ಆ್ಯಪ್ನಗರ

ಪ್ರಿಮಿಯರ್ ಪದ್ಮಿನಿಗಾಗಿ ಕುಣಿದ ಜಗ್ಗೇಶ್‌

ಪ್ರಿಮಿಯರ್‌ ಪದ್ಮಿನಿ ಸಿನಿಮಾದ ಎಣ್ಣೆ ಸಾಂಗ್‌ಗೆ ಜಗ್ಗೇಶ್‌ ಮತ್ತು ಪ್ರಮೋದ್‌ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗಾಗಿಯೇ ವಿಶೇಷ ಸೆಟ್‌ ಹಾಕಲಾಗಿದ್ದು, ಇಮ್ರಾನ್‌ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ.

Vijaya Karnataka 21 Jan 2019, 7:06 am
ಕನ್ನಡ ಸಿನಿಮಾ ರಂಗದಲ್ಲಿ ಎಣ್ಣೆ ಸಾಂಗ್‌ಗಳು ಸದ್ದು ಮಾಡುತ್ತಿವೆ. ಅದಕ್ಕೆ ಹೊಸ ಸೇರ್ಪಡೆ 'ಪ್ರಿಮಿಯರ್‌ ಪದ್ಮಿನಿ' ಸಿನಿಮಾದ ಗೀತೆ. ಯೋಗರಾಜ್‌ ಭಟ್‌ ಸಾಹಿತ್ಯದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ವೇದಾಂತವಿದೆ. ಜತೆಗೆ ಕಳೆದುಕೊಂಡವರ ಭಾವನೆಗಳನ್ನು ನೆನಪಿಸುವಂಥ ಸಾಲುಗಳಿವೆ.
Vijaya Karnataka Web Premier Padmini_(175)


ಈ ಹಾಡಿನ ಶೂಟ್‌ಗಾಗಿಯೇ ವಿಶೇಷ ಸೆಟ್‌ ಕೂಡ ಹಾಕಲಾಗಿದೆ. ಕೆಜಿಎಫ್‌ ಚಿತ್ರಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್‌ ಐವತ್ತರ ದಶಕದ ಎಣ್ಣೆ ಅಂಗಡಿಯನ್ನು ಸೃಷ್ಟಿ ಮಾಡಿದ್ದಾರೆ.

'ಈ ಹಾಡನ್ನು ಮೊದಲು ಪ್ರಮೋಷನ್‌ಗಾಗಿ ಬಳಸಿಕೊಳ್ಳಲು ನಿರ್ಧಾರ ಮಾಡಲಾಗಿತ್ತು. ಆದರೆ, ಸಿನಿಮಾದ ಕ್ಲೈಮ್ಯಾಕ್ಸ್‌ಗೆ ಇದು ಪಕ್ಕಾ ಒಪ್ಪುತ್ತಿತ್ತು. ಮುಖ್ಯ ಘಟ್ಟವಾಗಿ ಕಥೆಗೆ ಪೂರಕವಾಗುತ್ತಿತ್ತು. ಹಾಗಾಗಿ ಸಿನಿಮಾದಲ್ಲಿ ಅಳವಡಿಸಿಕೊಂಡೆವು. ಅಲ್ಲದೇ, ಜಗ್ಗೇಶ್‌ ಅವರು ಮಾಸ್‌ ಹಾಡಿನಲ್ಲಿ ಕಾಣಿಸಿಕೊಂಡು ತುಂಬಾ ವರ್ಷಗಳೇ ಆಗಿವೆ. ನೋಡುಗರು ಅಂಥ ಹಾಡಿನಲ್ಲಿ ಜಗ್ಗೇಶ್‌ ಅವರನ್ನು ನೋಡಲು ಇಷ್ಟಪಡುತ್ತಾರೆ. ಈ ಎಲ್ಲ ಕಾರಣಗಳಿಂದಾಗಿ ಹಾಡಿನ ಚಿತ್ರೀಕರಣ ಮಾಡಿದೆವು' ಎಂದಿದ್ದಾರೆ ನಿರ್ಮಾಪಕಿ ಶ್ರುತಿ ನಾಯ್ಡು.

ಈ ಹಾಡಿನ ಚಿತ್ರೀಕರಣಕ್ಕಾಗಿ ಹಳ್ಳಿಮನೆ ರೀತಿಯಲ್ಲಿ ಸೆಟ್‌ ಹಾಕಿದ್ದಾರೆ ಶಿವಕುಮಾರ್‌. ಎತ್ತಿನ ಗಾಡಿ ಸೇರಿದಂತೆ 1950ರ ಆಸುಪಾಸಿನ ಹಳ್ಳಿಯ ವಾತಾವರಣವನ್ನು ಕಟ್ಟಿಕೊಟ್ಟಿದ್ದಾರೆ. ಆ ಕಾಲದ ವಸ್ತುಗಳನ್ನು ಹಾಡಿನಲ್ಲಿ ಬಳಸಿಕೊಂಡಿದ್ದಾರೆ. ಹಾಗಾಗಿ ಹಾಡು ಐವತ್ತರ ದಶಕದತ್ತ ನೋಡುಗರನ್ನು ಕರೆದೊಯ್ಯಲಿದೆ.

'ಇದೊಂದು ಎನರ್ಜಿ ತುಂಬಿರುವಂಥ ಗೀತೆ. ಜತೆಗೆ ಎಮೋಷನಲ್‌ ಫೀಲ್‌ಯಿದೆ. ಎರಡನ್ನೂ ಬೆರೆಸಿಕೊಂಡು ಇಮ್ರಾನ್‌ ಸರ್ದಾರಿಯಾ ಕೊರಿಯೋಗ್ರಫಿ ಮಾಡಿದ್ದಾರೆ. ಜಗ್ಗೇಶ್‌ ಮತ್ತು ಪ್ರಮೋದ್‌ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಒಂದೊಂದು ಸ್ಟೆಲ್‌ ಕೂಡ ಯೂನಿಕ್‌ ಆಗಿವೆ' ಎನ್ನುವುದು ನಿರ್ದೇಶಕ ರಮೇಶ್‌ ಇಂದಿರಾ ಮಾತು.

ಕಥೆಯಷ್ಟೇ ಹಾಡಿಗೂ ಅಷ್ಟೇ ಮಹತ್ವ ನೀಡಿದ್ದಾರಂತೆ ನಿರ್ದೇಶಕರು. ಪ್ರಿಮಿಯರ್‌ ಪದ್ಮಿನಿಯ ಒಂದೊಂದು ಹಾಡೂ ಕೂಡ ಚಿತ್ರಕಥೆಯಷ್ಟೇ ಪವರ್‌ಫುಲ್‌ ಆಗಿವೆ. ಪ್ರತಿ ಹಾಡಿಗೂ ಥೀಮ್‌ ಮಾಡಿಕೊಂಡು ಶೂಟ್‌ ಮಾಡಲಾಗಿದೆ.

ಬದುಕಿನ ನಾನಾ ಮಜಲುಗಳನ್ನು ಹೇಳುವ ಸಿನಿಮಾ ಇದಾಗಿದ್ದು, ಜಗ್ಗೇಶ್‌ ವಿಭಿನ್ನ ಪಾತ್ರ ಮಾಡಿದ್ದಾರೆ. ಎರಡು ತಲೆಮಾರಿನ ಕಥೆ ಕೂಡ ಚಿತ್ರದಲ್ಲಿದ್ದು, ನೋಡುಗರಿಗೆ ಹೊಸ ಅನುಭವ ನೀಡುವ ಚಿತ್ರ ಇದಾಗಿದೆ.

ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಗೀತೆಯಿದೆ. ಮನಸ್ಸಿಗೆ ತಟ್ಟುವಂಥ ಪದಗಳನ್ನು ಬಳಸಿ ಸಾಹಿತ್ಯ ಬರೆದಿದ್ದಾರೆ ಯೋಗರಾಜ್‌ ಭಟ್‌. ತುಂಬಾ ವರ್ಷಗಳ ನಂತರ ಜಗ್ಗೇಶ್‌ ಇಂಥದ್ದೊಂದು ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ- ಶ್ರುತಿ ನಾಯ್ಡು, ನಿರ್ದೇಶಕಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌