ಆ್ಯಪ್ನಗರ

ಸದ್ಯಕ್ಕೆ ರಾಜಕೀಯಕ್ಕೆ ಬರಲಾರೆ: ಪ್ರಿಯಾಂಕಾ ಉಪೇಂದ್ರ

ಪ್ರಿಯಾಂಕಾ ಉಪೇಂದ್ರ ಅವರು ತಾವೊಬ್ಬ ನಟಿ ಮಾತ್ರವಲ್ಲ, ಕಲಾವಿದೆ ಕೂಡ ಎಂದಿದ್ದಾರೆ. ನಾಯಕಿ ಪ್ರಧಾನ ಚಿತ್ರಗಳಷ್ಟೇ ನನ್ನ ಗುರಿಯಲ್ಲ. ಬಗೆಬಗೆಯ ಪಾತ್ರಗಳನ್ನು ನಿರ್ವಹಿಸುವುದರ ಮೂಲಕ ನಾನೊಬ್ಬಳು ಕಲಾವಿದೆಯಾಗಿ ಉಳಿಯಲು ನಿರ್ಧರಿಸಿದ್ದೇನೆ. ಸಿಕ್ಕ ಸಿಕ್ಕ ಚಿತ್ರಗಳಲ್ಲಿ ಕ್ಯಾಮೆರಾ ಮುಂದೆ ಸುತ್ತಲು ಈಗ ನನಗಿಷ್ಟವಿಲ್ಲ" ಎಂದು ಹೇಳಿದ್ದಾರೆ.

Vijaya Karnataka Web 21 Feb 2019, 9:04 am
ನಟಿ ಹಾಗೂ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಸಾಕಷ್ಟು ಬ್ಯುಸಿ ಇದ್ದಾರೆ. ಸದ್ಯ ಪ್ರಿಯಾಂಕಾ ಅವರು ಲೋಹಿತ್ ಹೌರಾ ನಿರ್ದೇಶನದ 'ಬ್ರಿಡ್ಜ್' ಸಿನಿಮಾ ನಟನೆಯಲ್ಲಿ ತೊಡಗಿಕೊಂಡಿದ್ದು ಇನ್ನೂ ಅನೇಕ ಚಿತ್ರಗಳ ಆಫರ್ ಅವರ ಕೈಯಲ್ಲಿದೆ. ಬ್ರಿಡ್ಜ್ ಸಿನಿಮಾದಲ್ಲಿ ಪ್ರಿಯಾಂಕಾ ಪುತ್ರಿ ಐಶ್ವರ್ಯಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಚಿತ್ರವು ಬರುವ ಏಪ್ರಿಲ್ 2019ರಲ್ಲಿ ಬಿಡುಗಡೆಯಾಗಲಿದೆ. ಇದೊಂದು 'ಸೈಕಾಲಾಜಿಕಲ್ ಥ್ರಿಲ್ಲರ್' ಝೋನರ್‌ಗೆ ಸೇರಿದ ಸಿನಿಮಾ ಆಗಿದ್ದು ಒಂದೂವರೆ ವರ್ಷದಿಂದ ಈ ಚಿತ್ರಕ್ಕೆ ಶೂಟಿಂಗ್ ನಡೆಯುತ್ತಿದೆ.
Vijaya Karnataka Web priyanka-upendra


ಈಗಾಗಲೇ ಪ್ರಿಯಾಂಕಾ ಉಪೇಂದ್ರ ಅವರು ತಮಿಳು ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲೂ ಅವರಿಗೆ ಸಾಕಷ್ಟು ಸಿನಿಮಾಗಳ ಆಫರ್ ಬರುತ್ತಿದೆಯಂತೆ. ಜೊತೆಗೆ, ಮಮ್ಮಿ-2 ಚಿತ್ರವನ್ನೂ ಸಹ ಕೈಗೆತ್ತಿಕೊಳ್ಳಲಿದ್ದಾರಂತೆ. ಅದರೆ, ಮಮ್ಮಿ-2 ಚಿತ್ರವು ಯಾವಾಗ ಪ್ರಾರಂಭ ಎನ್ನುವುದನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ ಪ್ರಿಯಾಂಕಾ. ಅಷ್ಟೇ ಅಲ್ಲ, "ನಾನು ಕೇವಲ ಸಂಖ್ಯೆಗಳ ಮೂಲಕ ಅಥವಾ ಚಿತ್ರಗಳ ಹೆಸರಿನ ಮೂಲಕ ಡಿಕ್ಷನರಿಯ ಜಾಗವನ್ನು ತುಂಬಿಕೊಳ್ಳುವುದು ನನಗಿಷ್ಟವಿಲ್ಲ" ಎಂದಿದ್ದಾರೆ ಪ್ರಿಯಾಂಕಾ ಉಪೇಂದ್ರ.

ಪ್ರಿಯಾಂಕಾ ಉಪೇಂದ್ರ ಅವರು ತಾವೊಬ್ಬ ನಟಿ ಮಾತ್ರವಲ್ಲ, ಕಲಾವಿದೆ ಕೂಡ ಎಂದಿದ್ದಾರೆ. ನಾಯಕಿ ಪ್ರಧಾನ ಚಿತ್ರಗಳಷ್ಟೇ ನನ್ನ ಗುರಿಯಲ್ಲ. ಬಗೆಬಗೆಯ ಪಾತ್ರಗಳನ್ನು ನಿರ್ವಹಿಸುವುದರ ಮೂಲಕ ನಾನೊಬ್ಬಳು ಕಲಾವಿದೆಯಾಗಿ ಉಳಿಯಲು ನಿರ್ಧರಿಸಿದ್ದೇನೆ. ಸಿಕ್ಕ ಸಿಕ್ಕ ಚಿತ್ರಗಳಲ್ಲಿ ಕ್ಯಾಮೆರಾ ಮುಂದೆ ಸುತ್ತಲು ಈಗ ನನಗಿಷ್ಟವಿಲ್ಲ" ಎಂದು ಹೇಳಿ ತಾವು ಈಗ 'ಚ್ಯೂಸಿ' ಎಂದು ಪ್ರಿಯಾಂಕಾ ಸ್ಪಷ್ಟಪಡಿಸಿದ್ದಾರೆ.

ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟ ಪಡಿಸಿರುವ ಪ್ರಿಯಾಂಕಾ ಅವರು "ನನ್ನ ಗಂಡ ಉಪೇಂದ್ರ ಅವರು ರಾಜಕೀಯಕ್ಕೆ ಕಾಲಿಟ್ಟಿದ್ದಾರೆ ನಿಜ. ಆದರೆ, ನನಗೆ ಈಗಲೇ ರಾಜಕೀಯ ಪ್ರವೇಶಿಸುವ ಉದ್ದೇಶವೇನೂ ಇಲ್ಲ. ಯಾಕೆಂದರೆ, ನಾನು ರಾಜಕೀಯವಾಗಿ ಯೋಚಿಸುವಷ್ಟು ಇನ್ನೂ ಪ್ರಬುದ್ಧವಾಗಿಲ್ಲ. ನಾನಿನ್ನೂ ತಿಳಿದುಕೊಳ್ಳಬೇಕಿರುವುದು ತುಂಬಾ ಇದೆ. ನನಗೆ ಸಮಯ ಬೇಕು. ಈಗಲೇ ಅರೆಬೆಂದ ರಾಜಕೀಯ ಮಾಡಲು ನನಗೆ ಆತುರವೇನಿಲ್ಲ. ಸದ್ಯಕ್ಕೆ ನಾನು ಅವರಿಗೆ ಅಗತ್ಯವಿರುವ ನೈತಿಕ ಬೆಂಬಲ ನೀಡುತ್ತೇನೆ ಅಷ್ಟೇ" ಎಂದು ಹೇಳುವ ಮೂಲಕ ಪ್ರಿಯಾಂಕಾ ಉಪೇಂದ್ರ ಅವರು ಸದ್ಯಕ್ಕೆ ತಾವು ರಾಜಕೀಯಕ್ಕೆ ಎಂಟ್ರಿ ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌