ಆ್ಯಪ್ನಗರ

ಮತ ಪ್ರಚಾರಕ್ಕೆ ದೀಪಿಕಾ, ಭಟ್ರು, ಸುದೀಪ್

ಕನ್ನಡಿಗ ಹಾಗೂ ಬ್ಯಾಂಡ್ಮಿಟನ್‌ ದಿಗ್ಗಜ ಪ್ರಕಾಶ್‌ ಪಡುಕೋಣೆ ಮತ್ತವರ ಪುತ್ರಿ ನಟಿ ದೀಪಿಕಾ ಪಡುಕೋಣೆಯ ಇಬ್ಬರನ್ನೂ ಚುನಾವಣಾ ಆಯೋಗ ಕರ್ನಾಟಕದ ಅಸೆಂಬ್ಲಿ ಎಲೆಕ್ಷನ್‌ಗೆ ರಾಯಭಾರಿಗಳನ್ನಾಗಿ ನೇಮಕ ಮಾಡಲು ಚಿಂತಿಸಿದೆ.

Vijaya Karnataka 27 Mar 2018, 5:00 am
ಕನ್ನಡಿಗ ಹಾಗೂ ಬ್ಯಾಂಡ್ಮಿಟನ್‌ ದಿಗ್ಗಜ ಪ್ರಕಾಶ್‌ ಪಡುಕೋಣೆ ಮತ್ತವರ ಪುತ್ರಿ ನಟಿ ದೀಪಿಕಾ ಪಡುಕೋಣೆಯ ಇಬ್ಬರನ್ನೂ ಚುನಾವಣಾ ಆಯೋಗ ಕರ್ನಾಟಕದ ಅಸೆಂಬ್ಲಿ ಎಲೆಕ್ಷನ್‌ಗೆ ರಾಯಭಾರಿಗಳನ್ನಾಗಿ ನೇಮಕ ಮಾಡಲು ಚಿಂತಿಸಿದೆ.
Vijaya Karnataka Web prakash padukone deepika could be ecs poll mascots
ಮತ ಪ್ರಚಾರಕ್ಕೆ ದೀಪಿಕಾ, ಭಟ್ರು, ಸುದೀಪ್


ಇವರಿಬ್ಬರನ್ನು ಮತದಾನ ಪ್ರಮಾಣ ಹೆಚ್ಚಿಗೆ ಮಾಡಲು ಸ್ಟೇಟ್‌ ಐಕಾನ್‌ಗಳನ್ನಾಗಿ ಮಾಡಲು ಚುನಾವಣಾ ಆಯೋಗ ನಿರ್ಧಾರ ಮಾಡಿದೆ. ಈ ಮೊದಲು ರಾಹುಲ್‌ ದ್ರಾವಿಡ್‌ ಅವರನ್ನು ರಾಯಭಾರಿಯನ್ನಾಗಿ ಮಾಡಲು ಚಿಂತನೆ ನಡೆಸಲಾಗಿತ್ತು. ಆದರೆ ದ್ರಾವಿಡ್‌ ಅವರ ಬಿಝಿ ಶೆಡ್ಯೂಲ್‌ನಿಂದಾಗಿ ಅವರೇ ಇದನ್ನು ನಿರಾಕರಿಸಿದ್ದಾರೆ ಎನ್ನಲಾಗಿದೆ. ದೀಪಿಕಾ ಪಡುಕೋಣೆ ಅತಿ ಹೆಚ್ಚು ಮಹಿಳೆಯರನ್ನು ಮತ ಹಾಕಲು ಪ್ರೆರೇಪಿಸಬಹುದು ಎಂಬ ಉದ್ದೇಶದಿಂದ ಅವರ ಹೆಸರನ್ನು ಫೈನಲ್‌ ಮಾಡಲಾಗಿದೆಯಂತೆ.

ಪಡುಕೋಣೆ ಈಗಾಗಲೇ ಚುನಾವಣಾ ಆಯೋಗದ ಆಫರ್‌ಗೆ ಒಪ್ಪಿಗೆ ನೀಡಿದ್ದಾರಂತೆ. ಆದರೆ ಲಿಖಿತ ರೂಪದ ಒಪ್ಪಿಗೆ ಪತ್ರಕ್ಕಾಗಿ ಆಯೋಗ ಕಾಯುತ್ತಿದೆ. ಪಡುಕೋಣೆ ಮುಖ್ಯ ರಾಯಭಾರಿಯಾದರೆ, ಅವರ ಜತೆಯಲ್ಲಿ ಕ್ರಿಕೆಟರ್‌ ಜಾವಗಲ್‌ ಶ್ರೀನಾಥ್‌, ನಿರ್ದೇಶಕ ಯೋಗರಾಜ್‌ಭಟ್‌, ಸುದೀಪ್‌, ಯಶ್‌, ರಶ್ಮಿಕಾ ಮಂದಣ್ಣ, ಶ್ರುತಿ ಹರಿಹರನ್‌ ಸಹ ರಾಯಬಾರಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ.

ದೀಪಿಕಾ ಪಡುಕೋಣೆ ಮುಖ್ಯ ರಾಯಭಾರಿಯಾಗಿ ಮತದಾನದ ಮಹತ್ವವನ್ನು ಸಾರಿದರೆ, ಉಳಿದ ರಾಯಭಾರಿಗಳು ಪ್ರಿಂಟ್‌ ಮತ್ತು ಎಲೆಕ್ಟ್ರಾನಿಕ್‌ ಜಾಹಿರಾತುಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಸುಮಾರು 16 ಲಕ್ಷ ಹೊಸ ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿದ್ದು, ಅವರೆಲ್ಲರೂ ವೋಟ್‌ ಮಾಡಬೇಕು ಎಂಬ ಉದ್ದೇಶದಿಂದ ಯೂತ್‌ ಐಕಾನ್‌ ಆಗಿ ದೀಪಿಕಾ ಪಡುಕೋಣೆಯನ್ನು ರಾಯಭಾರಿಯನ್ನಾಗಿ ಮಾಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌