ಆ್ಯಪ್ನಗರ

ಯಶ್-ರಾಧಿಕಾ 'ಪಾಪು'ಗೆ ಸಿಗಲಿದೆ ರೆಬಲ್ ಸ್ಟಾರ್ ಅಂಬರೀಷ್ ಗಿಫ್ಟ್

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ದಂಪತಿಗಳ ಮುದ್ದು ಮಗುವಿಗೆ ದಿವಂಗತ ನಟ, ರೆಬಲ್ ಸ್ಟಾರ್ ಅಂಬರೀಷ್ ಅವರು ಪ್ರೀತಿಯಿಂದ ಬುಕ್ ಮಾಡಿದ್ದ ತೊಟ್ಟಿಲು ಸದ್ಯದಲ್ಲೇ ಯಶ್ ಮನೆ ಸೇರಲಿದೆ. ಈ ತೊಟ್ಟಿಲಿಗೆ ಇತಿಹಾಸ ಖ್ಯಾತಿಯ 'ಕಿತ್ತೂರಿನಲ್ಲಿ' ನಾಳೆ, 'ಫೆಬ್ರವರಿ 16ರಂದು' ವಿಶೇಷ ಪೂಜೆ ನಡೆಯಲಿದೆ.

Vijaya Karnataka Web 15 Feb 2019, 12:35 pm
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ದಂಪತಿಗಳ ಮುದ್ದು ಮಗುವಿಗೆ ದಿವಂಗತ ನಟ, ರೆಬಲ್ ಸ್ಟಾರ್ ಅಂಬರೀಷ್ ಅವರು ಪ್ರೀತಿಯಿಂದ ಬುಕ್ ಮಾಡಿದ್ದ ತೊಟ್ಟಿಲು ಸದ್ಯದಲ್ಲೇ ಯಶ್ ಮನೆ ಸೇರಲಿದೆ. ಈ ತೊಟ್ಟಿಲಿಗೆ ಇತಿಹಾಸ ಖ್ಯಾತಿಯ 'ಕಿತ್ತೂರಿನಲ್ಲಿ' ನಾಳೆ, 'ಫೆಬ್ರವರಿ 16ರಂದು' ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಹಾಗೂ ಬೇರೆ ಬೇರೆ ಮಠಾಧೀಶರ ಆಶೀರ್ವಾದಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಆ ಬಳಿಕ ಸಂಜೆ 4 ಗಂಟೆಗೆ ಅಲ್ಲಿಂದ ಹೊರಟು ಆ ತೊಟ್ಟಿಲನ್ನು ಬೆಂಗಳೂರಿಗೆ ತರಲಾಗುವುದು.
Vijaya Karnataka Web yash-radhika15


ಕನ್ನಡದ ರೆಬಲ್ ಸ್ಟಾರ್ ಅಂಬರೀಷ್ ಅವರು ತಾವು ಸಾಯುವ ಮೊದಲು, ಯಶ್ ಮಡದಿ ರಾಧಿಕಾ ಗರ್ಭಿಣಿಯಾಗಿದ್ದ ಸಮಯದಲ್ಲೇ ಅವರ ಮಗುವಿಗೆಂದು ದುಬಾರಿ ವೆಚ್ಚದ ತೊಟ್ಟಿಲನ್ನು ಬುಕ್ ಮಾಡಿದ್ದರಂತೆ. ಅಂಬರೀಷ್ ಅವರ ಆಪ್ತರಾದ ಉದ್ಯಮಿ ನಾರಾಯಣ ಕಲಾಲ್ ಅವರಿಗೆ ಈ ಜವಾಬ್ದಾರಿಯವನ್ನು ಅಂಬರೀಷ್ ಅವರು ವಹಿಸಿದ್ದರಂತೆ. ಆದರೆ, ಯಶ್-ರಾಧಿಕಾ ಮಗು ನೋಡುವ ಮೊದಲೇ ಅವರು ಇಹಲೋಕ ತ್ಯಜಿಸಿದ್ದಾರೆ. ಅವರ ಆಸೆಯಂತೆ ಈಗ ತೊಟ್ಟಿಲು ಸಿದ್ಧವಾಗಿ 'ರಾಕಿಂಗ್-ರಾಧಿಕಾ' ಮಗು ಅದನ್ನು ಪಡೆಯಲಿದೆ.

ಧಾರವಾಡ ಜಿಲ್ಲೆ, ಕಲಘಟಕಿಯ ಶ್ರೀಧರ್ ಸಾಹುಕಾರ ಅವರು ಈ ತೊಟ್ಟಿಲನ್ನು ಮಾಡಿದ್ದು, ಅದರ ಮೇಲೆ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳ ಕಥೆಗಳನ್ನು ಸಾರುವ ಚಿತ್ರಗಳನ್ನು ಕೆತ್ತಲಾಗಿದೆಯಂತೆ. ಇಂಥ ಶ್ರೇಷ್ಠ ತೊಟ್ಟಿಲು ಸದ್ಯದಲ್ಲೇ ಯಶ್-ರಾಧಿಕಾ ದಂಪತಿಗಳ ಕೈ ಸೇರಲಿದ್ದು, ಅವರ ಮುದ್ದು ಮಗು ಅಂಬರೀಷ್ ಅವರ ಆಶೀರ್ವಾದವನ್ನೂ ಪೆದು ಆ ತೊಟ್ಟಲಿನಲ್ಲಿ ಆಟವಾಡಲಿದೆ.

ಅಂದಹಾಗೆ, ರಾಕಿಂಗ್ ಸ್ಟಾರ್ ಯಶ್ ನಾಯಕತ್ವದ 'ಕೆಜಿಎಫ್' ಚಿತ್ರವು ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿ ಇನ್ನೂ ಸ್ವಲ್ಪವೂ ಜನಪ್ರಿಯತೆ ಕಡಿಮೆಯಾಗದೇ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಈಗಾಗಲೆ ಸ್ಯಾಂಡಲ್‌ವುಡ್‌ನ ಎಲ್ಲ ಧಾಖಲೆಗಳನ್ನು ಪುಡಿಪುಡಿ ಮಾಡಿ ಇತಿಹಾಸ ನಿರ್ಮಿಸಿರುವ 'ಕೆಜಿಎಫ್' ಚಿತ್ರವು ಇನ್ನೂ ಏನೇನು ಸಾಧನೆ ಮಾಡಲಿದೆಯೋ ಎನೋ!

ಇನ್ನು, ಕನ್ನಡದ ಪ್ರಬುದ್ಧ ಕಲಾವಿದೆ ನಟಿ ರಾಧಿಕಾ ಪಂಡಿತ್ ಅವರು ಮದುವೆ ಬಳಿಕ ಮೊಲದ ಬಾರಿಗೆ ನಟಿಸಿರುವ 'ಆದಿ ಲಕ್ಷ್ಮೀ ಪುರಾಣ' ಚಿತ್ರವು ಸದ್ಯದಲ್ಲೇ ಬಿಡುಗಡೆಯಾಗಲಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಚಿತ್ರವನ್ನು ಪ್ರಿಯಾ ನಿರ್ದೇಶಿಸಿದ್ದು 'ರಂಗಿ ತರಂಗ' ಖ್ಯಾತಿಯ ನಿರೂಪ್ ಭಂಡಾರಿ ಈ ಚಿತ್ರದ ನಾಯಕರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌