ನಟ ಪ್ರಭಾಸ್ ಅವರಿಗೆ ದೊಡ್ಡ ಬೆನ್ನೆಲುಬು ಎಂದರೆ, ಅವರು ದೊಡ್ಡಪ್ಪ, ಹಿರಿಯ ನಟ ಕೃಷ್ಣಂರಾಜು. ಪ್ರಭಾಸ್ ತಂದೆ ಉಪ್ಪಲಪಟ್ಟಿ ಸೂರ್ಯ ನಾರಾಯಣ ರಾಜು ಅವರು ತೀರಿಕೊಂಡ ಮೇಲಂತೂ, ತಂದೆಯ ಸ್ಥಾನದಲ್ಲಿ ನಿಂತು ಪ್ರಭಾಸ್ಗೆ ಮಾರ್ಗದರ್ಶನ ಮಾಡಿದವರು ಕೃಷ್ಣಂ ರಾಜು. ನಟನೆಯ ಜೊತೆಗೆ ಅವರು ರಾಜಕೀಯವಾಗಿಯೂ ಗುರುತಿಸಿಕೊಂಡಿದ್ದಾರೆ. ಈಚೆಗೆ ಅವರ ಬಗ್ಗೆ ಒಂದು ಮಾಹಿತಿ ಕೇಳಿಬಂದಿತ್ತು. ಅದೇನೆಂದರೆ, ಅವರು ತಮಿಳುನಾಡಿನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಅಂತ ಸುದ್ದಿ ಹಬ್ಬಿತ್ತು. ಹಾಗಾದರೆ, ಇದು ಎಷ್ಟು ನಿಜ? ಇಲ್ಲಿದೆ ಮಾಹಿತಿ. ಹಿರಿಯ ನಟ ಕೃಷ್ಣಂ ರಾಜು ಹೇಳಿದ್ದೇನು?
'ಈ ಸುದ್ದಿ ಎಲ್ಲ ಕಡೆ ಹರಿದಾಡುತ್ತಿದೆ. ಆದರೆ, ಯಾರೂ ಕೂಡ ಈ ಬಗ್ಗೆ ನನ್ನನ್ನು ಸ್ಪಷ್ಟನೆಗಾಗಿ ಸಂಪರ್ಕಿಸಿಲ್ಲ. ಇದು ನನಗೆ ಇಷ್ಟವಾಗಲಿಲ್ಲ. ತಮಿಳುನಾಡು ರಾಜ್ಯದ ರಾಜ್ಯಪಾಲರಾಗುವಂತೆ ಕೇಂದ್ರ ಸರ್ಕಾರ ನನ್ನನ್ನು ಸಂಪರ್ಕಿಸಿಲ್ಲ' ಎಂದು ಕೃಷ್ಣಂ ರಾಜು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲಿಗೆ, ಹಬ್ಬಿದ್ದ ವದಂತಿಗೆ ತೆರೆಬಿದ್ದಂತೆ ಆಗಿದೆ. ನಟನೆಯ ಜೊತೆಗೆ ಕೃಷ್ಣಂ ರಾಜು ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಜನವರಿ 20ರಂದು ಅವರು ತಮ್ಮ 80ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ.
ಕೃಷ್ಣಂ ರಾಜು ರಾಜಕೀಯ ಜೀವನ
1992ರಲ್ಲಿ ನರಸಪುರ ಕ್ಷೇತ್ರದಿಂದ ಕೃಷ್ಣಂ ರಾಜು ರಾಜಕೀಯ ಜೀವನವನ್ನು ಆರಂಭಿಸಿದ್ದರು. ಆಗ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ, ಆ ಚುನಾವಣೆಯಲ್ಲಿ ಅವರು ಸೋತರು. ನಂತರ ಅವರು ಬಿಜೆಪಿ ಸೇರಿಕೊಂಡು 1998ರಲ್ಲಿ ಕಾಕಿನಾಡ ಕ್ಷೇತ್ರದಿಂದ ಸ್ಪರ್ಧಿಸಿ, ಸಂಸದರಾದರು. ನಂತರ ಕೇಂದ್ರ ಸಚಿವರಾಗಿಯೂ ಕೃಷ್ಣಂ ರಾಜು ಕೆಲಸ ಮಾಡಿದ್ದಾರೆ. ಕೊನೆಗೆ ಬಿಜೆಪಿಯನ್ನು ಬಿಟ್ಟು, ಚಿರಂಜೀವಿ ಸ್ಥಾಪಿಸಿದ್ದ 'ಪ್ರಜಾ ರಾಜ್ಯಂ' ಸೇರಿಕೊಂಡರು. ಕೊನೆಗೆ ಅಲ್ಲಿಂದಲೂ ಹೊರಬಂದ ಮೇಲೆ ಕೆಲ ಕಾಲ ರಾಜಕೀಯದಿಂದ ಬ್ರೇಕ್ ಪಡೆದುಕೊಂಡರು. ಈಗ ಪುನಃ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ.
Photos: ಹೈದರಾಬಾದ್ನಲ್ಲಿ ನಡೆದ ಪ್ರಭಾಸ್ 'ಸಲಾರ್' ಸಿನಿಮಾ ಮುಹೂರ್ತದಲ್ಲಿ ನಟ ಯಶ್ ಭಾಗಿ!
ರಾಧೆ ಶ್ಯಾಮ್ನಲ್ಲಿ ನಟನೆ?
1966ರಿಂದಲೂ ನಟನೆಯಲ್ಲಿ ತೊಡಗಿಕೊಂಡಿರುವ ಕೃಷ್ಣಂ ರಾಜು, ಈಚೆಗೆ ನಟನೆಯಿಂದ ಕೊಂಚ ದೂರ ಉಳಿದಿದ್ದಾರೆ. 2019ರಲ್ಲಿ ತೆರೆಕಂಡ 'ಕ್ರೇಜಿ ಕ್ರೇಜಿ ಫೀಲಿಂಗ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆನಂತರ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ರಾಧೆ ಶ್ಯಾಮ್'ನಲ್ಲಿ ಒಂದು ಮಹತ್ವದ ಪಾತ್ರ ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಿಬಂದಿದೆ. ಸದ್ಯ ಆ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಎದುರು ಜಾನ್ ಅಬ್ರಾಹಂ ವಿಲನ್?
'ಈ ಸುದ್ದಿ ಎಲ್ಲ ಕಡೆ ಹರಿದಾಡುತ್ತಿದೆ. ಆದರೆ, ಯಾರೂ ಕೂಡ ಈ ಬಗ್ಗೆ ನನ್ನನ್ನು ಸ್ಪಷ್ಟನೆಗಾಗಿ ಸಂಪರ್ಕಿಸಿಲ್ಲ. ಇದು ನನಗೆ ಇಷ್ಟವಾಗಲಿಲ್ಲ. ತಮಿಳುನಾಡು ರಾಜ್ಯದ ರಾಜ್ಯಪಾಲರಾಗುವಂತೆ ಕೇಂದ್ರ ಸರ್ಕಾರ ನನ್ನನ್ನು ಸಂಪರ್ಕಿಸಿಲ್ಲ' ಎಂದು ಕೃಷ್ಣಂ ರಾಜು ಹೇಳಿದ್ದಾರೆ ಎನ್ನಲಾಗಿದೆ. ಅಲ್ಲಿಗೆ, ಹಬ್ಬಿದ್ದ ವದಂತಿಗೆ ತೆರೆಬಿದ್ದಂತೆ ಆಗಿದೆ. ನಟನೆಯ ಜೊತೆಗೆ ಕೃಷ್ಣಂ ರಾಜು ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಜನವರಿ 20ರಂದು ಅವರು ತಮ್ಮ 80ನೇ ವರ್ಷದ ಜನ್ಮದಿನ ಆಚರಣೆ ಮಾಡಿಕೊಂಡಿದ್ದಾರೆ.
ಕೃಷ್ಣಂ ರಾಜು ರಾಜಕೀಯ ಜೀವನ
1992ರಲ್ಲಿ ನರಸಪುರ ಕ್ಷೇತ್ರದಿಂದ ಕೃಷ್ಣಂ ರಾಜು ರಾಜಕೀಯ ಜೀವನವನ್ನು ಆರಂಭಿಸಿದ್ದರು. ಆಗ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ಆದರೆ, ಆ ಚುನಾವಣೆಯಲ್ಲಿ ಅವರು ಸೋತರು. ನಂತರ ಅವರು ಬಿಜೆಪಿ ಸೇರಿಕೊಂಡು 1998ರಲ್ಲಿ ಕಾಕಿನಾಡ ಕ್ಷೇತ್ರದಿಂದ ಸ್ಪರ್ಧಿಸಿ, ಸಂಸದರಾದರು. ನಂತರ ಕೇಂದ್ರ ಸಚಿವರಾಗಿಯೂ ಕೃಷ್ಣಂ ರಾಜು ಕೆಲಸ ಮಾಡಿದ್ದಾರೆ. ಕೊನೆಗೆ ಬಿಜೆಪಿಯನ್ನು ಬಿಟ್ಟು, ಚಿರಂಜೀವಿ ಸ್ಥಾಪಿಸಿದ್ದ 'ಪ್ರಜಾ ರಾಜ್ಯಂ' ಸೇರಿಕೊಂಡರು. ಕೊನೆಗೆ ಅಲ್ಲಿಂದಲೂ ಹೊರಬಂದ ಮೇಲೆ ಕೆಲ ಕಾಲ ರಾಜಕೀಯದಿಂದ ಬ್ರೇಕ್ ಪಡೆದುಕೊಂಡರು. ಈಗ ಪುನಃ ಬಿಜೆಪಿ ಪಕ್ಷ ಸೇರಿಕೊಂಡಿದ್ದಾರೆ.
Photos: ಹೈದರಾಬಾದ್ನಲ್ಲಿ ನಡೆದ ಪ್ರಭಾಸ್ 'ಸಲಾರ್' ಸಿನಿಮಾ ಮುಹೂರ್ತದಲ್ಲಿ ನಟ ಯಶ್ ಭಾಗಿ!
ರಾಧೆ ಶ್ಯಾಮ್ನಲ್ಲಿ ನಟನೆ?
1966ರಿಂದಲೂ ನಟನೆಯಲ್ಲಿ ತೊಡಗಿಕೊಂಡಿರುವ ಕೃಷ್ಣಂ ರಾಜು, ಈಚೆಗೆ ನಟನೆಯಿಂದ ಕೊಂಚ ದೂರ ಉಳಿದಿದ್ದಾರೆ. 2019ರಲ್ಲಿ ತೆರೆಕಂಡ 'ಕ್ರೇಜಿ ಕ್ರೇಜಿ ಫೀಲಿಂಗ್' ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆನಂತರ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಇದೀಗ ಪ್ರಭಾಸ್ ನಟನೆಯ ಬಹುನಿರೀಕ್ಷಿತ 'ರಾಧೆ ಶ್ಯಾಮ್'ನಲ್ಲಿ ಒಂದು ಮಹತ್ವದ ಪಾತ್ರ ಮಾಡಲಿದ್ದಾರೆ ಎಂಬ ಬಗ್ಗೆ ಮಾಹಿತಿ ಕೇಳಿಬಂದಿದೆ. ಸದ್ಯ ಆ ಕುರಿತು ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾದಲ್ಲಿ ಪ್ರಭಾಸ್ ಎದುರು ಜಾನ್ ಅಬ್ರಾಹಂ ವಿಲನ್?