ಆ್ಯಪ್ನಗರ

ಪುನೀತ್‌ ಕೈಗೆ ಕಟ್ಟಿದ ದಾರದಲ್ಲಿದೆ ರಹಸ್ಯ

ಪುನೀತ್‌ ರಾಜ್‌ಕುಮಾರ್‌ ಕೈಗೆ ಬ್ಯಾಂಡ್‌ ಕಟ್ಟಿದ್ದಾರೆ. ಇದು ಈಗ ಎಲ್ಲರ ಗಮನ ಸೆಳೆದಿದೆ. ಈ ಬ್ಯಾಂಡ್‌ ಹಿಂದೆ ಏನು ಕತೆ ಇದೆ ಎನ್ನುವ ಕುತೂಹಲ ಕೆರಳಿಸಿದೆ.

Vijaya Karnataka 1 Jun 2018, 12:10 pm
ಪುನೀತ್‌ ರಾಜ್‌ಕುಮಾರ್‌ ಅಭಿನಯದ ನಟ ಸಾರ್ವಭೌಮ ಚಿತ್ರದ ಪೋಸ್ಟರ್‌ ರಿಲೀಸ್‌ ಮಾಡಲಾಗಿದೆ. ಪುನೀತ್‌ ಕೈ ಮಾತ್ರ ಇರುವ ಪೊಸ್ಟರ್‌ ಇದು. ವಿಶೇಷ ಅಂದ್ರೆ ಇದರಲ್ಲಿ ಕಪ್ಪು ಬಣ್ಣದ ದಾರದಿಂದ ತಯಾರಿಸಿದ ಬ್ರೇಸ್‌ಲೆಟ್‌ ಕೈಗೆ ಕಟ್ಟಿದ್ದಾರೆ. ಇದು ಸುಮ್ಮನೆ ಕಟ್ಟಿರೋದಲ್ಲ. ಇದರ ಹಿಂದೆ ಒಂದು ಕತೆ ಇದೆ ಎಂದಿದ್ದಾರೆ ಚಿತ್ರದ ನಿರ್ದೇಶಕ ಪವನ್‌ ಒಡೆಯರ್‌.
Vijaya Karnataka Web puneeth


'ಚಿತ್ರದಲ್ಲಿ ಸ್ಟೈಲಾಗಿ ಇರಲಿ ಎಂದು ಇದನ್ನು ಕಟ್ಟಿದ್ದಲ್ಲ. ಇದಕ್ಕೆ ಕಾರಣ ಇದೆ. ಈ ಕಪ್ಪು ದಾರ ಸಿನಿಮಾದಲ್ಲಿ ಪ್ರಮುಖ ಪಾತ್ರವಾಗಿದೆ. ಈಗಲೇ ಅದನ್ನು ಹೇಳುವುದು ಸಾಧ್ಯವಿಲ್ಲ. ಸಿನಿಮಾದಲ್ಲಿ ಇದು ರಿವೀಲ್‌ ಆಗುತ್ತೆ' ಎನ್ನುತ್ತಾರೆ ನಿರ್ದೇಶಕ ಪವನ್‌ ಒಡೆಯರ್‌.

ಸಿನಿಮಾ ನೋಡುವಾಗ ಪ್ರೇಕ್ಷಕನಿಗೆ ಥ್ರಿಲ್‌ ನೀಡುವ ಸಲುವಾಗಿ ಈ ಸಂಗತಿಯನ್ನು ಗುಟ್ಟಾಗಿಟ್ಟಿದ್ದಾರಂತೆ. ಪುನೀತ್‌ ನಟ ಸಾರ್ವಭೌಮ ಚಿತ್ರದ ಶೂಟಿಂಗ್‌ ಪ್ರಾರಂಭವಾದಾಗಿನಿಂದ ಈ ದಾರವನ್ನು ಕಟ್ಟಿಕೊಂಡಿದ್ದಾರೆ. ಅದೃಷ್ಟ ತಂದುಕೊಡುತ್ತದೆ ಎಂಬ ನಂಬಿಕೆಯೂ ಇರಬಹುದೇ ಎಂಬ ಕುತೂಹಲವೂ ಇದೆ. ಚಿತ್ರದಲ್ಲಿ ಪುನೀತ್‌ ಫೋಟೋಗ್ರಾಫರ್‌ ಆಗಿ ನಟಿಸಿದ್ದಾರೆ. ತಂದೆಯಾಗಿ ಹಿರಿಯ ನಟ ಶ್ರೀನಿವಾಸ್‌ ಮೂರ್ತಿ ನಟಿಸುತ್ತಿದ್ದು, ಈ ಕಪ್ಪುದಾರವನ್ನು ಅವರೇ ಗಿಫ್ಟ್‌ ಆಗಿ ನೀಡಿದ್ದಾರೆ ಎಂದು ಗೊತ್ತಾಗಿದೆ. ಹಾಗಾಗಿ ದುಷ್ಟಶಕ್ತಿಯನ್ನು ಎದುರಿಸಲು ಇದನ್ನು ಕಟ್ಟುತ್ತಾರಾ ಎಂಬ ಪ್ರಶ್ನೆಯ ಹಿಂದೆ ಇದು ಹಾರರ್‌ ಸಿನಿಮಾ ಇರಬಹುದೇ ಎಂಬು ಅನುಮಾನವನ್ನೂ ಹುಟ್ಟುಹಾಕಿದೆ.

ರಣವಿಕ್ರಮ ಚಿತ್ರದಲ್ಲಿ ಪುನೀತ್‌ಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ಪವನ್‌ ಒಡೆಯರ್‌ ಈಗ ಮತ್ತೊಮ್ಮೆ ಆ ಅವಕಾಶ ಪಡೆದಿದ್ದಾರೆ. ಇದು ಸ್ವಮೇಕ್‌ ಚಿತ್ರ ಎನ್ನುತ್ತಾರೆ ಅವರು. 'ರಿಮೇಕ್‌ ಮಾಡೋಕೆ ನನಗೆ ಮನಸ್ಸಾಗುತ್ತಿಲ್ಲ. ಹಾಗಾಗಿ ರಿಮೇಕ್‌ ಮಾಡೋಲ್ಲ ಎನ್ನುತ್ತಾರೆ ಅವರು. ಶೇ. 40 ರಷ್ಟು ಚಿತ್ರೀರಕಣ ಪೂರ್ಣಗೊಂಡಿದೆ. ಬಳ್ಳಾರಿಯಲ್ಲಿ ಮುಂದಿನ ಚಿತ್ರೀಕರಣ ಶೆಡ್ಯೂಲ್‌ ಹಾಕಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌