ಆ್ಯಪ್ನಗರ

ಕೇರಳದ ನಿರಾಶ್ರಿತರಿಗೆ ಪುನೀತ್‌ ಧನ ಸಹಾಯ

ಆಕಾಶ ಕಳಚಿಬಿದ್ದಂತೆ ಸುರಿಯುತ್ತಿರುವ ಮಳೆಗೆ ಕೇರಳದಲ್ಲಿ ಪ್ರವಾಹ ಸಂಭವಿಸಿದ್ದು, ಇಲ್ಲಿನ ನೆರೆ ಸಂತ್ರಸ್ತರಿಗಾಗಿ ನಟ ಪುನೀತ್‌ ರಾಜ್‌ಕುಮಾರ್‌ 5 ಲಕ್ಷ ರೂಪಾಯಿಗಳನ್ನು ನೀಡಿದ್ದಾರೆ.

Vijaya Karnataka 17 Aug 2018, 11:37 am
ದೇಶದಾದ್ಯಂತ ಹಲವು ರಾಜ್ಯಗಳು ಮಳೆಗೆ ತತ್ತರಿಸಿವೆ. ಕೇರಳದಲ್ಲಿ ಜನರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮನೆ ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿದ್ದಾರೆ. ಸ್ಯಾಂಡಲ್‌ವುಡ್‌ ನಟ ಇವರಿಗಾಗಿ ಸಹಾಯ ಹಸ್ತ ಚಾಚಿದ್ದಾರೆ. ತೊಂದರೆಯಲ್ಲಿರುವವರಿಗಾಗಿ ಕೇರಳ ಸಿ.ಎಂ. ನಿಧಿಗೆ 5 ಲಕ್ಷ ರೂಪಾಯಿಯನ್ನು ನೀಡಿದ್ದಾರೆಂದು ಗೊತ್ತಾಗಿದೆ. ಅಲ್ಲದೆ, ಈಗ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಡುತ್ತಿರುವ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್‌ ಒಂದು ಲಕ್ಷ ನೀಡಿದ್ದಾರೆ. ಮಾಲಿವುಡ್‌ನ ನಟರಾದ ಮಮ್ಮುಟ್ಟಿ 15 ಲಕ್ಷ, ದುಲ್ಕರ್‌ ಸಲ್ಮಾನ್‌ 10 ಲಕ್ಷ, ಮೋಹನ್‌ ಲಾಲ್‌ 25 ಲಕ್ಷ ನೀಡಿದ್ದಾರೆ.
Vijaya Karnataka Web puneeth-rajkumar


ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು ನೆರೆ ರಾಜ್ಯಗಳು ಸಹಾಯ ನೀಡಲು ಮುಂದಾಗಿವೆ. ಪುನೀತ್‌ರಂತೆಯೇ ಪರಭಾಷಾ ನಟರು ಅನೇಕರು ಸಿ.ಎಂ ನಿಧಿಗೆ ಧನ ಸಹಾಯ ಮಾಡಿದ್ದಾರೆ. ತೆಲುಗು ನಟರಾದ ಅಲ್ಲು ಅರ್ಜುನ್‌ 25 ಲಕ್ಷ, ವಿಜಯ್‌ ದೇವರಕೊಂಡ 5 ಲಕ್ಷ ನೀಡಿದ್ದಾರೆ. ನಟ ಕಮಲ್‌ ಹಾಸನ್‌ 25 ಲಕ್ಷ ನೀಡಿದ್ದಾರೆ. ಕಾಲಿವುಡ್‌ನ ಜನಪ್ರಿಯ ನಟರಾದ ಸೂರ್ಯ ಮತ್ತು ಕಾರ್ತಿ ತಲಾ 25 ಲಕ್ಷ ನೀಡಿದ್ದಾರೆ.

ನಟರು ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಮಲೆಯಾಳಂ ಚಿತ್ರರಂಗದ ಸಂಘಟನೆಗಳು ಕೂಡಾ ಸಿ.ಎಂ ನಿಧಿಗೆ ಹಣ ನೀಡಿವೆ. ದಿನದಿಂದ ದಿನಕ್ಕೆ ಕೇರಳದ ಪರಿಸ್ಥಿತಿ ಇನ್ನಷ್ಟು ಹಾಳಾಗುತ್ತಿದೆ. ಇಲ್ಲಿನ ಜನರು ದೊಡ್ಡ ಪ್ರಮಾಣದ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌