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಸಾಗಿದೆ. ಈ ನಡುವೆ ಚಿತ್ರದ ಟ್ರೇಲರ್‌ ಅನ್ನು ಹೊರತರಲು ನಿರ್ದೇಶಕ ಸಿದ್ಧತೆ ನಡೆಸಿದ್ದಾರೆ. ಇದು ನೈಜ ಘಟನೆಯನ್ನಾಧರಿಸಿದ ಚಿತ್ರವಾಗಿದ್ದು, ಚಿತ್ರದ ಟ್ರೇಲರ್‌ನಲ್ಲಿ ನಾಲ್ಕು ಪ್ರಮುಖ ಪೊಲೀಸ್‌ ಅಧಿಕಾರಿಗಳು ಕಾಣಿಸಿಕೊಂಡಿರುವುದು ವಿಶೇಷ.

ನಿಜ ಜೀವನದಲ್ಲಿ ಮಿಸ್ಸಿಂಗ್‌ ಬಾಯ್‌ ಕೇಸ್‌ ಒಂದನ್ನು ಸಿನಿಮಾ ಮಾಡಲಾಗಿದೆ. ಈ ಪ್ರಕರಣವನ್ನು ಬೇಧಿಸಿದ್ದ ಪೊಲೀಸ್‌ ಅಧಿಕಾರಿಗಳು ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಮಾಜಿ ಪೊಲೀಸ್‌ ಅಧಿಕಾರಿ ರೇವಣ ಸಿದ್ಧಯ್ಯ, ಅಶೋಕ್‌ ಕುಮಾರ್‌, ಉಲ್ತಾಫ್‌ ಹುಸೇನ್‌ ಮತ್ತು ಬಿ.ಕೆ. ಶಿವರಾಮ್‌ ಇದ್ದಾರೆ. ಇವರ ಮೂಲಕ ಘಟನೆ ಬಗ್ಗೆ, ಸಿನಿಮಾ ಬಗ್ಗೆ ಟ್ರೇಲರ್‌ನಲ್ಲಿ ಮಾತನಾಡಲಿದ್ದಾರೆಂದು ಗೊತ್ತಾಗಿದೆ.

ಒಂದು ನಿಮಿಷದ ಟ್ರೇಲರ್‌ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಟೈಟಲ್‌ ಕಾರ್ಡ್‌ ಅನ್ನು ವಿಭಿನ್ನವಾಗಿ ತೋರಿಸಲು ಯೋಚಿಸಿರುವ ನಿರ್ದೇಶಕರು ಇದಕ್ಕಾಗಿ ಒಂದು ತಂಡವನ್ನೇ ನೇಮಿಸಿದ್ದಾರಂತೆ.

ಚಿತ್ರದಲ್ಲಿ ಅರ್ಚನಾ ಜಯಕೃಷ್ಣ, ರವಿಶಂಕರ್‌ ಗೌಡ, ರಂಗಾಯಣ ರಘು, ಭಾಗೀರಥಿ ಬಾಯಿ ಕದಂ ಮತ್ತಿತರರು ನಟಿಸಿದ್ದಾರೆ. ಕೊಲ್ಲ ಪ್ರವೀಣ್‌ ನಿರ್ಮಾಣದ ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌