ಆ್ಯಪ್ನಗರ

ಚಿತ್ರಮಂದಿರಗಳಿಗೆ 'ಪ್ರೀಮಿಯರ್ ಪದ್ಮಿನಿ' ನುಗ್ಗುವ ಸಮಯ

ರಮೇಶ್‌ ಇಂದಿರಾ ನಿರ್ದೇಶನದ 'ಪ್ರಿಮಿಯರ್‌ ಪದ್ಮಿನಿ' ಸಿನಿಮಾದ ಬಿಡುಗಡೆ ದಿನಾಂಕ ನಿಕ್ಕಿಯಾಗಿದೆ. ಏ.26ರಂದು ಈ ಸಿನಿಮಾ ರಾಜ್ಯಾದ್ಯಂತ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಲಿದೆ.

Vijaya Karnataka 30 Mar 2019, 2:53 pm
ಜಗ್ಗೇಶ್‌ ಮುಖ್ಯ ಭೂಮಿಕೆಯ 'ಪ್ರಿಮಿಯರ್‌ ಪದ್ಮಿನಿ' ಸಿನಿಮಾದ ಬಿಡುಗಡೆಯ ದಿನಾಂಕ ಫಿಕ್ಸ್‌ ಆಗಿದೆ. ಏಪ್ರಿಲ್‌ 26ರಂದು ರಾಜ್ಯಾದ್ಯಂತ ನೂರಾರು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್‌ ಮಾಡುವುದಾಗಿ ನಿರ್ಮಾಪಕಿ ಶ್ರುತಿ ನಾಯ್ಡು ಹೇಳಿದ್ದಾರೆ.
Vijaya Karnataka Web jaggesh


'ಚುನಾವಣೆ ಕಾವು ಇಳಿಯುತ್ತಿದ್ದಂತೆಯೇ ಪ್ರಿಮಿಯರ್‌ ಪದ್ಮಿನಿ ಥಿಯೇಟರ್‌ಗೆ ಬರಲಿದೆ. ಮೊದಲ ಬಾರಿಗೆ ಜಗ್ಗೇಶ್‌ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ನಾನಾ ವಿಶೇಷಗಳು ಈ ಸಿನಿಮಾದಲ್ಲಿದ್ದು, ಮೇಕಿಂಗ್‌ನಿಂದಾಗಿಯೂ ಚಿತ್ರ ಗಮನ ಸೆಳೆಯಲಿದೆ' ಎನ್ನುತ್ತಾರೆ ನಿರ್ಮಾಪಕಿ.

ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ನಟ, ನಿರ್ದೇಶಕ ರಮೇಶ್‌ ಇಂದಿರಾ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಎರಡು ಜನರೇಷನ್‌ ಕಥೆಯನ್ನು ಈ ಚಿತ್ರದಲ್ಲಿ ಅವರು ಹೇಳುತ್ತಿದ್ದಾರೆ.

'ಬದುಕಿನ ನಾನಾ ಮಜಲುಗಳನ್ನು ಹೇಳುವ ಸಿನಿಮಾ ಇದಾಗಿದ್ದು, ನಗಿಸುತ್ತಲೇ ಬದುಕಿನ ಅನೇಕ ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಜಗ್ಗೇಶ್‌ ಕಾರು ಮಾಲೀಕರ ಪಾತ್ರ ಮಾಡಿದ್ದು, ಕಾರು ಕೂಡ ಒಂದು ಪಾತ್ರವಾಗಿದೆ. ಜಗ್ಗೇಶ್‌, ಮಧು ಮತ್ತು ಸುಧಾರಾಣಿ ಒಂದು ಜನರೇಷನ್‌ನ ಕಥೆಯಲ್ಲಿ ನಟಿಸಿದ್ದು, ಪ್ರಮೋದ್‌, ಹಿತಾ ಮತ್ತಿತರರು ಹೊಸ ಜನರೇಷನ್‌ನ ಕಥೆಯಲ್ಲಿ ಬರಲಿದ್ದಾರೆ. ಹಾಗಾಗಿ ಎಲ್ಲ ವರ್ಗದ ಜನರು ನೋಡುವಂಥ ಚಿತ್ರ ಇದಾಗಿದೆ' ಎನ್ನುತ್ತಾರೆ ನಿರ್ದೇಶಕರು.

ಈಗಾಗಲೇ ರಿಲೀಸ್‌ ಆಗಿರುವ ಚಿತ್ರದ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಕೂಡ ಕೇಳುಗರ ಮನಸ್ಸು ಗೆದ್ದಿವೆ. ಸಿನಿಮಾ ಕೂಡ ಗೆಲ್ಲುವ ವಿಶ್ವಾಸ ಚಿತ್ರತಂಡದ್ದು.

ಶ್ರುತಿ ಮತ್ತು ರಮೇಶ್‌ ಇಂದಿರಾ ಜೋಡಿಯ ಅನೇಕ ಧಾರಾವಾಹಿಗಳು ಕಿರುತೆರೆಯ ಲೋಕದಲ್ಲಿ ದಾಖಲೆ ಮಾಡಿವೆ. ಅಪಾರ ಅಭಿಮಾನಿಗಳು ಹೊಂದಿರುವ ಈ ಜೋಡಿಯ ಮೊದಲ ಸಿನಿಮಾ ಇದಾಗಿದ್ದು, ಸ್ಯಾಂಡಲ್‌ವುಡ್‌ಗೆ ಇವರ ಮೂಲಕ ಕಿರುತೆರೆಯ ಪ್ರೇಕ್ಷಕರು ಕೂಡ ಬರಲಿದ್ದಾರೆ.

'ಪ್ರತಿ ಪಾತ್ರಕ್ಕೂ ತನ್ನದೇ ಆದ ಮಹತ್ವ ಇರುವುದರಿಂದ, ಆಯಾ ಪಾತ್ರಗಳ ಮೂಲಕ ಒಂದೊಂದು ವಿಷಯವನ್ನು ಹೇಳುತ್ತಿದ್ದೇವೆ. ಜೀವನದ ಅನೇಕ ಸಂಗತಿಗಳನ್ನು ನೈಜ ಎನ್ನುವಂತೆ ಚಿತ್ರಿಸಲಾಗಿದೆ. ಪ್ರತಿ ಪ್ರೇಕ್ಷಕ ಕೂಡ ಎಂಜಾಯ್‌ ಮಾಡಿಕೊಂಡು ನೋಡುವಂಥ ಚಿತ್ರ ಇದಾಗಿದೆ' ಎನ್ನುವುದು ನಿರ್ದೇಶಕ ರಮೇಶ್‌ ಮಾತು.

ಏ.26ರಂದು ಈ ಸಿನಿಮಾ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಈ ಮೊದಲು ಯುಗಾದಿಗೆ ಟ್ರೇಲರ್‌ ಬಿಡುಗಡೆ ಮಾಡುವ ಪ್ಲ್ಯಾನ್‌ ಕೂಡ ಮಾಡಿದ್ದೇವೆ.

- ಶ್ರುತಿ ನಾಯ್ಡು, ನಿರ್ಮಾಪಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌