ಆ್ಯಪ್ನಗರ

ನಾಳೆ ಅಂಬರೀಶ್ ವೈಕುಂಠ ಸಮಾರಾಧನೆ

ಇತ್ತೀಚೆಗೆ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರ ವೈಕುಂಠ ಸಮಾರಾಧನೆ ಡಿ.5 ಬುಧವಾರ ನಡೆಸಲು ಅವರ ಕುಟುಂಬ ನಿರ್ಧರಿಸಿದೆ. ನಗರದ ಅರಮನೆ ಮೈದಾನದಲ್ಲಿ ವೈಟ್ ಪೆಟಲ್ಸ್ ಗೇಟ್ ನಂಬರ್ 3 ಮತ್ತು 3 ರಲ್ಲಿ ಸಮಾರಾಧನೆ ನಡೆಯಲಿದೆ ಎಂದು ಸುಮಲತಾ ಮತ್ತು ಅಭಿಷೇಕ್ ತಿಳಿಸಿದ್ದಾರೆ.ಒಟ್ಟು ಮೂರು ಕಡೆ ಅಂಬಿ ಅಸ್ಥಿ ವಿಸರ್ಜನೆ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದು ಅದರಂತೆ ಅಂಬರೀಶ್ ಆಪ್ತ ದೊಡ್ಡಣ್ಣ ಮತ್ತು ರಾಜೇಂದ್ರ ಸಿಂಗ್‌ ಬಾಬು ಕಳೆದೆರಡು ದಿನಗಳ ಹಿಂದೆ ಕಾಶಿಯಲ್ಲಿ ಅಂಬಿ ಅಸ್ಥಿ ವಿಸರ್ಜಿಸಿದ್ದರು.

Vijaya Karnataka Web 4 Dec 2018, 8:42 am
ಬೆಂಗಳೂರು: ಇತ್ತೀಚೆಗೆ ನಿಧನರಾದ ರೆಬಲ್ ಸ್ಟಾರ್ ಅಂಬರೀಶ್ ಅವರ ವೈಕುಂಠ ಸಮಾರಾಧನೆ ಡಿ.5 ಬುಧವಾರ ನಡೆಸಲು ಅವರ ಕುಟುಂಬ ನಿರ್ಧರಿಸಿದೆ.
Vijaya Karnataka Web Ambereesh


ನಗರದ ಅರಮನೆ ಮೈದಾನದಲ್ಲಿ ವೈಟ್ ಪೆಟಲ್ಸ್ ಗೇಟ್ ನಂಬರ್ 3 ಮತ್ತು 3 ರಲ್ಲಿ ಸಮಾರಾಧನೆ ನಡೆಯಲಿದೆ ಎಂದು ಸುಮಲತಾ ಮತ್ತು ಅಭಿಷೇಕ್ ತಿಳಿಸಿದ್ದಾರೆ.

ನವೆಂಬರ್ 24 ರಂದು ವಿಧಿವಶರಾಗಿದ್ದ ಅಂಬರೀಶ್ ಅವರ ಅಂತ್ಯಕ್ರಿಯೆ ನವೆಂಬರ್ 26 ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಿತು. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿತ್ತು.

ಅಂಬರೀಶ್‌ ಅವರ ಅಂತ್ಯಕ್ರಿಯೆ ನವೆಂಬರ್ 26ರಂದು ನಡೆದಿತ್ತು. ಕಾವೇರಿಯ ಸಂಗಮದಲ್ಲಿ ಕುಟುಂಬ ಸದಸ್ಯರಾದ ಪುತ್ರ ಅಭಿಷೇಕ್‌, ಪತ್ನಿ ಸುಮಲತಾ, ರಾಕ್‌ಲೈನ್‌ ವೆಂಕಟೇಶ್‌, ದರ್ಶನ್‌, ಶಾಸಕ ಮುನಿರತ್ನ ಸೇರಿದಂತೆ ಹಲವರು ತೆರಳಿ ಅಂಬಿ ಅಸ್ಥಿ ವಿಸರ್ಜನೆ ಮಾಡಿದ್ದರು. ಒಟ್ಟು ಮೂರು ಕಡೆ ಅಂಬಿ ಅಸ್ಥಿ ವಿಸರ್ಜನೆ ಮಾಡಲು ಕುಟುಂಬ ಸದಸ್ಯರು ನಿರ್ಧರಿಸಿದ್ದು ಅದರಂತೆ ಅಂಬರೀಶ್ ಆಪ್ತ ದೊಡ್ಡಣ್ಣ ಮತ್ತು ರಾಜೇಂದ್ರ ಸಿಂಗ್‌ ಬಾಬು ಕಳೆದೆರಡು ದಿನಗಳ ಹಿಂದೆ ಕಾಶಿಯಲ್ಲಿ ಅಂಬಿ ಅಸ್ಥಿ ವಿಸರ್ಜಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌