ಅವರ್ ಬಿಟ್ ಅವರ್ ಬಿಟ್ ಅವರಾರಯರು ಎಂದಂತೆ ಈಗ ಕೊನೆÜಗೂ ಜಾನಿ ಜಾನಿ ಎಸ್ ಪಾಪ ಚಿತ್ರಕ್ಕೆ ಹೊಸ ನಾಯಕಿ ಸಿಕ್ಕಿದ್ದಾರೆ. ದುನಿಯಾ ವಿಜಯ್ ಅಭಿನಯದ ಚಿತ್ರದಲ್ಲಿ ರಚಿತಾ ರಾಮ್ ಜಾಗಕ್ಕೆ ಶ್ರದ್ಧಾ ಶ್ರೀನಾಥ್ ಬಂದಿದ್ದಾರೆ.
ಪ್ರೀತಮ್ ಗುಬ್ಬಿ ನಿರ್ದೇಶನದ ಜಾನಿ ಜಾನಿ ಎಸ್ ಪಪ್ಪಾ ಸೆಟ್ಟೇರಲು ಸಿದ್ಧವಾಗಿದೆ. ಚಿತ್ರಕ್ಕಾಗಿ 10 ಎಕರೆ ಪ್ರದೇಶದಲ್ಲಿ ದೊಡ್ಡ ಸೆಟ್ ಹಾಕಿ ಕಾಲೋನಿಯೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ನಾಯಕಿ ಪಾತ್ರಕ್ಕಾಗಿ ಹೊಸ ನಟಿಯನ್ನು ಹುಡುಕುತ್ತಿದ್ದ ಚಿತ್ರ ತಂಡ ಶ್ರದ್ಧಾ ಶ್ರೀನಾಥ್ರನ್ನು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದೆ. ರಮ್ಯಾ ನಾಯಕಿಯಾಗಿ ನಟಿಸಿದ್ದ ಜಾನಿ ಮೇರಾ ನಾಮ್ ಚಿತ್ರದ ಸೀಕ್ವೆಲ್ ಇದು.
'ರಮ್ಯಾ ಅವರ ಸ್ಥಾನವನ್ನು ಯಾರೂ ತುಂಬುವುದು ಸಾಧ್ಯವಿಲ್ಲ. ಆದರೆ ಶ್ರದ್ಧಾ ಶ್ರೀನಾಥ್ ಕೂಡಾ ಒಳ್ಳೆಯ ನಟಿ. ಹಾಗಾಗಿ ಅವರು ಈ ಚಿತ್ರದಲ್ಲಿ ನಟಿಸುತ್ತಿರುವುದು ನಮಗೆ ಥ್ರಿಲ್ ನೀಡಿದೆ' ಎಂದಿದ್ದಾರೆ ನಿರ್ದೇಶಕ ಪ್ರೀತಂ ಗುಬ್ಬಿ. ಚಿತ್ರದಲ್ಲಿ ಶ್ರದ್ಧಾ ಶ್ರೀಮಂತ ಮನೆಯ ಹುಡುಗಿಯಾಗಿ ನಟಿಸಲಿದ್ದಾರೆ. ಚಿತ್ರ ಆಗಸ್ಟ್ನಲ್ಲಿ ಸೆಟ್ಟೇರುವ ಸಾಧ್ಯತೆಗಳಿವೆ. ಚಿತ್ರಕ್ಕಾಗಿ ದುನಿಯಾ ವಿಜಿ 10 ಕೆ.ಜಿ ತೂಕ ಇಳಿಸಿಕೊಳ್ಳಬೇಕಾಗಿದೆ.
ದುನಿಯಾ ವಿಜಯ್ ಅಭಿನಯದ ಕನಕ ಮತ್ತು ಜಾನಿ ಜಾನಿ ಎಸ್ ಪಪ್ಪಾ ಚಿತ್ರಗಳಿಗೆ ಮೊದಲು ರಚಿತಾ ರಾಮ್ ಆಯ್ಕೆಯಾಗಿದ್ದರು. ಕೊನೆಗೆ ಕನಕದಿಂದ ರಚಿತಾ ರಾಮ್ರನ್ನು ಕೈಬಿಡಲಾಯಿತು. ಈಗ ಜಾನಿ ಜಾನಿ ಎಸ್ ಪಪ್ಪಾ ಚಿತ್ರದಿಂದ ರಚಿತಾ ಹೊರನಡೆದಿದ್ದಾರೆ. ಕನಕ ಚಿತ್ರ ತಪ್ಪಿದ್ದಕ್ಕೆ ರಚಿತಾ ಈ ನಿರ್ಧಾರಕ್ಕೆ ಬರಲಾಗಿದೆ ಎಂಬ ಮಾತು ಕೇಳಿಬಂದಿದೆ.