ಆ್ಯಪ್ನಗರ

ದುನಿಯಾ ವಿಜಿಗೆ ಇನ್ನೆರಡು ದಿನ ಜೈಲೇ ಗತಿ

ಹಲ್ಲೆ ಮತ್ತು ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿರುವ ದುನಿಯಾ ವಿಜಯ್‌ಗೆ ಇಂದು ಜಾಮೀನು ನೀಡದಂತೆ ನ್ಯಾಯಾಧೀಶರ ಮುಂದೆ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ.

Vijaya Karnataka Web 24 Sep 2018, 4:44 pm
ಬೆಂಗಳೂರು: ಹಲ್ಲೆ ಮತ್ತು ಕಿಡ್ನಾಪ್ ಪ್ರಕರಣದಲ್ಲಿ ಜೈಲು ಸೇರಿರುವ ದುನಿಯಾ ವಿಜಯ್‌ ಅವರ ಜಾಮೀನು ಅರ್ಜಿ ನಿರಾಕರಿಸಿರುವ ನ್ಯಾಯಾಧೀಶರು ತೀರ್ಪನ್ನು ಸೆ. 26 ಕ್ಕೆ ಕಾಯ್ದಿರಿಸಿದ್ದಾರೆ.
Vijaya Karnataka Web duniya vijay


ದುನಿಯಾ ವಿಜಯ್‌ ಹಾಗೂ ಸಹಚರರು ಗಾಂಜಾ ಸೇವಿಸಿದ್ದರು ಎಂಬ ಮಾಹಿತಿ ಇದೆ, ಅವರ ರಕ್ತವನ್ನು ಪರೀಕ್ಷೆಗೆ ಕಳುಹಿಸಲಾಗಿದೆ, ಆದ್ದರಿಂದ ಈಗಲೇ ಜಾಮೀನು ಮಂಜೂರು ಮಾಡಬೇಡಿ ಎಂದು ಹೈಗ್ರೌಂಡ್ಸ್ ಪೊಲೀಸರು ನ್ಯಾಯಾಧೀಶರ ಬಳಿ ಮನವಿ ಮಾಡಿದ್ದರು.

ಆರೋಪಿಯು ಪದೇ-ಪದೇ ಈ ರೀತಿ ಗಲಾಟೆ ಮಾಡಿ, ನಂತರ ಮೂರು ಬಾರಿ ಬೇಲ್‌ ಪಡೆದಿದ್ದಾರೆ, ಈ ಬಾರಿಯೂ ಜಾಮೀನು ಸಿಕ್ಕರೆ ಕಾನೂನಿನ ಮೇಲೆ ಭಯ ಹೋಗುತ್ತೆ, ಅಲ್ಲದೆ ಆರೋಪಿ ಪ್ರಭಾವಿ ವ್ಯಕ್ತಿ ಆಗಿರುವುದರಿಂದ ಸಾಕಷಿ ನಾಶ ಮಾಡುವ ಸಾಧ್ಯತೆ ಇದೆ, ವಿಚಾರಣೆಗೆ ಕರೆಸಿದಾಗ ಕೂಡ ಪೊಲೀಸ್ ಠಾಣೆಯ ಮುಂದೆ ದೊಡ್ಡ ಗಲಾಟೆ ಮಾಡಿದ್ದಾನೆ, ಈ ಎಲ್ಲಾ ಅಂಶ ಪರಿಗಣಿಸಿ ಜಾಮೀನು ನೀಡದಂತೆ ಆಕ್ಷೇಪಣೆ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌