ಆ್ಯಪ್ನಗರ

ಸದ್ಗುರು ಜಗ್ಗಿ ವಾಸುದೇವ್‌ ಕಾವೇರಿ ಕೂಗಿಗೆ ದನಿಯಾದ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್

ಸದ್ಗುರು ಜಗ್ಗಿ ವಾಸುದೇವ್ ಮುನ್ನಡೆಸುತ್ತಿರುವ ಇಶಾ ಫೌಂಡೇಶನ್ ಹಮ್ಮಿಕೊಂಡಿರುವ ಕಾವೇರಿ ಕಾಲಿಂಗ್ ಅಭಿಯಾನಕ್ಕೆ ಇದೀಗ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸಹ ಕೈ ಜೋಡಿಸಿದ್ದಾರೆ. ಕಾವೇರಿ ತಾಯಿ ನಿನ್ನ ಮಡಿಲ ಮಗು ನಾನು.. ಹಾಡಿಗೆ ಧ್ವನಿಯಾಗಿದ್ದಾರೆ ಪುನೀತ್.

Vijaya Karnataka 27 Aug 2019, 2:11 pm

ನಟನೆಯ ಜತೆಗೆ ಹಿನ್ನೆಲೆ ಗಾಯನವನ್ನೂ ಮುಂದುವರಿಸಿರುವ ನಟ ಪುನೀತ್‌ ರಾಜ್‌ಕುಮಾರ್‌, ಇದೀಗ ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಕಾವೇರಿ ನದಿಯನ್ನು ಕುರಿತ ಹಾಡೊಂದನ್ನು ಅವರು ಹಾಡಿದ್ದು, ಆ ಹಾಡು ಯೂಟ್ಯೂಬ್‌ನಲ್ಲಿ ರಿಲೀಸ್‌ ಆಗಿದೆ.
Vijaya Karnataka Web puneeth-rajkumar


ಸದ್ಗುರು ಜಗ್ಗಿ ವಾಸುದೇವ್‌ ಅವರ ಇಶಾ ಫೌಂಡೇಶನ್‌ ನಡೆಸಿರುವ ಕಾವೇರಿ ಕಾಲಿಂಗ್‌ ಅಭಿಯಾನದ ಅಂಗವಾಗಿ ಈ ಹಾಡು ನಿರ್ಮಾಣಗೊಂಡಿದೆ. 'ಕಾವೇರಿ ತಾಯಿ ನಿನ್ನ ಮಡಿಲ ಮಗು ನಾನು, ಹಾಲು ಕೊಟ್ಟ ನಿನ್ನ ಕಡಿದು ಬಿಟ್ಟೆನು ನಾನು, ನನ್ನ ಬಾಳಿಗೂ ಮುಕ್ತಿಗೂ ಮಾರ್ಗವು ನೀನು.. ನಿನ್ನ ಮಡಿಲಲ್ಲಿ ಬೆಳೆದವನು ನಾನು..' ಹೀಗೆ ಸಾಗುವ ಹಾಡನ್ನು ಪುನೀತ್‌ ಅದ್ಭುತವಾಗಿ ಹಾಡಿದ್ದಾರೆ. ಈ ಹಾಡಿಗೆ ಸದ್ಗುರು ಜಗ್ಗಿ ವಾಸುದೇವ್‌ ಅವರು ಸಾಹಿತ್ಯ ಬರೆದಿದ್ದಾರೆ.

'ಕಾವೇರಿ ಕಾಲಿಂಗ್‌ಗಾಗಿ ನಾನು ಹಾಡಿದ್ದೇವೆ. ನಮ್ಮ ಕಾವೇರಿ ನದಿಯನ್ನು ಉಳಿಸಿಕೊಳ್ಳಲು ನಮ್ಮ ಕೈಲಾಗಿದ್ದನ್ನು ಮಾಡೋಣ' ಎಂದು ಪುನೀತ್‌ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಅಸಂಖ್ಯಾತ ಅಭಿಮಾನಿಗಳು ಫಿದಾ, ಸಾಕಷ್ಟು ಜನ ರೀ ಟ್ವೀಟ್‌ ಮಾಡಿದ್ದಾರೆ. ಕರ್ನಾಟಕದ ಯುವರತ್ನ ಅಪ್ಪು ಸರ್‌. ಅದ್ಭುತವಾದ ಸಂದೇಶ ನೀಡಿದ್ದೀರಿ. ನಾವೂ ಕೂಡ ಗಿಡ ನೆಡುತ್ತೇವೆ ಎಂದು ಅಭಿಮಾನಿಗಳು ಕಾಮೆಂಟ್‌ ಹಾಕಿದ್ದಾರೆ.
ನಾನು ನನ್ನ ಹಿಂದಿನ ಜೀವನಕ್ಕೆ ಮರಳಿದ್ದೆ: ಪುನೀತ್ ರಾಜ್‌ಕುಮಾರ್

ಈ ವಿಡಿಯೋದಲ್ಲಿ ನಟಿ ಭಾರ್ಗವಿ ನಾರಾಯಣ್‌ ಕಾಣಿಸಿಕೊಂಡಿದ್ದಾರೆ. ಜತೆಗೆ ಸದ್ಗುರು ಅವರು ಕೂಡ ಇದ್ದಾರೆ. ಕಾವೇರಿ ನದಿ ನಶಿಸಿಹೋಗುತ್ತಿರುವುದರ ಬಗ್ಗೆ ಹಾಡಿನ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌