ಆ್ಯಪ್ನಗರ

'ಚಕ್ರವರ್ತಿ' ಚೆನ್ನಾಗಿಲ್ಲ ಎನ್ನುವುದು ಮೂರ್ಖತನ ಮಾತು

ಈ ಚಿತ್ರದ ಬಗ್ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ದರ್ಶನ್ ಜತೆಗೆ 'ಮಿ. ಐರಾವತ' ಚಿತ್ರ ನಿರ್ಮಿಸಿದ್ದ ಸಂದೇಶ್ ನಾಗರಾಜ್ ತಮ್ಮ ಫೇಸ್‍ಬುಕ್‌ ಖಾತೆಯಲ್ಲಿ ಚಿತ್ರದ ಬಗ್ಗೆ ಒಂದೆರಡು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

Vijaya Karnataka Web 18 Apr 2017, 6:17 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಚಕ್ರವರ್ತಿ' ಸಿನಿಮಾ ಯಶಸ್ವಿ ಎರಡನೇ ವಾರಕ್ಕೆ ಅಡಿಯಿಟ್ಟಿದೆ. 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದ ಬಜೆಟ್‌ಗಿಂತಲೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಸಿನಿಮಾ ಇದು ಎಂದು ಸ್ವತಃ ದರ್ಶನ್ ಫೇಸ್‌ಬುಕ್ ಲೈವ್‌ನಲ್ಲಿ ತಿಳಿಸಿದ್ದರು.
Vijaya Karnataka Web producer sandesh nagaraj lauds chakravarthy movie
'ಚಕ್ರವರ್ತಿ' ಚೆನ್ನಾಗಿಲ್ಲ ಎನ್ನುವುದು ಮೂರ್ಖತನ ಮಾತು


ಈ ಚಿತ್ರದ ಬಗ್ಗೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದೀಗ ದರ್ಶನ್ ಜತೆಗೆ 'ಮಿ. ಐರಾವತ' ಚಿತ್ರ ನಿರ್ಮಿಸಿದ್ದ ಸಂದೇಶ್ ನಾಗರಾಜ್ ತಮ್ಮ ಫೇಸ್‍ಬುಕ್‌ ಖಾತೆಯಲ್ಲಿ ಚಿತ್ರದ ಬಗ್ಗೆ ಒಂದೆರಡು ಮೆಚ್ಚುಗೆ ಮಾತುಗಳನ್ನಾಡಿದ್ದಾರೆ.

'ಚಕ್ರವರ್ತಿಯಂತ ಚಿತ್ರ ಮಾಡುವುದು ತುಂಬಾ ಕಷ್ಟಯಿದೆ. 80 ರದಶಕದ ಕಾಲಘಟ್ಟದ ಸ್ಥಳ. ಬಟ್ಟೆ. ಮಾತುಕತೆ...ಹೀಗೆ ಹಲವು ರೀತಿಯಲ್ಲಿ ಕೆಲಸ ಮಾಡಬೇಕು. ಒಂದು ಬಾರಿ ಸಿನಿಮಾ ನೋಡಿ ಇಂತಹ ಸಿನಿಮಾಗಳನ್ನ ಚೆನ್ನಾಗಿದೆ. ಚೆನ್ನಾಗಿಲ್ಲ ಅನ್ನೋದು ಮುರ್ಖತನದ ಮಾತು. ಇಲ್ಲಿ ಅಭಿಮಾನಿಗಳಿಗೆ ಮಜಾ ನೀಡುತ್ತಿಲ್ಲ ಎನ್ನುವುದನ್ನ ಬಿಟ್ಟರೆ ಚಿತ್ರ ನಿಜವಾಗಲೂ ಚೆನ್ನಾಗಿದೆ. ಒಂದು ಘರ್ಷಣೆ ಇದೆ ಅಂದಿನ ಪರಿಸ್ಥಿತಿಯ ಉಲ್ಲೇಖವಿದೆ ಇದು ಒಂದು ಒಳ್ಳೆಯ ಪ್ರಯತ್ನ' ಎಂದಿದ್ದಾರೆ.

ಚಕ್ರವರ್ತಿ ಚಿತ್ರದ ಬಗ್ಗೆ ನಿರ್ಮಾಪಕರೊಬ್ಬರಿಂದ ಮೆಚ್ಚುಗೆ ಮಾತುಗಳು ಕೇಳಿಬಂದಿರುವುದು ಚಿತ್ರೋದ್ಯಮದಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಎಂ.ವಿ.ಚಿಂತನ್ ನಿರ್ದೇಶನದ ಈ ಚಿತ್ರವನ್ನು ಸಿದ್ಧಾಂತ್ ನಿರ್ಮಿಸಿದ್ದಾರೆ. ಕ್ರೈಮ್ ಹಾಗೂ ಬ್ರೈನ್ ಸೇರಿಕೊಂಡಿರುವ ಕಥಾಹಂದರ ಸಿನಿಮಾದಲ್ಲಿದೆ. ಎಂಬತ್ತರ ದಶಕದ ಈ ಸಿನಿಮಾದಲ್ಲಿ ದರ್ಶನ್‌ಗೆ ನಾಯಕಿ ದೀಪಾ ಸನ್ನಿಧಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌