ಆ್ಯಪ್ನಗರ

ತೆಲುಗು, ತಮಿಳು ಚಿತ್ರರಂಗದ ಗಮನಸೆಳೆದಿರುವ 'ನನ್ನ ಪ್ರಕಾರ'

ಇದೇ ಆ.23ರಂದು 'ನನ್ನ ಪ್ರಕಾರ' ಚಿತ್ರ ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ದರ್ಶನ್‌ ಸೇರಿದಂತೆ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಟ್ರೇಲರ್‌ ಮೆಚ್ಚಿಕೊಂಡು ಮಾತನಾಡಿದ್ದಾರೆ. ಹಾಡುಗಳಿಗೂ ಈಗ ಉತ್ತಮ ರೆಸ್ಪಾನ್ಸ್‌ ಸಿಕ್ಕಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಸಂಭ್ರಮ ತಂದಿದೆ.

Vijaya Karnataka 22 Aug 2019, 12:15 pm
* ಶರಣು ಹುಲ್ಲೂರು
Vijaya Karnataka Web kishore


ಬಾಲಿವುಡ್‌ನ ನಟ ಶಾರೂಖ್‌ ಖಾನ್‌ ಅವರ ಕಂಪನಿಯಲ್ಲಿ ಕೆಲ ಸಮಯ ವಿಎಫ್‌ಎಕ್ಸ್‌ ಕಲಾವಿದನಾಗಿ ಕೆಲಸ ಮಾಡಿದ್ದ ವಿನಯ್‌ ಬಾಲಾಜಿ, ಸದ್ಯ 'ನನ್ನ ಪ್ರಕಾರ' ಚಿತ್ರವನ್ನು ನಿರ್ದೇಶಿಸಿದ್ದು, ಈ ಚಿತ್ರದಲ್ಲಿ ದಕ್ಷಿಣ ಭಾರತದ ಹೆಸರಾಂತ ಕಲಾವಿದರು ನಟಿಸಿದ್ದಾರೆ. ಈ ಎಲ್ಲ ತಾರೆಯರು ತಮ್ಮ ಕಥೆಯನ್ನೇ ಮೆಚ್ಚಿಕೊಂಡು ನಟಿಸಿದ್ದಾರೆಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

'ನನ್ನ ಪ್ರಕಾರ ಚಿತ್ರದ ಕಥೆಯನ್ನು ನಾನು ಮೊದಲು ಯೋಚನೆ ಮಾಡಿದ್ದು, ಕಿರುಚಿತ್ರ ಮಾಡೋಣ ಅಂತ. ಕಥೆ ಬರೆಯುತ್ತಾ ಹೋದಂತೆ ದೊಡ್ಡ ಸಿನಿಮಾವಾಗಿಯೇ ಬದಲಾಯಿತು. ಈ ಸ್ಟೋರಿಯನ್ನು ಸಮರ್ಥವಾಗಿ ಪ್ರೇಕ್ಷಕರಿಗೆ ದಾಟಿಸಲು ಪ್ರತಿಭಾವಂತ ಕಲಾವಿದರು ಬೇಕು. ಆದರೆ, ನಾನು ನಿರ್ದೇಶಕನಾಗಿ ಹೊಸಬ. ಧೈರ್ಯದಿಂದ ಪ್ರಿಯಾಮಣಿ, ಕಿಶೋರ್‌, ಮಯೂರಿ ಸೇರಿ ಕೆಲ ಕಲಾವಿದರಿಗೆ ಕಥೆ ಹೇಳಿದೆ. ಕಂಟೆಂಟ್‌ ಕೇಳಿ ನನಗೇ ಅವರು ಧೈರ್ಯ ತುಂಬಿದರು. ತಪ್ಪದೇ ಈ ಸಿನಿಮಾ ಮಾಡು ಎಂದು ಪ್ರೋತ್ಸಾಹಿಸಿದರು. ಅವರ ಸಹಕಾರವೇ ಈ ಸಿನಿಮಾ ಮಾಡಲು ಸಾಧ್ಯವಾಯಿತು' ಎನ್ನುತ್ತಾರೆ ಬಾಲಾಜಿ.
ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ಪ್ರಿಯಾಮಣಿ ವಿಡಿಯೊ

'ಪ್ರಿಯಾಮಣಿ ಮತ್ತು ಕಿಶೋರ್‌ ದಕ್ಷಿಣ ಭಾರತದ ಬಹುತೇಕ ಸಿನಿಮಾಗಳಲ್ಲಿನಟಿಸಿದವರು. ಅಲ್ಲಿ ಅವರದ್ದೇ ಆದ ಅಭಿಮಾನಿ ವರ್ಗವಿದೆ. ನನ್ನ ಪ್ರಕಾರ ಚಿತ್ರದ ಟ್ರೇಲರ್‌ ರಿಲೀಸ್‌ ಆದಾಗ ಅವರೆಲ್ಲರೂ ನಮ್ಮದೇ ಸಿನಿಮಾ ಎನ್ನುವಂತೆ ಒಪ್ಪಿಕೊಂಡರು. ಅದರಿಂದಾಗಿ ತಮಿಳು, ತೆಲುಗು ಮತ್ತು ಮಲೆಯಾಳಂನಲ್ಲೂ ನಮ್ಮ ಸಿನಿಮಾದ ಬಗ್ಗೆ ಸುದ್ದಿಯಾಯಿತು. ರೀಮೇಕ್‌ ಹಕ್ಕುಗಳಿಗೆ ಬೇಡಿಕೆ ಬಂತು. ಈಗ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡುವುದಕ್ಕೆ ಕಾರಣ ತಾರಾಬಳಗ' ಎಂದಿದ್ದಾರೆ ಅವರು.

ವಿಎಫ್‌ಎಕ್ಸ್‌ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಿನಯ್‌ಗೆ, ಮುಂದಿನ ತಮ್ಮ ಸಿನಿಮಾದಲ್ಲಿ ಗ್ರಾಫಿಕ್ಸ್‌ ಅನ್ನು ಹೆಚ್ಚು ಬಳಕೆ ಮಾಡುವ ಉದ್ದೇಶವಿದೆ. ಈ ಸಿನಿಮಾದಲ್ಲಿಅದು ಸಾಧ್ಯವಾಗದೇ ಇದ್ದರೂ, ತಮ್ಮದೇ ಕೈಚಳಕವನ್ನು ತೋರಿಸಿದ್ದಾರೆ. ಅದು ಏನು ಅನ್ನುವುದನ್ನು ಸಿನಿಮಾದಲ್ಲಿ ನೋಡಿ ಎನ್ನುತ್ತಾರೆ.

ಸಿನಿಮಾದ ಕಂಟೆಂಟ್‌ ಕೇಳಿದ ಪ್ರಿಯಾಮಣಿ, ಕಿಶೋರ್‌ ಮತ್ತು ಇತರ ಕಲಾವಿದರು ಸಿನಿಮಾ ಮಾಡುವುದಾಗಿ ಒಪ್ಪಿಕೊಂಡರು. ಇದು ಹೊಸ ನಿರ್ದೇಶಕನಿಗೆ ಸಿಕ್ಕ ದೊಡ್ಡ ಸಹಕಾರ ಎಂದು ಭಾವಿಸುವೆ.

-ವಿನಯ್‌ ಬಾಲಾಜಿ, ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌