ಆ್ಯಪ್ನಗರ

ಕಾಶಿಗೆ ಹೊರಟ ರಾಧಿಕಾ

ಈಗಾಗಲೇ ರಮೇಶ್‌ ಅರವಿಂದ್‌ ನಟನೆಯ ದೃಶ್ಯಗಳನ್ನು ಕಾಶಿಯಲ್ಲಿ ಸೆರೆ ಹಿಡಿದಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ರಮೇಶ್‌ ತನಿಖಾಧಿಕಾರಿಯಾಗಿ ನಟಿಸುತ್ತಿದ್ದು, ಭೈರಾದೇವಿ ಹುಡುಕಿಕೊಂಡು ಅವರು ಅಲ್ಲಿಗೆ ಹೊರಡುತ್ತಾರಂತೆ.

Vijaya Karnataka 8 Nov 2018, 9:17 am
ನಟಿ ರಾಧಿಕಾ ಕುಮಾರಸ್ವಾಮಿ ಕಾಶಿಯಾತ್ರೆ ಮಾಡುತ್ತಿದ್ದಾರೆ. ಈ ಯಾತ್ರೆ ಯಾಕೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಂದಹಾಗೆ ಅವರು ಈಗ 'ಭೈರಾದೇವಿ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಭೈರಾದೇವಿ ಇರುವುದು ಕಾಶಿಯಲ್ಲಿ. ಹಾಗಾಗಿ ಅಲ್ಲಿಯೇ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕರು.
Vijaya Karnataka Web Radhika


ಈಗಾಗಲೇ ರಮೇಶ್‌ ಅರವಿಂದ್‌ ನಟನೆಯ ದೃಶ್ಯಗಳನ್ನು ಕಾಶಿಯಲ್ಲಿ ಸೆರೆ ಹಿಡಿದಿದ್ದಾರಂತೆ ನಿರ್ದೇಶಕರು. ಈ ಸಿನಿಮಾದಲ್ಲಿ ರಮೇಶ್‌ ತನಿಖಾಧಿಕಾರಿಯಾಗಿ ನಟಿಸುತ್ತಿದ್ದು, ಭೈರಾದೇವಿ ಹುಡುಕಿಕೊಂಡು ಅವರು ಅಲ್ಲಿಗೆ ಹೊರಡುತ್ತಾರಂತೆ.

'ಕಾಶಿಯ ಗಂಗಾನದಲ್ಲಿ ದಿನಕ್ಕೂ ನೂರಕ್ಕೂ ಹೆಚ್ಚು ಶವಸಂಸ್ಕಾರ ನಡೆಯುತ್ತದೆ. ಅಲ್ಲಿಯೇ ಶೂಟಿಂಗ್‌ ಮಾಡಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ಮೊದಲ ಬಾರಿಗೆ ಅದನ್ನು ನಮ್ಮ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ. ಆದಷ್ಟು ನೈಜ ಎನ್ನುವಂತೆ ದೃಶ್ಯಗಳನ್ನು ಕಟ್ಟಿಕೊಡುತ್ತಿದ್ದೇವೆ-' ನಿರ್ದೇಶಕ ಶ್ರೀಜೈ.

ಈ ಸಿನಿಮಾ ಶುರುವಾಗುವುದೇ ಕಾಶಿಯಿಂದ. ಗಂಗಾ ನದಿ ಕೂಡ ಸಿನಿಮಾದಲ್ಲಿ ಪ್ರಮುಖವಾದ ಪಾತ್ರ ನಿರ್ವಹಿಸಲಿದೆಯಂತೆ. ಹಾಗಾಗಿಯೇ ಇಡೀ ಟೀಮ್‌ ಕಟ್ಟಿಕೊಂಡು ಕಾಶಿಯಲ್ಲಿ ಬೀಡು ಬಿಟ್ಟಿದ್ದಾರೆ ನಿರ್ದೇಶಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌