ಆ್ಯಪ್ನಗರ

ಮತ್ತೆ ಪುನೀತ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾದ ರಚಿತಾ ರಾಮ್!

ರಚಿತಾ ರಾಮ್ ಕಂಡ್ರೆ ಪುನೀತ್ ಅಭಿಮಾನಿಗಳು ಕೆಂಡ ಕಾರಲು ಕಾರಣ 'ರಣವಿಕ್ರಮ' ಸಿನಿಮಾ ಎನ್ನಲಾಗುತ್ತಿದೆ. 'ಈ ಸಿನಿಮಾಗೆ ಮೊದಲು ರಚಿತಾ ರಾಮ್ ನಾಯಕಿ ಅಂತ ಹೇಳಲಾಗಿತ್ತು. ಆದರೆ, ನಟಿ ರಚಿತಾ ಅದೇ ಸಮಯದಲ್ಲಿ ದರ್ಶನ್ ಅಭಿನಯದ 'ಅಂಬರೀಷ' ಮತ್ತು ಸುದೀಪ್ ಅಭಿನಯದ 'ರನ್ನ' ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.

Vijaya Karnataka Web 6 May 2019, 7:54 pm
ಡಿಂಪಲ್ ಕ್ವೀನ್ ಖ್ಯಾತಿಯ ನಟಿ ರಚಿತಾ ರಾಮ್ ಮತ್ತೆ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಈ ಮೊದಲು ಸಾಕಷ್ಟು ಬಾರಿ ನಟ ಪುನೀತ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ನಟಿ ರಚಿತಾರಾಮ್ ಮತ್ತೆ ಅದೇ ಸಮಸ್ಯೆಗೆ ಸಿಕ್ಕಿಹಾಕಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್ ವಿಚಾರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಆಗಾಗ ವಿವಾದಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಹಿಂದೆ ಪವರ್ ಸ್ಟಾರ್ ಅಭಿನಯದ 'ರಣವಿಕ್ರಮ', 'ಚಕ್ರವ್ಯೂಹ' ಹಾಗೂ 'ನಟಸಾರ್ವಭೌಮ' ಸಿನಿಮಾ ಸಮಯದಲ್ಲೂ ರಚಿತಾ ರಾಮ್ ವಿರುದ್ಧ 'ಪುನೀತ್ ಫ್ಯಾನ್ಸ್ ' ಸಮರ ಸಾರಿದ್ದರು.
Vijaya Karnataka Web rachitha0605


ಸದ್ಯಕ್ಕೆ ಮತ್ತೆ ವಿವಾದವಾಗಿರುವುದು ನಿರೂಪಕಿ ಅನುಶ್ರೀ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಆಡಿರುವ ಮಾತುಗಳು. ಹೌದು, ಅನುಶ್ರೀ ಇತ್ತೀಚಿಗಷ್ಟೆ 'ಅನುಶ್ರೀ ಯೂ ಟ್ಯೂಬ್ ಚಾನೆಲ್' ಪ್ರಾರಂಭ ಮಾಡಿದ್ದಾರೆ. ಸಿನಿಮಾ ತಾರೆಯರ ಸಂದರ್ಶನವೇ ಈ ಚಾನೆಲ್ ವಿಶೇಷ. ಇತ್ತೀಚಿಗಷ್ಟೆ ನಟಿ ರಚಿತಾ ರಾಮ್ ಸಂದರ್ಶನ ಮಾಡಿದ್ದರು ಅನುಶ್ರೀ. ಪವರ್ ಸ್ಟಾರ್ ಬಗ್ಗೆ ರಚಿತಾ ಹೇಳಿರುವ ಮಾತು ಈಗ ವಿವಾದಕ್ಕೆ ನಾಂದಿ ಹಾಡಿದೆ.

ಅನುಶ್ರೀ ಮತ್ತು ರಚಿತಾ ರಾಮ್ ನಡುವಿನ ಸಂದರ್ಶನದಲ್ಲಿ 'ಪವರ್ ಸ್ಟಾರ್ ಪುನೀತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಇಬ್ಬರಲ್ಲಿ ಉತ್ತಮ ಡಾನ್ಸರ್ ಯಾರು' ಎಂದು ರಚಿತಾ ಅವರನ್ನು ಅನುಶ್ರೀ ಕೇಳಿದಾಗ "ಪುನೀತ್ ರಾಜ್ ಕುಮಾರ್ ಜೊತೆ ಅಭಿನಯಿಸಿದ್ದೇನೆ, ರಾಕಿಂಗ್ ಸ್ಟಾರ್ ಅಂತ ಹೇಳಿದ್ದಾರೆ" ರಚಿತಾ ರಾಮ್. ಈ ಹೇಳಿಕೆಯಿಂದ ಅಪ್ಪು ಅಭಿಮಾನಿಗಳು ರಚಿತಾ ರಾಮ್ ವಿರುದ್ಧ ಕೆಂಡ ಕಾರುತ್ತಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ನಟಿ ರಚಿತಾ ರಾಮ್ ವಿರುದ್ಧ ಕಾಮೆಂಟ್ಸ್‌ಗಳ ಸುರಿಮಳೆಯೇ ಶುರುವಾಗಿದೆ ಎನ್ನಲಾಗಿದೆ. ಈ ಹಿಂದೆ ಕೂಡ ರಚಿತಾ ರಾಮ್ ವಿರುದ್ಧ ಅಪ್ಪು ಅಭಿಮಾನಿಗಳು ದೊಡ್ಡ ಅಭಿಯಾನ ಮಾಡಿದ್ದರು. ಪವರ್ ಸ್ಟಾರ್ ಅಭಿನಯದ 'ಚಕ್ರವ್ಯೂಹ' ಚಿತ್ರದಲ್ಲಿ ಡಿಂಪಲ್ ಕ್ವೀನ್ ನಾಯಕಿಯಾಗಿ ಆಯ್ಕೆ ಆಗುತ್ತಿದಂತೆ ಅಭಿಮಾನಿಗಳು ರೊಚ್ಚಿಗೆದ್ದಿದ್ದರು. ಪವರ್ ಸ್ಟಾರ್ ಜೊತೆ ರಚಿತಾ ರಾಮ್ ಅಭಿನಯಿಸುವುದು ಬೇಡ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಿದ್ದರು.

ರಚಿತಾ ರಾಮ್ ಕಂಡ್ರೆ ಅಪ್ಪು ಅಭಿಮಾನಿಗಳು ಕೆಂಡ ಕಾರಲು ಕಾರಣ 'ರಣವಿಕ್ರಮ' ಸಿನಿಮಾ ಎನ್ನಲಾಗುತ್ತಿದೆ. 'ಈ ಸಿನಿಮಾಗೆ ಮೊದಲು ರಚಿತಾ ರಾಮ್ ನಾಯಕಿ ಅಂತ ಹೇಳಲಾಗಿತ್ತು. ಆದರೆ, ನಟಿ ರಚಿತಾ ಅದೇ ಸಮಯದಲ್ಲಿ ದರ್ಶನ್ ಅಭಿನಯದ 'ಅಂಬರೀಶ' ಮತ್ತು ಸುದೀಪ್ ಅಭಿನಯದ 'ರನ್ನ' ಸಿನಿಮಾದಲ್ಲಿ ಬ್ಯುಸಿಯಾಗಿದ್ದರು. ಹೀಗಾಗಿ ರಚಿತಾ 'ರಣವಿಕ್ರಮ' ಸಿನಿಮಾ ಕೈಬಿಟ್ಟಿದ್ದರು. ಆದರೆ, ಪುನೀತ್ ಅಭಿಮಾನಿಗಳು ರಚಿತಾ ಬಗ್ಗೆ ತಪ್ಪು ಅಭಿಪ್ರಾಯ ತಳೆದು, ಅದು ಇಂದಿಗೂ ಹಾಗೆ ಮುಂದುವರೆದಿದೆ ಎನ್ನಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌