ಆ್ಯಪ್ನಗರ

ಧಾರವಾಡದ ಜನತೆಯ ಪ್ರೀತಿ ದೊಡ್ಡದು ಎಂದು ಯುವರತ್ನ ನಿರ್ದೇಶಕ

ಧಾರವಾಡದಲ್ಲಿ ಚಿತ್ರೀಕರಣ ಮಾಡುವುದು ನನಗೆ ಬಹಳ ಇಷ್ಟ. ಇಲ್ಲಿನ ಜನ ನಮಗೆ ಮತ್ತು ನಮ್ಮ ತಂಡಕ್ಕೆ ಬಹಳ ಪ್ರೋತ್ಸಾಹ ನೀಡುತ್ತಾರೆ. ಜತೆಗೆ ಅಣ್ಣಾವ್ರ ಕುಟುಂಬಕ್ಕೆ ಧಾರವಾಡದ ಜನ ನೀಡುವ ಗೌರವ ಬಹಳ ದೊಡ್ಡದು ಎಂದಿದ್ದಾರೆ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌.

Vijaya Karnataka 26 Jun 2019, 11:18 am
ಪುನೀತ್‌ ನಟನೆಯ ಯುವರತ್ನ ಸಿನಿಮಾದ ಚಿತ್ರೀಕರಣ ಧಾರವಾಡದಲ್ಲಿ ಇಂದಿನಿಂದ (ಜೂ) ನಡೆಯಲಿದೆ. ಈ ಸಮಯದಲ್ಲಿ ಲವಲವಿಕೆ ಜತೆ ಮಾತನಾಡಿದ ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ಧಾರವಾಡದ ಜನ ತೋರಿಸುವ ಪ್ರೀತಿ ಬಹಳ ದೊಡ್ಡದು ಎಂದಿದ್ದಾರೆ.
Vijaya Karnataka Web yuvaratna


'ನಾನು ಈ ಕೆಲ ದಿನಗಳ ಹಿಂದೆಯೂ ಧಾರವಾಡದಲ್ಲಿ ಯುವರತ್ನ ಸಿನಿಮಾದ ಚಿತ್ರೀಕರಣ ಮಾಡಿದ್ದೆ. ಆಗ ಜನ ಕೊಟ್ಟ ಪ್ರೋತ್ಸಾಹ ಬಹಳ ದೊಡ್ಡದು. ನಾನು ಎಂದಿಗೂ ಅದನ್ನು ಮರೆಯುವುದಿಲ್ಲ. ಇಂದಿನಿಂದ ಆರಂಭವಾಗುವ ಚಿತ್ರೀಕರಣ ಜುಲೈ 6 ರವರೆಗೂ ನಡೆಯುತ್ತದೆ. ಧಾರವಾಡ ವಿಶ್ವವಿದ್ಯಾಲಯ, ಕೆಸಿಡಿಯಲ್ಲಿ ಚಿತ್ರೀಕರಣ ಮಾಡುತ್ತೇವೆ'ಎನ್ನುತ್ತಾರೆ ಅವರು.

'ನಾನು ಈ ಕಥೆ ಬರೆದಾಗ ಈ ಸನ್ನಿವೇಶಗಳಿಗೆ ಹೇರೆಟೇಜ್‌ ಬಿಲ್ಡಿಂಗ್‌ನ ಅವಶ್ಯಕತೆ ಇತ್ತು. ನನಗೆ ಡೆಹ್ರಾಡೂನ್‌, ಪೂನಾ, ಮುಂಬಯಿ ಹೀಗೆ ಸಾಕಷ್ಟು ಕಡೆಗಳಲ್ಲಿ ನನಗೆ ಆಪ್ಷನ್‌ ಇದ್ದರೂ ನಾನು ಧಾರವಾಡ ವಿವಿ, ಮೈಸೂರಿನ ಮಹಾರಾಜ ಕಾಲೇಜಿನ ಕಟ್ಟಡದಲ್ಲಿ ಚಿತ್ರೀಕರಣ ಮಾಡಿದ್ದೇನೆ. ಮೇಲಾಗಿ ನನಗೆ ಧಾರವಾಡ ವಿವಿ ಮೇಲೆ ಒಂದು ರೀತಿಯ ಪ್ರೀತಿ ಇದೆ. ಇದೇ ವಿವಿಯಲ್ಲಿ ಜ್ಞಾನಪೀಠ ಪುರಸ್ಕೃತರಾದ ಸಾಹಿತಿಗಳು ಇಲ್ಲಿ ಓಡಾಡಿದ್ದಾರೆ, ಜತೆಗೆ ಇಲ್ಲಿನ ವಾತಾವಾರಣ ಚಿತ್ರೀಕರಣಕ್ಕೆ ಪೂರಕವಾಗಿದೆ. ಹಾಗಾಗಿ ನಾನು ಯುವರತ್ನ ಸಿನಿಮಾವನ್ನು ಹೆಚ್ಚು ದಿನಗಳ ಕಾಲ ಇಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದೇನೆ'ಎನ್ನುತ್ತಾರವರು.

ಪುನೀತ್‌ ರಾಜ್‌ಕುಮಾರ್‌ಗೆ ಈ ಸಿನಿಮಾದಲ್ಲಿ ಸಯ್ಯೇಶಾ ಸೈಗಲ್‌ ಜೋಡಿಯಾಗಿದ್ದಾರೆ. ರಂಗಾಯಣ ರಘು, ರಾಧಿಕಾ ಶರತ್‌ಕುಮಾರ್‌, ಡಾಲಿ ಧನಂಜಯ ಸಹ ನಟಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌