ಮತಗಟ್ಟೆ ಸಮೀಕ್ಷೆ ಸುಳ್ಳಾಗಲಿದೆ ನಿರೀಕ್ಷಿಸಿ ಎಂದ ಪ್ರಕಾಶ್ ರೈ
ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟ್ ಮಾಡಿದ್ದು ಹುಸಿಯಾಗಲಿದೆ ಎಂದಿದ್ದಾರೆ. "ಕೆಲವು ದಿನ ಅವರು ಕನಸು ಕಾಣಲಿ, ಆ ಬಳಿಕ ದುಃಸ್ವಪ್ನ ಮರುಕಳಿಸಲಿದೆ. 23ನೇ ತಾರೀಖು ನನಗೆ ನಂಬಿಕೆ ಇದೆ ನಾಗರಿಕರು ಇದನ್ನು (ಮತಗಟ್ಟೆ ಸಮೀಕ್ಷೆ) ಸುಳ್ಳು ಮಾಡಲಿದ್ದಾರೆ. ಅಲ್ಲಿಯ ತನಕ ಹಾಡುತ್ತಾ ಸಂಭ್ರಮಿಸಿ. ಬಾಪೂ ಜಿ ನಮಗೆ ಕಲಿಸಿದ್ದು.." ಎಂದಿದ್ದಾರೆ.
Vijaya Karnataka Web 20 May 2019, 12:12 pm
ಬಹುತೇಕ ಮತಗಟ್ಟೆ ಸಮೀಕ್ಷೆಗಳು ಕೇಂದ್ರದಲ್ಲಿ ಮತ್ತೊಮ್ಮೆ ನಮೋ ಸರಕಾರ ಎಂದಿದೆ. ಅಧಿಕಾರದ ಚುಕ್ಕಾಣಿ ಹಿಡಿಯುವುದು ಗ್ಯಾರಂಟಿ ಎಂದಿವೆ. ಹತ್ತಕ್ಕೂ ಅಧಿಕ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿದ್ದು ಹೆಚ್ಚಿನವು ಎನ್ಡಿಎಗೆ ಬಹುಮತ ನೀಡಿದೆ. ಎನ್ಡಿಎ ಬಲ 300ರ ಗಡಿ ದಾಟುವ ಭವಿಷ್ಯ ನುಡಿದಿವೆ.
ಆದರೆ ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟ್ ಮಾಡಿದ್ದು ಹುಸಿಯಾಗಲಿದೆ ಎಂದಿದ್ದಾರೆ. "ಕೆಲವು ದಿನ ಅವರು ಕನಸು ಕಾಣಲಿ, ಆ ಬಳಿಕ ದುಃಸ್ವಪ್ನ ಮರುಕಳಿಸಲಿದೆ. 23ನೇ ತಾರೀಖು ನನಗೆ ನಂಬಿಕೆ ಇದೆ ನಾಗರಿಕರು ಇದನ್ನು (ಮತಗಟ್ಟೆ ಸಮೀಕ್ಷೆ) ಸುಳ್ಳು ಮಾಡಲಿದ್ದಾರೆ. ಅಲ್ಲಿಯ ತನಕ ಹಾಡುತ್ತಾ ಸಂಭ್ರಮಿಸಿ. ಬಾಪೂ ಜಿ ನಮಗೆ ಕಲಿಸಿದ್ದು.." ಎಂದಿದ್ದಾರೆ.
ಪ್ರಕಾಶ್ ರೈ ಅವರ ಟ್ವೀಟ್ಗೆ ಸಾಕಷ್ಟು ಕಾಮೆಂಟ್ಗಳು ಹರಿದುಬಂದಿವೆ. "ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ನಿಮಗೆ ಇವಿಎಂ ಸಮಸ್ಯೆ ಏನೂ ಇಲ್ಲ ತಾನೆ?, ಓವರ್ ಕಾನ್ಫಿಡೆನ್ಸ್, ನಿಮ್ಮ ಟ್ವೀಟನ್ನು ಸೇವ್ ಮಾಡಿಕೊಳ್ಳಿ. ಫಲಿತಾಂಶ ಏನೇ ಇರಲಿ ಮೇ 23ರಂದು ಸೆಲೆಬ್ರೇಟ್ ಮಾಡಿ, ಇವಿಎಂ ಸರಿ ಇಲ್ಲ ಎಂದು ಮಾತ್ರ #JustAsking ಎಂದು ಕೇಳಲು ಹೋಗಬೇಡಿ" ಎಂಬ ಕಾಮೆಂಟ್ಗಳು ಹರಿದುಬಂದಿವೆ.
ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಎಂಟರ ಪೈಕಿ ನಾಲ್ಕು ಸಮೀಕ್ಷೆಗಳು ಬಿಜೆಪಿಗೆ 20ಕ್ಕಿಂತ ಹೆಚ್ಚು ಸ್ಥಾನ ನೀಡಿವೆ. ಬಹುನಿರೀಕ್ಷೆಯೊಂದಿಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ -ಜೆಡಿಎಸ್ಗಳಿಗೆ ನಿರಾಸೆಯ ಸಾಧ್ಯತೆ ಕಂಡುಬಂದಿದೆ. ಮಂಡ್ಯದಲ್ಲಿ ಸುಮಲತಾ ಗೆಲ್ಲುವ ಬಗ್ಗೆ ಐದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಆದರೆ ನಟ ಹಾಗೂ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಮತಗಟ್ಟೆ ಸಮೀಕ್ಷೆ ಬಗ್ಗೆ ಟ್ವೀಟ್ ಮಾಡಿದ್ದು ಹುಸಿಯಾಗಲಿದೆ ಎಂದಿದ್ದಾರೆ. "ಕೆಲವು ದಿನ ಅವರು ಕನಸು ಕಾಣಲಿ, ಆ ಬಳಿಕ ದುಃಸ್ವಪ್ನ ಮರುಕಳಿಸಲಿದೆ. 23ನೇ ತಾರೀಖು ನನಗೆ ನಂಬಿಕೆ ಇದೆ ನಾಗರಿಕರು ಇದನ್ನು (ಮತಗಟ್ಟೆ ಸಮೀಕ್ಷೆ) ಸುಳ್ಳು ಮಾಡಲಿದ್ದಾರೆ. ಅಲ್ಲಿಯ ತನಕ ಹಾಡುತ್ತಾ ಸಂಭ್ರಮಿಸಿ. ಬಾಪೂ ಜಿ ನಮಗೆ ಕಲಿಸಿದ್ದು.." ಎಂದಿದ್ದಾರೆ.
ಪ್ರಕಾಶ್ ರೈ ಅವರ ಟ್ವೀಟ್ಗೆ ಸಾಕಷ್ಟು ಕಾಮೆಂಟ್ಗಳು ಹರಿದುಬಂದಿವೆ. "ಇನ್ನು ನಾಲ್ಕು ದಿನ ಮಾತ್ರ ಬಾಕಿ ಇದೆ. ನಿಮಗೆ ಇವಿಎಂ ಸಮಸ್ಯೆ ಏನೂ ಇಲ್ಲ ತಾನೆ?, ಓವರ್ ಕಾನ್ಫಿಡೆನ್ಸ್, ನಿಮ್ಮ ಟ್ವೀಟನ್ನು ಸೇವ್ ಮಾಡಿಕೊಳ್ಳಿ. ಫಲಿತಾಂಶ ಏನೇ ಇರಲಿ ಮೇ 23ರಂದು ಸೆಲೆಬ್ರೇಟ್ ಮಾಡಿ, ಇವಿಎಂ ಸರಿ ಇಲ್ಲ ಎಂದು ಮಾತ್ರ #JustAsking ಎಂದು ಕೇಳಲು ಹೋಗಬೇಡಿ" ಎಂಬ ಕಾಮೆಂಟ್ಗಳು ಹರಿದುಬಂದಿವೆ.
ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ. ಎಂಟರ ಪೈಕಿ ನಾಲ್ಕು ಸಮೀಕ್ಷೆಗಳು ಬಿಜೆಪಿಗೆ 20ಕ್ಕಿಂತ ಹೆಚ್ಚು ಸ್ಥಾನ ನೀಡಿವೆ. ಬಹುನಿರೀಕ್ಷೆಯೊಂದಿಗೆ ಮೈತ್ರಿ ಮಾಡಿಕೊಂಡ ಕಾಂಗ್ರೆಸ್ -ಜೆಡಿಎಸ್ಗಳಿಗೆ ನಿರಾಸೆಯ ಸಾಧ್ಯತೆ ಕಂಡುಬಂದಿದೆ. ಮಂಡ್ಯದಲ್ಲಿ ಸುಮಲತಾ ಗೆಲ್ಲುವ ಬಗ್ಗೆ ಐದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.