ಆ್ಯಪ್ನಗರ

ಎನ್‌ಆರ್‌ಐ ಆದ ಪ್ರಜ್ವಲ್‌ ದೇವರಾಜ್

ಪ್ರಯಾಣಿಕರ ಗಮನಕ್ಕೆ ಚಿತ್ರದ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ಮನೋಹರ್‌ ಈಗ ಪ್ರಜ್ವಲ್‌ಗೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

Vijaya Karnataka 5 Oct 2018, 1:58 pm
ನಟ ಪ್ರಜ್ವಲ್‌ ದೇವರಾಜ್‌ ಈಗ ಎನ್‌ಆರ್‌ಐ. ಹೊಸ ಚಿತ್ರಕ್ಕೆ ಸಹಿ ಮಾಡಿದ್ದು ಈ ಚಿತ್ರದಲ್ಲಿ ಅವರು ಎನ್‌ ಆರ್‌ ಐ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚೆಗೆ ಲೈಫ್‌ ಜತೆ ಒಂದು ಸೆಲ್ಫಿ ಚಿತ್ರದಲ್ಲಿ ಪ್ರಜ್ವಲ್‌ ನಟಿಸಿದ್ದರು. ಪ್ರಯಾಣಿಕರ ಗಮನಕ್ಕೆ ಚಿತ್ರ ನಿರ್ದೇಶನ ಮಾಡಿದ್ದ ಮನೋಹರ್‌ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.
Vijaya Karnataka Web prajwal-devaraj


'ವಿದೇಶದಲ್ಲೇ ಬೆಳೆದ ಹುಡುಗ ಭಾರತಕ್ಕೆ ಬಂದಾಗ ಏನೇನು ನಡೆಯುತ್ತೆ ಅನ್ನೋದು ಚಿತ್ರದಲ್ಲಿದೆ. ಭಾರತದ ಬಗ್ಗೆ ಅವನಿಗೆ ಏನೇನೂ ಗೊತ್ತಿರಲ್ಲ. ಯಾವುದೋ ಕೆಲಸದ ಮೇಲೆ ಬಂದ ನಾಯಕ ಇಲ್ಲಿನ ವಿಚಾರಗಳು ಇಷ್ಟ ಆಗಿ ಭಾರತದಲ್ಲೇ ಉಳಿದುಕೊಳ್ತಾನೆ' ಎಂದಿದ್ದಾರೆ ನಿರ್ದೇಶಕ.

ಚಿತ್ರದ ಟೈಟಲ್‌ ಇನ್ನೂ ಅಂತಿಮಗೊಂಡಿಲ್ಲ. ನಾಯಕಿಗಾಗಿ ಹುಡುಕಾಟ ನಡೆದಿದೆ. ಜನಪ್ರಿಯ ನಟಿಯನ್ನೇ ಈ ಪಾತ್ರಕ್ಕೆ ಕರೆತರಲು ಮನೋಹರ್‌ ಆಲೋಚಿಸುತ್ತಿದ್ದಾರೆ. ಸಿನಿಮಾ ಜನವರಿಯಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌