ಆ್ಯಪ್ನಗರ

ಹ್ಯಾಪಿ ನ್ಯೂ ಯಿಯರ್‌ ಚಿತ್ರಕ್ಕೆ ಇಷ್ಟಪಟ್ಟುಸಂಗೀತ ಮಾಡಿದ್ದೇನೆ: ರಘು ದೀಕ್ಷಿತ್‌

ಹ್ಯಾಪಿ ನ್ಯೂ ಯಿಯರ್‌ ಚಿತ್ರಕ್ಕೆ ಇಷ್ಟಪಟ್ಟು ಸಂಗೀತ ಮಾಡಿದ್ದೇನೆ: ರಘು ದೀಕ್ಷಿತ್‌ ಹ್ಯಾಪಿ ನ್ಯೂ ಯಿಯರ್‌ ಚಿತ್ರಕ್ಕೆ ಸಂಗೀತ ನೀಡುವ ಮೂಲಕ ಸ್ಯಾಂಡಲ್‌ವುಡ್‌ಗೆ ...

Vijaya Karnataka Web 4 May 2017, 4:00 am

-ಈ ಚಿತ್ರದಲ್ಲಿ ಸಂಗೀತ ಹೇಗಿದೆ? ನಿಮ್ಮ ಕಮ್‌ಬ್ಯಾಕ್‌ನಿಂದ ಏನು ನಿರೀಕ್ಷಿಸಬಹುದು?

ತುಂಬಾ ಇಷ್ಟಪಟ್ಟು ಈ ಚಿತ್ರಕ್ಕೆ ಸಂಗೀತ ಮಾಡಿದ್ದೇನೆ. ಯೋಚಿಸಿ, ಧ್ಯಾನಿಸಿ ಟ್ಯೂನ್‌ಗಳನ್ನು ಮಾಡಿದ್ದೇನೆ. ಇಡೀ ಸಿನಿಮಾ ಸಂಗೀತದೊಂದಿಗೆ ಹಿತವಾಗಿ ಸಾಗುತ್ತದೆ. ಚಿತ್ರದ ಐದೂ ಕತೆಗಳನ್ನು ಸಂಗೀತವೇ ಕನೆಕ್ಟ್ ಮಾಡಿಕೊಂಡು ಹೋಗುತ್ತದೆ. ನನ್ನ ಕಮ್‌ಬ್ಯಾಕ್‌ ಒಂದು ಅತ್ಯುತ್ತಮ ಚಿತ್ರದೊಂದಿಗೆ ಆಗಿದೆ ಎಂಬುದೇ ಸಂತೋಷ.

-ಹಾಗಾದರೆ ಈ ಚಿತ್ರದಲ್ಲಿ ರಘು ದೀಕ್ಷಿತ್‌ ವಿರಾಟ್‌ರೂಪವನ್ನು ನೋಡಬಹುದೆ?

ಖಂಡಿತಾ. ನನ್ನ ಸಂಗೀತದ ಎನರ್ಜಿ, ಖದರ್‌ ಚಿತ್ರದಲ್ಲಿ ಕಾಣಬಹುದು. ವಿರಾಟ್‌ರೂಪ ಅನ್ನುವುದಕ್ಕಿಂತ ನನ್ನದೇ ಶೈಲಿಯ ಸಂಗೀತದ ಲೋಕವೇ ಅನಾವರಣಗೊಂಡಿದೆ ಎಂದು ಹೇಳಬಲ್ಲೆ. ನನಗೆ ಇಷ್ಟವಾಗದ ಹಾಡುಗಳನ್ನು ನಾನು ಯಾವುದೇ ಕಾರಣಕ್ಕೂ ನಿರ್ದೇಶಕರಿಗೆ ಕೊಡುವುದೇ ಇಲ್ಲ.

ಧಿ-ಹಾಡುಗಳು ಪ್ರೇಕ್ಷಕರನ್ನು ಹೇಗೆ ಮೋಡಿ ಮಾಡುತ್ತವೆ?

ಎಲ್ಲ ಹಾಡುಗಳು ಚೆನ್ನಾಗಿ ಬಂದಿವೆ. ಅಡ್ಡ ಬಿದ್ದೆ ಮಾದೇಶ, ಸಾರೆಗಮಪದನಿ, ಬದುಕೇ ನೀನೆಂಥ ನಾಟಕ, ಪ್ರೀತಿಯ ಹೆಸರೇ ನೀನು... ಸೇರಿ ಎಲ್ಲ ಹಾಡುಗಳು ಸೊಗಸಾಗಿ ಬಂದಿವೆ. ಬೆಂಗಳೂರಿನಲ್ಲಿ ಕಿವಿಗೆ ಬೀಳುವ ಅಪ್ಪಟ ದೇಸಿ ಶೈಲಿಯ ಹಾಡುಗಳು ಪ್ರೇಕ್ಷಕರನ್ನು ಬೇರೆ ಲೋಕಕ್ಕೆ ಕರೆದೊಯ್ಯುತ್ತವೆ. ಸಿನಿಮಾ ಮುಗಿದ ಮೇಲೆ ಪ್ರತಿಯೊಬ್ಬರು ಇದು ನನ್ನದೇ ಹಾಡು ಎಂದು ಗುನುವಂಥ ಶಕ್ತಿ ಟ್ಯೂನ್‌ಗಳಲ್ಲಿದೆ.

-ಇಷ್ಟು ನಂಬಿಕೆಯಿಂದ ಹೇಳ್ತುತಿದ್ದೀರಿ. ಹಾಗಾದರೆ ನಿರ್ದೇಶಕರಿಂದ ಯಾವುದೇ ಕಿರಿಕ್‌ ಇರಲಿಲ್ಲವಾ?

ಇಲ್ಲ. ನನ್ನ ಮ್ಯೂಸಿಕ್‌ ಜರ್ನಿಯಲ್ಲಿ ನನಗೆ ಸಿಕ್ಕಿರುವ ಮಧುರ ಸ್ವರ ಪನ್ನಗ. ಅವನಿಗೂ ಸಂಗೀತ ಅಚ್ಚುಮೆಚ್ಚು. ಕತೆಯೂ ಹಾಗೆಯೇ ಇತ್ತು. ತಾರಾಗಣವೂ ಚೆನ್ನಾಗಿದೆ. ಹೀಗಾಗಿ ಸಂಗೀತವೂ ಚೆನ್ನಾಗಿ ಮೂಡಿ ಬಂದಿದೆ. ಯಾವುದೇ ಹಂತದಲ್ಲೂ ನಿರ್ದೇಶಕರಿಂದ ಒತ್ತಡ ಇರಲಿಲ್ಲ. ನನ್ನ ಹಾಡುಗಳಿಗೆ ವಿಶುವಲ್ಸ್‌ನಿಂದ ಕಂಪ್ಲೀಟ್‌ ಜಸ್ಟೀಸ್‌ ಸಿಕ್ಕಿದೆ.

-ನಿಮ್ಮ ಕಮ್‌ಬ್ಯಾಕ್‌ ಚಿತ್ರವಾಗಿರೋದ್ರಿಂದ ಈ ಚಿತ್ರದ ಬಗ್ಗೆ ನಿಮ್ಮ ನಿರೀಕ್ಷೆ ಹೇಗಿದೆ?

ಬರೀ ಜಾಸ್ತಿ ಅಲ್ಲ. ಸಿಕ್ಕಾಪಟ್ಟೆ ಇದೆ. ಯಾಕೆಂದ್ರೆ ಅತ್ಯುತ್ತಮ ತಂಡ ಮಾಡಿರುವ ಚಿತ್ರವಿದು. ಕತೆ, ಚಿತ್ರಕತೆ, ತಾರಾಗಣ, ಸಂಗೀತ, ಸಂಕಲನ ಎಲ್ಲವೂ ಅದ್ಭುತ. ಸಂಕಲನಕಾರ ದೀಪು ನಾಲ್ಕು ಸಲ ಚಿತ್ರವನ್ನು ಎಡಿಟ್‌ ಮಾಡಿದ್ದಾರೆ. ಹೀಗಾಗಿ ಎಲ್ಲೂ ಒಂದೇ ಒಂದು ಅನಗತ್ಯ ಫ್ರೇಮು ಚಿತ್ರದಲ್ಲಿ ಇಲ್ಲ. ಎಲ್ಲರೂ ಇಷ್ಟಪಡುವ ಹಾಗೂ ಬಹಳ ಕಾಲ ನೆನಪಲ್ಲಿ ಉಳಿಯುವ ಚಿತ್ರ ಇದಾಗಲಿದೆ.

Vijaya Karnataka Web raghu dixit interview
ಹ್ಯಾಪಿ ನ್ಯೂ ಯಿಯರ್‌ ಚಿತ್ರಕ್ಕೆ ಇಷ್ಟಪಟ್ಟುಸಂಗೀತ ಮಾಡಿದ್ದೇನೆ: ರಘು ದೀಕ್ಷಿತ್‌

----------

ಪನ್ನಗ ನನಗೆ ತುಂಬಾ ಫ್ರೀಡಂ ಕೊಟ್ಟಿದ್ದರು. ಸಂಗೀತಕ್ಕೂ ಹೊರತುಪಡಿಸಿ ಬೇರೆ ಸಲಹೆಗಳನ್ನು ಕೊಟ್ಟರೂ ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದರು. ಯಾವುದಾದ್ರೂ ದೃಶ್ಯ ಚೆನ್ನಾಗಿಲ್ಲವೆಂದರೆ ಅದನ್ನು ಎಡಿಟ್‌ ಮಾಡಿಸಿಬಿಡುತ್ತಿದ್ದರು.

-ರಘು ದೀಕ್ಷಿತ್‌, ಸಂಗೀತ ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌