ಪಡ್ಡೆಹುಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಈಗ ಎರಡನೇ ಇನ್ನಿಂಗ್ಸ್ಗೆ ಸಜ್ಜಾಗಿದ್ದಾರೆ. ಮಲಯಾಳಂನ ವಿಕೆ ಪ್ರಕಾಶ್ ನಿರ್ದೇಶನದಲ್ಲಿ ಶ್ರೇಯಸ್ ಮಂಜು ಮುಂಬರುವ ಚಿತ್ರವು ಮೂಡಿಬರಲಿದೆ. ಇದೀಗ ಬಂದ ಸುದ್ದಿ ಏನೆಂದರೆ ಈ ಚಿತ್ರಕ್ಕೆ ನಾಯಕಿಯಾಗಿ ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಆಯ್ಕೆಯಾಗಿರುವುದನ್ನು ಕೆ ಮಂಜು ಖಚಿತಪಡಿಸಿದ್ದಾರೆ.
ಇದನ್ನು ಸ್ವತಃ ಕೆ ಮಂಜು ಅವರು ವಾಯ್ಸ್ ಮೆಸೇಜ್ ಕಳುಹಿಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ನಲ್ಲಿ ಶುರುವಾಗಲಿದೆ ಎನ್ನಲಾಗಿದೆ. ಕೆ ಮಂಜು ಹಾಗೂ ಶ್ರೇಯಸ್ ಇಬ್ಬರೂ ಕನ್ನಡದ 'ಸಾಹಸಸಿಂಹ' ಖ್ಯಾತಿಯ ವಿಷ್ಣುವರ್ಧನ್ ಅಭಿಮಾನಿಗಳು ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿ.
ಪಡ್ಡೆಹುಲಿ ಚಿತ್ರವನ್ನು ಕನ್ನಡದ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶಿಸಿದ್ದರು. ಇದೀಗ ಕೆ ಮಂಜು ಮಗ ಶ್ರೇಯಸ್ ಚಿತ್ರವನ್ನು ಮಲಯಾಳಂ ನಿರ್ದೇಶಕರು ಮಾಡಲಿದ್ದಾರೆ. ಈ ಚಿತ್ರಕ್ಕೆ 'ವಿಷ್ಣುಪ್ರಿಯ' ಎಂಬ ಹೆಸರು ಇಡಲಾಗಿದೆ. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಬುದು ವಿಶೇಷ.
ಮಲೆಯಾಳಂ ಮೂಲದ ಈ ನಿರ್ದೇಶಕರು ಈಗಾಗಲೇ 25ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರು, ಸಾವಿರಾರು ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶ್ರೇಯಸ್ ಲವರ್ಬಾಯ್ ರೀತಿಯ ಪಾತ್ರ ಮಾಡುತ್ತಿದ್ದಾರೆ. ಈ ಹೊತ್ತಿನ ಟ್ರೆಂಡನ್ಗೆ ತಕ್ಕಂತೆ ಸಿನಿಮಾ ಮೂಡಿ ಬರಲಿದೆಯಂತೆ.
ಇದನ್ನು ಸ್ವತಃ ಕೆ ಮಂಜು ಅವರು ವಾಯ್ಸ್ ಮೆಸೇಜ್ ಕಳುಹಿಸಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ನಲ್ಲಿ ಶುರುವಾಗಲಿದೆ ಎನ್ನಲಾಗಿದೆ. ಕೆ ಮಂಜು ಹಾಗೂ ಶ್ರೇಯಸ್ ಇಬ್ಬರೂ ಕನ್ನಡದ 'ಸಾಹಸಸಿಂಹ' ಖ್ಯಾತಿಯ ವಿಷ್ಣುವರ್ಧನ್ ಅಭಿಮಾನಿಗಳು ಎಂಬುದು ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿ.
ಪಡ್ಡೆಹುಲಿ ಚಿತ್ರವನ್ನು ಕನ್ನಡದ ನಿರ್ದೇಶಕ ಗುರು ದೇಶಪಾಂಡೆ ನಿರ್ದೇಶಿಸಿದ್ದರು. ಇದೀಗ ಕೆ ಮಂಜು ಮಗ ಶ್ರೇಯಸ್ ಚಿತ್ರವನ್ನು ಮಲಯಾಳಂ ನಿರ್ದೇಶಕರು ಮಾಡಲಿದ್ದಾರೆ. ಈ ಚಿತ್ರಕ್ಕೆ 'ವಿಷ್ಣುಪ್ರಿಯ' ಎಂಬ ಹೆಸರು ಇಡಲಾಗಿದೆ. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಬುದು ವಿಶೇಷ.
ಮಲೆಯಾಳಂ ಮೂಲದ ಈ ನಿರ್ದೇಶಕರು ಈಗಾಗಲೇ 25ಕ್ಕೂ ಹೆಚ್ಚು ಚಿತ್ರಗಳಿಗೆ ಆ್ಯಕ್ಷನ್ ಕಟ್ ಹೇಳಿರುವ ಇವರು, ಸಾವಿರಾರು ಜಾಹೀರಾತು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಶ್ರೇಯಸ್ ಲವರ್ಬಾಯ್ ರೀತಿಯ ಪಾತ್ರ ಮಾಡುತ್ತಿದ್ದಾರೆ. ಈ ಹೊತ್ತಿನ ಟ್ರೆಂಡನ್ಗೆ ತಕ್ಕಂತೆ ಸಿನಿಮಾ ಮೂಡಿ ಬರಲಿದೆಯಂತೆ.