ಆ್ಯಪ್ನಗರ

ಶೂಟಿಂಗ್‌ ಸ್ಥಳಕ್ಕೆ ಹೋಗಿ ಸುದೀಪ್ ಅವರನ್ನು ಭೇಟಿಯಾದ ಪುನೀತ್ ರಾಜ್‌ಕುಮಾರ್

ನಟ ಪುನೀತ್ ರಾಜ್‌ಕುಮಾರ್ ಅವರು 'ರಾಜಕುಮಾರ' ಚಿತ್ರದ ಚಿತ್ರೀಕರಣದ ವೇಳೆಯಲ್ಲೂ ಸುದೀಪ್ ಅವರನ್ನು ಭೇಟಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈಗಾಗಲೇ 'ದಿ ವಿಲನ್' ಮೂಲಕ ಸುದೀಪ್ ಹಾಗೂ ಶಿವಣ‍್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನಮನಿಸಬಹುದು.

Vijaya Karnataka Web 22 Mar 2019, 7:53 pm
ಸ್ಯಾಂಡಲ್ ವುಡ್‌ನ ಕಿಚ್ಚ-ಪವರ್ ಒಟ್ಟಿಗೆ ಕುಳಿತು ಮಾತನಾಡಿದ್ದಾರೆ. ಅಂದರೆ, ಕನ್ನಡದ ನಟ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಕಿಚ್ಚ ಸುದಿಪ್ ಅವರಿಬ್ಬರೂ ಸುದೀಪ್ ನಾಯಕತ್ವದ ' ಕೋಟಿಗೊಬ್ಬ-3 ' ಚಿತ್ರದ ಸೆಟ್‌ನಲ್ಲಿ ಬೇಟಿಯಾಗಿ ಕೆಲವು ಅಮೂಲ್ಯ ಕ್ಷಣಗಳನ್ನು ಒಟ್ಟಿಗೆ ಕಳೆದಿದ್ದಾರೆ.
Vijaya Karnataka Web sudeep-puneeth2203


ಶಿವಕಾರ್ತಿಕ್ ನಿರ್ದೇಶನ, ಕಿಚ್ಚ ಸುದೀಪ್ ನಾಯಕತ್ವದ 'ಕೋಟಿಗೊಬ್ಬ-3' ಚಿತ್ರದ ಶೂಟಿಂಗ್ ನಡೆಯುವ ವೇಳೆ ನಟ ಪುನೀತ್ ಭೇಟಿ ಕೊಟ್ಟು, ಸುದೀಪ್ ಸೇರಿದಂತೆ ಚಿತ್ರತಂಡದವರೊಂದಿಗೆ ಬೆರೆತಿದ್ದಾರೆ. ಈ ಫೋಟೋ ಈಗ ಸಾಮಾಜಿಕ ಜಾಲಾತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ಕಿಚ್ಚ ಸುದೀಪ್ ಅವರು ಇತ್ತೀಚಿಗಷ್ಟೇ ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರದ ಶೂಟಿಂಗ್ ಮುಗಿಸಿ ಇದೀಗ 'ಕೋಟಿಗೊಬ್ಬ-3' ಚಿತ್ರದ ಶೂಟಿಂಗ್‌ಗೆ ಹಾಜರಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಭಾರತೀಯ ಸಿನಿಮಾ ಚಿತ್ರಖಕರಣದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮೆಟ್ರೋ ಸೆಟ್ ನಿರ್ಮಾಣ ಮಾಡಿ ಶೂಟಿಂಗ್ ಮಾಡಲಾಗುತ್ತಿದೆ.

ನಟ ಪುನೀತ್ ರಾಜ್‌ಕುಮಾರ್ ಅವರು 'ರಾಜಕುಮಾರ' ಚಿತ್ರದ ಚಿತ್ರೀಕರಣದ ವೇಳೆಯಲ್ಲೂ ಸುದೀಪ್ ಅವರನ್ನು ಭೇಟಿಯಾಗಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಈಗಾಗಲೇ 'ದಿ ವಿಲನ್' ಮೂಲಕ ಸುದೀಪ್ ಹಾಗೂ ಶಿವಣ‍್ಣ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬುದನ್ನು ನಮನಿಸಬಹುದು. ಇದೀಗ ಪುನೀತ್ ಕೂಡ ಸುದೀಪ್ ಅವರನ್ನು ಭೇಟಿಯಾಗಿದ್ದಾರೆ. ಇಷ್ಟು ಬೆಳವಣಿಗೆ ಬೆನ್ನಲ್ಲೇ, ಅವರಿಬ್ಬರ ಅಭಿಮಾನಿಗಳು ಈಗ ಪುನೀತ್-ಸುದೀಪ್ ಒಟ್ಟಾಗಿ ಒಂದು ಸಿನಿಮಾ ಮಾಡಲಿ ಎಂದು ಬಯಸುತ್ತಿದ್ದಾರೆ ಎಂಬ ಸುದ್ದಿ ಈಗ ಹರಿದಾಡುತ್ತಿದೆ.

'ಕೋಟಿಗೊಬ್ಬ-3' ಚಿತ್ರದಲ್ಲಿ ಸುದೀಪ್ ಅವರೊಂದಿಗೆ ನಟ ರವಿಶಂಕರ್, ರಾಜೇಶ್ ನಟರಂಗ, ಶ್ರದ್ಧಾ ದಾಸ್, ಅಫ್ತಾಬ್ ಶಿವದಾಸನಿ, ನವಾಬ್ ಶಾ, ತಬಲಾ ನಾಣಿ ಮುಂತಾದ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಖ್ಯಾತ ನಿರ್ಮಾಪಕ ಸೂರಪ್ಪಬಾಬು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ನಿರ್ಮಾಪಕರು ಚಿತ್ರದ ಮುಹೂರ್ತ ಫಿಕ್ಸ್ ಮಾಡುತ್ತಿದ್ದಂತೆ 'ಆನಂದ್ ಆಡಿಯೊ' ಚಿತ್ರದ ಆಡಿಯೊ ಹಕ್ಕುಗಳನ್ನು ಭಾರೀ ಮೊತ್ತಕ್ಕೆ ಈಗಾಗಲೇ ಖರೀದಿಸಿದೆ. ಈ ಸಂಗತಿಯನ್ನು 'ಆನಂದ್ ಆಡಿಯೊ' ಕಂಪೆನಿಯೇ ಟ್ವೀಟ್ ಮೂಲಕ ದೃಢ ಪಡಿಸಿದೆ. ಮುಂಬರುವ ಕಿಚ್ಚ ಅಭಿನಯದ 'ಕೋಟಿಗೊಬ್ಬ-3' ಚಿತ್ರವು ಈಗಾಗಲೇ ಬಹಳಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರವು ಕ್ರಿಸ್ ಮಸ್ ವೇಳೆಗೆ ತೆರೆಗೆ ಬರಲಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌