ಆ್ಯಪ್ನಗರ

ಬಹುಕೋಟಿ ವೆಚ್ಚದ ಅದ್ದೂರಿ 'ಕುರುಕ್ಷೇತ್ರ'ದ ಸೀಕ್ರೆಟ್ ಬಿಚ್ಚಿಟ್ಟ ಮುನಿರತ್ನ!

"ಐದು ಭಾಷೆಯ ಪ್ರಿಂಟ್ 3ಡಿ ವ್ಯವಸ್ಥೆಯಲ್ಲಿ ಸಿದ್ಧವಾಗಿ ನನ್ನ ಕೈ ಸೇರಿದ ಬಳಿಕವಷ್ಟೇ ನಾನು ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದ್ಧೇನೆ" ಎಂದಿದ್ದಾರೆ ಕುರುಕ್ಷೇತ್ರ ನಿರ್ಮಾಪಕರಾದ ಮುನಿರತ್ನ. ಒಟ್ಟಿನಲ್ಲಿ, ಕನ್ನಡದಲ್ಲಿ ಬಹುಕೋಟಿ ವೆಚ್ಚದಲ್ಲಿ ಉದ್ದೂರಿಯಾಗಿ ನಿರ್ಮಿಸಿರುವ ಕುರುಕ್ಷೇತ್ರ ಚಿತ್ರವು ತೀರಾ ತಡವಾಗದೇ ತೆರೆಗೆ ಬರಲಿದೆ.

Vijaya Karnataka Web 3 May 2019, 6:31 pm
ಕನ್ನಡ ಚಿತ್ರರಂಗದಲ್ಲಿ ಭಾರಿ ಬಜೆಟ್ ಮೂಲಕ ಸೌಂಡ್ ಮಾಡುತ್ತಿರುವ ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರವು ಇದೀಗ ಸಖತ್ ಸುದ್ದಿ ಮಾಡತೊಡಗಿದೆ. ಐದು ಭಾಷೆಗಳಲ್ಲಿ 'ದರ್ಶನ್ ನಾಯಕತ್ವ'ದ ಕುರುಕ್ಷೇತ್ರ ತೆರೆಕಾಣುತ್ತಿದ್ದು, ಹಿಂದಿ ಡಬ್ಬಿಂಗ್ ಹಕ್ಕು ದಾಖಲೆ ಮೊತ್ತಕ್ಕೆ ಸೇಲ್ ಆಗಿದೆ ಎಂದು ಸ್ವತಃ ಮುನಿರತ್ನ ಬಹಿರಂಗಪಡಿಸಿದ್ದಾರೆ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಎಂದು ಹೇಳುತ್ತಿರುವ ಮುನಿರತ್ನ ಸಿನಿಮಾದ ಬಗ್ಗೆ ಸಾಕಷ್ಟು ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
Vijaya Karnataka Web munirathna03-2


"ಪ್ರಪಂಚಾದ್ಯಂತ ಐದು ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಸಿನಿಮಾ ತೆರೆಕಾಣಲಿದ್ದು, ಎಲ್ಲ ಭಾಷೆಯಲ್ಲೂ 3ಡಿ ರೂಪದಲ್ಲಿ ಬರಲಿದೆ. ಈಗಾಗಲೇ ನಾಲ್ಕು ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಸಿದ್ಧವಾಗಿದೆ. ಕನ್ನಡ ವರ್ಷನ್ ಸೆನ್ಸಾರ್ ಕೂಡ ಆಗಿದೆ. ಉಳಿದ ಮೂರು ಭಾಷೆಗಳ ಚಿತ್ರಗಳು ಮುಂದಿನ ವಾರ ಸೆನ್ಸಾರ್ ಟೇಬಲ್‌ಗೆ ಹೋಗಲಿದೆ. ಹಿಂದಿ ವರ್ಷನ್ ಹದಿನೈದು ದಿನದಲ್ಲಿ ಮುಗಿಯಲಿದೆ. ಅಮೇರಿಕಾ ಒಂದರಲ್ಲೇ ಐದೂ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಮಾಡುವ ಪ್ಲಾನ್ ಮಾಡಲಾಗಿದೆ"

ನಿರ್ಮಾಪಕ ಮುನಿರತ್ನ ಹೇಳಿರುವ ಪ್ರಕಾರ, ಕುರುಕ್ಷೇತ್ರ ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಬರೋಬ್ಬರಿ 9.5 ಕೋಟಿ ರೂ.ಗೆ ಸೇಲ್ ಆಗಿದೆ. ಇಲ್ಲಿ ಗಮನಿಸಬೇಕಾದ ಸಮಗತಿ ಎಂದರೆ, ಕುರುಕ್ಷೇತ್ರ ಚಿತ್ರದ ಕೇವಲ ಟಿವಿ ಹಕ್ಕು ಮಾತ್ರ ಮಾರಾಟವಾಗಿದೆ. ಡಿಸ್ಟ್ರಿಬ್ಯೂಷನ್ (ಥಿಯೇಟರ್) ಸೇಲ್ ಮಾಡಿಲ್ಲ. ಯಾವುದೇ ಭಾಷೆಯ ಓವರ್ ಸೀಸ್ ಹಕ್ಕನ್ನು ಕೂಡ ಮಾರಾಟ ಮಾಡಿಲ್ಲ ಎಂಬ ಮಾಹಿತಿ ಬಂದಿದೆ.

"ಐದು ಭಾಷೆಯ ಪ್ರಿಂಟ್ 3ಡಿ ವ್ಯವಸ್ಥೆಯಲ್ಲಿ ಸಿದ್ಧವಾಗಿ ನನ್ನ ಕೈ ಸೇರಿದ ಬಳಿಕವಷ್ಟೇ ನಾನು ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದ್ಧೇನೆ" ಎಂದಿದ್ದಾರೆ ಕುರುಕ್ಷೇತ್ರ ನಿರ್ಮಾಪಕರಾದ ಮುನಿರತ್ನ. ಒಟ್ಟಿನಲ್ಲಿ, ಕನ್ನಡದಲ್ಲಿ ಬಹುಕೋಟಿ ವೆಚ್ಚದಲ್ಲಿ ಉದ್ದೂರಿಯಾಗಿ ನಿರ್ಮಿಸಿರುವ ಕುರುಕ್ಷೇತ್ರ ಚಿತ್ರವು ತೀರಾ ತಡವಾಗದೇ ತೆರೆಗೆ ಬರಲಿದೆ. ಕುರುಕ್ಷೇತ್ರ ಸಿನಿಮಾವನ್ನ ನಾಗಣ್ಣ, ನಾಗೇಂದ್ರ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ದರ್ಶನ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ, ಅಂಬರೀಶ್, ಅರ್ಜುನ್ ಸರ್ಜಾ, ಸೋನು ಸೂದ್, ಮೇಘನಾ ರಾಜ್, ಯಶಸ್, ಚಂದನ್, ಸೃಜನ್ ಲೋಕೇಶ್ ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌